ಕೊಲ್ಹಾರ: ಜಾನಪದ ಕಲೆಯು, ಜಾತಿ – ಮತಗಳ ಬೇಧ ತೊರೆದು ಸಮನ್ವಯ ಸಾಧಿಸುವ ಮೇರು ಸಂಸ್ಕೃತಿಯಾಗಿದೆ. ಎಲ್ಲ ಜನರನ್ನು ಬಾಂಧವ್ಯದ ಬೆಸುಗೆಯಲ್ಲಿ ಬದುಕುವಂತೆ ಕಲಿಸುವ ಶಕ್ತಿ ಜಾನಪದ ಸಂಪ್ರದಾಯಕ್ಕಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಅಭಿಪ್ರಾಯಪಟ್ಟರು.
ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದಲ್ಲಿ ಬೀಬೀ ಫಾತೀಮಾಳ ಹತ್ತು ದಿನಗಳ ಜಾರತ ಉತ್ಸವದ ನಿಮಿತ್ಯ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ತಾಲೂಕು ಘಟಕ ಕೊಲ್ಹಾರ ವತಿಯಿಂದ ಬಳೂತಿಯ ಭಾವಿ ಬಸವೇಶ್ವರ ಹೆಜ್ಜೆ ಮೇಳ ಸಂಘದ ಸಹಯೋಗದಲ್ಲಿ ಏರ್ಪಡಿಸಿದ ” ಜಿಲ್ಲಾ ಮಟ್ಟದ ರಿವಾಯತ ಸಂಬ್ರಮ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಹಿಂದೂ – ಮುಸ್ಲಿಂ ಏಕತೆಯಿಂದ ದೇಶದಲ್ಲಿ ಶಾಂತಿ ನೆಲೆಸುತ್ತದೆ. ರಿವಾಯತ ಕಲೆಯ ಮೂಲಕ ಶಾಂತಿ – ಸಹಬಾಳ್ವೆಗೆ ಕಾರಣವಾದ ಬಳೂತಿ ಗ್ರಾಮ ಭಾವೈಕ್ಯತೆಯ ಕಾಶಿಯಾಗಿದೆ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ, ನಾಗರದಿನ್ನಿ ಸದ್ಗುರು ಸದಾನಂದ ಮಠದ ತಪೋನಿಧಿ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು, ಧರ್ಮ ಯಾವುದಾದರೇನು ಕರ್ಮ ಮಾತ್ರ ಸತ್ಯದ ಹಾಡಿಯಲ್ಲಿರಬೇಕು. ಭಗವಂತನ ದೃಷ್ಠಿಯಲ್ಲಿ ಸಮಾನರಾದ ನಾವು ಬದುಕಿನಲ್ಲಿಯೂ ಸಮಾನತೆಯಿಂದ ಸದ್ಗತಿ ಕಾಣಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) , ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿದಿದ್ದು ಹಳ್ಳಿಗಳಲ್ಲಿ ಮಾತ್ರ. ಮಠ – ಮಂದಿರ, ಜಾತ್ರೆ – ಉತ್ಸವಗಳ ಮೂಲಕ ಮೂಲ ಜಾನಪದ ಉಳಿದುಕೊಂಡಿದೆ. ರಿವಾಯತ ಸಮ್ಮೇಳನ ಮಾಡುವ ಮೂಲಕ ರಿವಾಯತ ಕುರಿತು ಸಂಶೋಧನೆ ನಡೆಯಬೇಕು ಎಂದರು.
ಹಿರಿಯ ಜಾನಪದ ಕಲಾವಿದ ಶಂಕರಯ್ಯ ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ಫೀರನಾಥ ಗಿರಿ ಭಾವಾ, ದುಂಡಪ್ಪ ಬನಾಗೊಂಡ, ಕ ಜಾ ಪ ಕೊಲ್ಹಾರ ತಾಲೂಕಾಧ್ಯಕ್ಷ ಮಲ್ಲಪ್ಪ ಗಣಿ, ಜಿಲ್ಲಾ ಸದಸ್ಯ ಮೌಲಸಾಹೇಬ್ ಜಾಹಾಗಿರದಾರ್, ಭೀಮಶಿ ಬೀಳಗಿ ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆಯುವ ಈ ಕಲಾಪ್ರದರ್ಶನದಲ್ಲಿ ರಿವಾಯತಹಾಡು, ಹೆಜ್ಜೆಕುಣಿತ , ಮುಳ್ಳುಹೆಜ್ಜೆ ಕುಣಿತ ಕಲಾವಿದರು ಪ್ರದರ್ಶನ ನೀಡುವರು.
ಬಿ ಎಸ್ ಗೌಡರ ಶಿಕ್ಷಕರು ನಿರೂಪಿಸಿದರು. ವಿಠ್ಠಲ ಲೋಕಾಪುರ ಸ್ವಾಗತಿಸಿದರು. ಪವಾಡೆಪ್ಪ ಗೊಳಸಂಗಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

