ಸಿಂದಗಿ: ನೀರಿನ ಬಳಕೆ ಮತ್ತು ಸಂರಕ್ಷಣೆಯನ್ನು ನಾವು ನಿತ್ಯ ಅನುಸರಿಸಿದ್ದಲ್ಲಿ, ನೀರಿನ ಕೊರತೆಯಿಂದ ತಕ್ಕಮಟ್ಟಿಗೆ ಮುಕ್ತತೆಯನ್ನು ಪಡೆಯುತ್ತೇವೆ ಎಂದು ಶ್ರೀಪದ್ಮರಾಜ ಪಬ್ಲಿಕ್ ಶಾಲೆಯ ಪ್ರಾಚಾರ್ಯ ವಿ.ಬಿ. ಲಮಾಣಿ ಹೇಳಿದರು.
ಪಟ್ಟಣದಲ್ಲಿ ಶ್ರೀಪದ್ಮರಾಜ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ಜಲದೂತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ನೀರನ್ನು ನಾವೆಲ್ಲ ಪೋಲು ಮಾಡುತ್ತಿದ್ದೇವೆ. ಜಲ ಸಂಪನ್ಮೂಲವನ್ನು ಸಂರಕ್ಷಿಸಿದಾಗ ಮಾತ್ರ ಕೈಗಾರಿಕೆ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳು ಅಭಿವೃದ್ಧಿಯಾಗಲಿವೆ. ಪ್ರತಿ ಕಾರ್ಯಕ್ಕೂ ನೀರಿನ ಹೆಚ್ಚು ಅವಶ್ಯಕತೆ ಇರುವುದರಿಂದ ನೀರಿನ ಬಳಕೆಯ ಬಗ್ಗೆ ಹೆಚ್ಚು ಗಮನದಲ್ಲಿಟ್ಟುಕೊಂಡು ಬಳಕೆ ಮಾಡಬೇಕು. ನೀರಿಲ್ಲದ ಕಾರಣ ಅನೇಕ ಕೃಷಿ ಜಮೀನುಗಳು ಇಂದು ನಿವೇಶನಗಳಾಗಿ ಮಾರ್ಪಾಡಾಗುತ್ತಿವೆ. ನೀರಿನ ಸದ್ಬಳಕೆ ಮತ್ತು ಮಹತ್ವವನ್ನು ಮಕ್ಕಳಲ್ಲಿ ಬಿಂಬಿಸುವ ಉದ್ದೇಶದಿಂದ ಜಲದೂತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಭಿಯಾನ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪಟ್ಟಣದ ವಿವಿಧ ಬೀದಿಗಳ ಮೂಲಕ ಸಂಚಾರ ಮಾಡಿ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿಗಳಾದ ರಾಣಿ ಜೋಗೂರ, ಕೆ.ಎಸ್.ಲಾತೂರ, ಎಸ್.ಎಸ್.ಪೋದ್ದಾರ, ಸಾವಿತ್ರಿ ಹಾಲಕೇರಿ, ಶ್ರೀಧರ ಮಲ್ಲೇದ, ಅರುಣಾ ಕವಲಗಿ, ಅಕ್ಷತಾ ಕಿಣಗಿ, ವಿಜಯಲಕ್ಷ್ಮೀ ಚೌಧರಿ, ಭಾರತಿ ಹಿರೇಮಠ, ನೀಲಮ್ಮ ಮಾರ್ಸನಳ್ಳಿ, ನೀಲಮ್ಮ ಬಿರಾದಾರ್, ಅಭಿಷೇಕ ಬಿರಾದಾರ, ಕಲಾವತಿ ಹಿರೇಮಠ, ಸುರೇಶ ಸುಣಗಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ನಾವೆಲ್ಲ ನೀರಿನ ಬಳಕೆ & ಸಂರಕ್ಷಣೆ ನಿತ್ಯ ಅನುಸರಿಸಬೇಕು :ಲಮಾಣಿ
Related Posts
Add A Comment

