ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಭಾನುವಾರ ತಾಲೂಕಾಡಳಿತದಿಂದ ಶರಣ ಹಡಪದ ಅಪ್ಪಣ್ಣ ಜಯಂತಿಯಂಗವಾಗಿ ಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು.
ಗ್ರೇಡ್-೨ ತಹಸೀಲ್ದಾರ ಜೆ.ಎಸ್.ನಾಯಕ ಅವರು ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ, ೧೨ ನೇ ಶತಮಾನದ ಬಸವಾದಿ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರಾಗಿದ್ದಾರೆ. ಇವರು ಬಸವನಾಡಿನ ಮಸಬಿನಾಳ ಗ್ರಾಮದಲ್ಲಿ ಜನಿಸಿರುವದು ನಮ್ಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಹಡಪದ ಅಪ್ಪಣ್ಣನವರು ಬಸವೇಶ್ವರರ ಆಪ್ತಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಇತಿಹಾಸದಿಂದ ತಿಳಿದುಬರುತ್ತದೆ. ನಾವೆಲ್ಲರೂ ಬಸವಾದಿ ಶರಣರ ಸಂದೇಶಗಳನ್ನು ಅರಿತುಕೊಂಡು ಅದರಂತೆ ನಡೆಯುವಂತಾಗಬೇಕೆಂದರು.
ಜಯಂತಿ ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ, ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಮಂಜು ಹಳ್ಳೂರ, ರಾಮಚಂದ್ರ ಘಾಟಗೆ, ಹಡಪದ ಸಮಾಜ ಬಾಂಧವರಾದ ಗುರುಲಿಂಗಪ್ಪ ಹಡಪದ,ಅಶೋಕ ಬಾಗೇವಾಡಿ, ಸುಭಾಸ ಹಡಪದ, ಮುತ್ತಪ್ಪ ಇವಣಗಿ, ಮಲ್ಲು ಇವಣಗಿ, ಪ್ರಲ್ಹಾದ ಹಡಪದ, ಶಿವಾನಂದ ಹಡಪದ, ಚನ್ನು ಹಡಪದ, ಶಂಕರ ಕ್ಷೀರಸಾಗರ, ಬಸವರಾಜ ಕೋರವಾರ, ಬಸು ಮುತ್ತಗಿ, ಶ್ರೀಶೈಲ ಇವಣಗಿ, ಈರಣ್ಣ ದವಾಖಾನೆ,ಗುರು ಹಡಪದ, ರಾಜು ಹಡಪದ, ರಾಜು ನಾಗೂರ, ವಕೀಲ ಸಿ.ಎಂ.ಹಡಪದ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಇತರರು ಇದ್ದರು.
ವಿವಿಧ ಇಲಾಖೆಯ ಅಧಿಕಾರಿಗಳು ಅಷ್ಟಾಗಿ ಭಾಗವಹಿಸದೇ ಇರುವದು ಕಂಡುಬಂದಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

