ಚಡಚಣ: ನೀರು ಅತ್ಯಮೂಲ್ಯ ಸಂಪತ್ತು.ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನದಿ,ಕೆರೆ,ಬಾವಿಯ ನೀರನ್ನು ಸಂರಕ್ಷಿಸುವ ಜೊತೆಗೆ ಮಳೆನೀರು ಕೊಯ್ಲು ಮೂಲಕ ಮಳೆ ನೀರನ್ನು ಸಂಗ್ರಹಿಸುವ ದಿಟ್ಟ ಪ್ರಯತ್ನ ಅಗತ್ಯ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಹಮ್ಮಿಕೊಂಡ ಜಲಧೂತ ಜಾಗೃತಿ ಅಭಿಯಾನದ ನಿಮಿತ್ಯ ಜಲ ಸಂರಕ್ಷಣೆ-ನಮ್ಮ ಹೊಣೆ ಕುರಿತು ಮಾತನಾಡಿದರು.
ಶಿಕ್ಷಕ ಡಿ ಎಸ್ ಬಗಲಿ ಮಾತನಾಡಿ, ನಾಳೆಯ ಅಭಾವ ತಪ್ಪಿಸಲು ಅತ್ಯಮೂಲ್ಯವಾದ ನೀರನ್ನು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಿ-ಮುಂಬರುವ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕಿದೆ ಎಂದು ಹೇಳಿದರು.
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ, ನೀರು ಮುಗಿದು ಹೋಗುವ ಸಂಪನ್ಮೂಲ. ಸಕಲ ಜೀವಿಗಳಿಗೂ ನೀರು ಅತ್ಯಗತ್ಯ. ಮಾನವ ವೈಜ್ಞಾನಿಕವಾಗಿ ಬೆಳೆದರೂ ಸಹಿತ ನೀರನ್ನು ಸೃಷ್ಟಿಸುವ ತಂತ್ರಜ್ಞಾನದ ಆವಿಷ್ಕಾರ ಮಾಡಿಲ್ಲ. ನೀರಿನ ಮಿತ ಬಳಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸಗಳು ನಿರಂತರವಾಗಿರಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರಾದ ಮಹಾದೇವ ಆದಿಗೊಂಡೆ, ಎಚ್ ಜೆ ಲೋಣಿ, ಎಂ ಎಸ್ ನಿಂಬಾಳಕರ, ವ್ಹಿ ಎಸ್ ಪತ್ತಾರ, ಜಯಶ್ರೀ ಗೊಟ್ಯಾಳ, ಸುರೇಖಾ ಝುಲ್ಪಿ, ಗೀತಾ ಮಾಳಿ, ಅಪೇಕ್ಷಾ ಕರಜಗಿ, ಪ್ರೇಮಾ ಧೋತ್ರೆ ಅಡುಗೆ ಸಹೋದರಿಯರಾದ ಮಹಾನಂದಾ ಧೋತ್ರೆ, ಸಪೂರಾ ಲಟೋರಿ, ರಕಮಾಬಾಯಿ ವಾಘ್ಮೋರೆ, ಸವಿತಾ ವಾಲಿಕಾರ, ಕಸ್ತೂರಿ ಸಾಲಮಂಟಪ ಹಾಗೂ ಪಾಲಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

