ದೇವರಹಿಪ್ಪರಗಿ: ನಮ್ಮ ಜೀವನ ಪಯಣದಲ್ಲಿ ನಮಗೆ ಮಾರ್ಗದರ್ಶನ ನೀಡುವ ತಂದೆ, ತಾಯಿ, ಗುರು ಹಿರಿಯರು, ಶಿಕ್ಷಕ ವೃಂದವನ್ನು ಗೌರವಿಸುವುದು ನಮ್ಮ ಸತ್ಸಂಪ್ರದಾಯವಾಗಿದೆ ಎಂದು ಬೆಂಗಳೂರು ನೀಟ್ ಅಕಾಡೆಮಿಯ ನಿರ್ದೇಶಕ ಸಿ.ಎನ್. ವೆಂಕಟೇಶ ಹೇಳಿದರು.
ಪಟ್ಟಣದ ಶ್ರೀಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಜರುಗಿದ ಗುರುನಮನ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಸಂಸ್ಕೃತಿ ಹಾಗೂ ಶಿಕ್ಷಣದಲ್ಲಿ ಗುರುವಿನ ಸ್ಥಾನ ಹಿರಿದಾದುದಾಗಿದ್ದು, ಅಂತೆಯೇ ಗುರುಪೂರ್ಣಿಮಾ ದಿನವನ್ನು ಕೃತಜ್ಞತೆ, ಭಕ್ತಿ ಮತ್ತು ಸಾಂಸ್ಕೃತಿಕ ಏಕತೆಯ ಪ್ರತೀಕವಾಗಿ ಆಚರಿಸಲಾಗುತ್ತಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವ್ಹಿ.ಕೆ.ಪಾಟೀಲ ಮಾತನಾಡಿ, ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಪಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಅರ್ಥಗರ್ಭಿತ ಮಾತುಗಳಿಂದ ಆರಂಭಗೊಳ್ಳುವ ಶಿಕ್ಷಣ ಹಾಗೂ ಗುರುವಿನ ಕುರಿತಾದ ಮಹತ್ವವನ್ನು ನಾವೆಲ್ಲ ತಿಳಿದುಕೊಳ್ಳಬೇಕಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಸ್ಥಳೀಯ ಸದಯ್ಯನಮಠ ವೀರಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಜೀವನಪಥದಲ್ಲಿ ನಮಗೆ ಉತ್ತಮ ಮಾರ್ಗದರ್ಶನ ನೀಡುವ, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಧಾರೆ ಎರೆಯುವ ಪ್ರತಿಯೊಬ್ಬರು ಗುರು ಎಂದರೆ ತಪ್ಪಾಗಲಾರದು ಎಂದರು.
ಶಿಕ್ಷಕ ಎಸ್.ಎ.ಹಿರೇಕುರುಬರ ಮಾತನಾಡಿದರು.
ಇದೇ ಸಂದಭದಲ್ಲಿ ಶಾಲೆಯ ಎಲ್ಲ ಶಿಕ್ಷಕ, ಶಿಕ್ಷಕಿ ವೃಂದವನ್ನು ವಿದ್ಯಾರ್ಥಿಗಳು ಹೂಮಳೆಗರೆದು ವೇದಿಕೆಗೆ ಸ್ವಾಗತಿಸಿದ್ದು ಗಮನ ಸೆಳೆಯಿತು.
ಮಲಘಾಣ ಶ್ರೀಜಕಣೇಶ್ವರಿ ಮಹಿಳಾ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಜಯಶ್ರೀ ಪಾಟೀಲ, ಕಾರ್ಯದರ್ಶಿ ಎಸ್.ವ್ಹಿ.ಪಾಟೀಲ, ಸದಸ್ಯೆ ಎಸ್.ಆರ್.ಇಂಡಿ, ಸಿದ್ಧೇಶ್ವರ ಸಂಸ್ಥೆಯ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಿ.ಎಚ್.ಗಾಂವಕರ, ಆಡಳಿತಗಾರರಾದ ಎಮ್.ಬಿ.ಬೀಳಗಿ, ಎಸ್.ಕೆ.ತೋಳನೂರ, ಎ.ಕೆ.ಆನಂದ ಶಿಕ್ಷಕರಾದ ಕಾಶೀನಾಥ ಯಂಭತ್ನಾಳ, ವಿನೋದ ಉತ್ನಾಳ, ಅಕ್ಷತಾ ಹಿರೇಮಠ, ದಾನೇಶ್ವರಿ ಬುದ್ನಿ ಸೇರಿದಂತೆ ೫೦ ಕ್ಕೂ ಹೆಚ್ಚು ಶಿಕ್ಷಕ, ಶಿಕ್ಷಕಯೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವುದು ನಮ್ಮ ಸತ್ಸಂಪ್ರದಾಯ
Related Posts
Add A Comment

