ಕೆಂಭಾವಿ: ಸರ್ಕಾರದ ನಾಲ್ಕನೇ ಅಂಗವಾದ ಪತ್ರಿಕಾ ರಂಗವು, ಜನರ ಮತ್ತು ಜನತಂತ್ರ ವ್ಯವಸ್ಥೆಯ ನಡುವೆ ಸಂಪರ್ಕ ಸೇತುವೆಯಾಗಿ, ಸರ್ವರ ಹಿತಾಸಕ್ತಿ ಕಾಪಾಡುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸಲಿ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಹೇಳಿದರು.
ಪಟ್ಟಣದ ಶ್ರೀ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರ ಪತ್ರಕರ್ತರ ಬಳಗ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿಶೇಷ ಸನ್ಮಾನ, ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಜಿಲ್ಲಾ ಆಯುಷ್ ಇಲಾಖೆ ಹಾಗೂ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ನೈಜ ವರದಿ ಪ್ರಕಟಿಸುವ ಮೂಲಕ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡು, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಎತ್ತಿ ಹಿಡಿದು, ಸಾಮಾಜಿಕ, ಆರ್ಥಿಕ, ರಾಜಕೀಯ, ರಂಗದ ಓರೆ ಕೋರೆಗಳನ್ನು ತಿದ್ದಿ ತೀಡಿ ಬರೆಯುವ ಮೂಲಕ ಜನಮನ್ನಣೆ ಗಳಿಸಲಿ ಎಂದವರು, ಪಟ್ಟಣದ ಪತ್ರಕರ್ತರ ಬೇಡಿಕೆಗಳನ್ನು ಪೂರೈಸಲು ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.
ಕಲಬುರ್ಗಿ ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಸದಾನಂದ ಪೆರ್ಲಾ, ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಭೀಮಾಶಂಕರ ಜೋಶಿ, ವಿಶೇಷ ಉಪನ್ಯಾಸ ನೀಡಿ, ಪತ್ರಿಕಾ ರಂಗವು ನಡೆದು ಬಂದ ಹಾದಿ, ಇಂದು ಹೇಗೆ ಸಾಗುತ್ತಿದೆ ಎಂಬ ಹಲವು ವಿಚಾರಗಳು ಮೇಲೆ ಬೆಳಕು ಚೆಲ್ಲಿದರು.
ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ ಮಾತನಾಡಿದರು,
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಷ ಬ್ರ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು, ಗುಂಡಭಟ್ಟ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಖಾಜಾ ಕಲೀಮುದ್ದೀನ್ ಫರೀದ್ ಸುರಪುರ, ಪವನ ದೇಶಪಾಂಡೆ ಹುಣಸಗಿ, ಟಿ ನಾಗೇಂದ್ರ ಶಹಾಪುರ, ಕುಮಾರಸ್ವಾಮಿ ಕಲಾಲ ಗುರುಮಠಕಲ್, ಮಲ್ಲನಗೌಡ ಪಾಟೀಲ ಯಾದಗಿರಿ, ಮಲ್ಲಿಕಾರ್ಜುನ ಕಾಡಮನೋರ ವಡಗೇರಾ, ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಮುಖರಾದ ಮಾಜಿ ಜಿಪಂ ಅಧ್ಯಕ್ಷೆ ಸಿದ್ದನಗೌಡ ಪೋಲೀಸ್ ಪಾಟೀಲ್, ಜಿಪಂ ಉಪಾಧ್ಯಕ್ಷೆ ಶಂಕ್ರಣ್ಣ ವಣಿಕ್ಯಾಳ, ಎಸ್ ಎಂ ಬಿರಾದಾರ, ಶರಣಬಸವ ಡಿಗ್ಗಾವಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್, ವೈ ಟಿ ಪಾಟೀಲ, ಶ್ರೀನಿವಾಸಗೌಡ ಮಾಲಿ ಪಾಟೀಲ್ ಯಾಳಗಿ, ಅರುಣೋದಯ ಸೊನ್ನದ, ಚಂದ್ರಮೌಳಿ ಮಾಲಿ ಪಾಟೀಲ್, ಶರಣು ಗದ್ದುಗೆ, ಮಹಿಪಾಲರಡ್ಢಿ ಡಿಗ್ಗಾವಿ, ರವಿಶಂಕರ ಸೊನ್ನದ, ಆರಿಫ್ ಖಾಜಿ, ವಿಲಾಸ್ ದೇಶಪಾಂಡೆ, ಶ್ರೀನಿವಾಸ ಜಾಲವಾದಿ, ಎನ್ ಎಸ್ ಕುಲ್ಕರ್ಣಿ, ತಹಸೀಲ್ದಾರ್ ವಿಜಯಕುಮಾರ, ಪುರಸಭೆ ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ಸೇರಿದಂತೆ ವಿವಿಧ ಪತ್ರಿಕೆಗಳ ಪತ್ರಕರ್ತರು ಉಪಸ್ಥಿತರಿದ್ದರು.
ಕುಮಾರಿ ಅನಘಾ ಪವನ ಕುಲ್ಕರ್ಣಿ ಇವರಿಂದ ಭರತನಾಟ್ಯ ಮೂಡಿ ಬಂತು. ಹಳ್ಳೇರಾವ್ ಕುಲ್ಕರ್ಣಿಯವರ ಕುಂಚಗಾಯನ ಕಣ್ಮನ ಸೆಳೆಯುವಂತಿತ್ತು. ಖ್ಯಾತ ಹಿಂದುಸ್ತಾನಿ ಗಾಯಕ ಬಸವರಾಜ ಬಂಟನೂರ, ಯಮನೇಶ ಯಾಳಗಿ ಹಾಗೂ ಶರಣಕುಮಾರ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಡಾ.ಯಂಕನಗೌಡ ಪಾಟೀಲ ನಿರೂಪಿಸಿದರು, ಡಿ ಸಿ ಪಾಟೀಲ್ ಸ್ವಾಗತಿಸಿದರು, ವೀರೇಶ ರೆಡ್ಡಿ ಯಾಳಗಿ ವಂದಿಸಿದರು.
Subscribe to Updates
Get the latest creative news from FooBar about art, design and business.
ಸುದ್ದಿ ಮಾಧ್ಯಮಗಳು ಸಂಪರ್ಕ ಸೇತುವೆಯಾಗಲಿ : ಸಚಿವ ದರ್ಶನಾಪುರ
Related Posts
Add A Comment

