ವಿಜಯಪುರ: ನಗರ ವಿಧಾನಸಭಾ ಮತಕ್ಷೇತ್ರದಲ್ಲಿರುವ ವಾರ್ಡ್ 29 ರ ವ್ಯಾಪ್ತಿಯ ಬಾರಾಕೋಟ್ರಿ ತಾಂಡಾದ ರೈಲ್ವೆ ಹಳಿಯ ಬಲಭಾಗದಲ್ಲಿ ವಾಸವಿರುವ ನಿವಾಸಿಗಳು ಮೂರು ದಶಕಗಳಿಂದ ಅನುಭವಿಸುತ್ತಿದ್ದ ವಿದ್ಯುತ್ ಸಮಸ್ಯೆಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಸೋಮವಾರ ಮುಕ್ತಿ ನೀಡಿದರು.
ತಾಂಡಾದ ಮರಗಮ್ಮ ದೇವಿ ಗುಡಿ ಹತ್ತಿರ ಪೂಜೆ ಸಲ್ಲಿಸಿ, ವಿದ್ಯುತ್ ಕಂಬದಲ್ಲಿನ ಬಟನ್ ಒತ್ತಿ ದೀಪ ಬೆಳಗಿಸುವ ಮೂಲಕ ನಿರಂತರ ವಿದ್ಯುತ್ ವ್ಯವಸ್ಥೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಜಮೀನಿಗೆ ನೀಡುವ ಅತ್ಯಲ್ಪ ವಿದ್ಯುತ್ ಪೂರೈಕೆಯಿಂದ ಕತ್ತಲೆಯಲ್ಲೇ ಬದುಕು ಸಾಗಿಸುತ್ತಿದ್ದ ಇಲ್ಲಿನ ನಿವಾಸಿಗಳಿಗೆ ವಿಜಯಪುರ ನಗರದಿಂದ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಮೂಲಕ ಕತ್ತಲೆಯ ಬದುಕಿನಿಂದ ಬೆಳಕಿಗೆ ತರುವ ಮಹತ್ತರ ಕಾರ್ಯ ಮಾಡಲಾಗಿದೆ ಎಂದರು.
ಮಕ್ಕಳಿಗೆ ಓದಲು, ವೃದ್ದರಿಗೆ ಸಂಚಾರ ಮಾಡಲು, ಮಹಿಳೆಯರಿಗೆ ಸುರಕ್ಷತೆ ದೃಷ್ಟಿಯಿಂದ ನಿರಂತರ ವಿದ್ಯುತ್ ವ್ಯವಸ್ಥೆ ಅತ್ಯವಶ್ಯಕವಾಗಿತ್ತು. ಈಗ ಆ ಕಾಲ ಕೂಡಿ ಬಂದಿದೆ ಎಂದು ತಿಳಿಸಿದರು.
ಇದೇ ವೇಳೆ ಅತ್ಯಂತ ಖುಷಿಯಲ್ಲಿರುವ ತಾಂಡಾದ ನಿವಾಸಿಗಳು ಶಾಸಕರನ್ನು ಸನ್ಮಾನಿಸುವ ಮೂಲಕ ಸಂತಸವನ್ನು ಹಂಚಿಕೊಂಡರು.
ತಾಂಡಾದ ಹಿರಿಯರಾದ ಪಾಂಡು ನಾಯಕ, ಮುಖಂಡರಾದ ಆನಂದ ರಾಠೋಡ, ಅಶೋಕ ರಾಠೋಡ, ಗಿರೀಶ ಬಿರಾದಾರ, ಕಿಶೋರ ಚವ್ಹಾಣ, ಈಶ್ವರ ನಾಯಕ, ಅಪ್ಪು ರಾಠೋಡ, ಮರಗಮ್ಮ ದೇವಸ್ಥಾನ ಪೂಜಾರಿ ಗಂಗಾರಾಮ ಪೂಜಾರಿ ಸೇರಿದಂತೆ ತಾಂಡಾದ ಮುಖಂಡರು, ಮಹಿಳೆಯರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
Subscribe to Updates
Get the latest creative news from FooBar about art, design and business.
ಬಾರಾಕೋಟ್ರಿ ತಾಂಡಾದ ವಿದ್ಯುತ್ ಸಮಸ್ಯೆಗೆ ಶಾಸಕ ಯತ್ನಾಳ ಮುಕ್ತಿ
Related Posts
Add A Comment

