ಚಡಚಣ: ಸಮೀಪದ ನಿವರಗಿ ಗ್ರಾಮದಲ್ಲಿ ಗಡಿನಾಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಡಚಣ ಇವರ ಸಂಯುಕ್ತ ಆಶ್ರಯದಲ್ಲಿ ಜಾನಪದ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ಸಮೃದ್ಧ ಜಾನಪದ ಸಾಹಿತ್ಯದ ಆಗರ, ಜನಪದ ಸಾಹಿತ್ಯ ಶ್ರೀಮಂತಿಕೆಗೆ ಅಪಾರವಾದದ್ದು , ಅದು ನಮ್ಮ ದೇಶದಲ್ಲಿ ಅಷ್ಟೇ ಅಲ್ಲ, ಅಮೆರಿಕದಲ್ಲಿ ಸಹ ತನ್ನ ಚಾಪು ಮೂಡಿಸಿದೆ. ಕನ್ನಡ ಅಂದರೆ ಅದೊಂದು ಸಂಸ್ಕೃತಿ, ಅಸ್ಮಿತೆ ನಮ್ಮ ಉಸಿರು. ಕನ್ನಡದ ಕೆಲಸಕ್ಕೆ ಎಲ್ಲರೂ ಒಂದಾಗಿ ಇರಬೇಕು. ಈ ನಿಟ್ಟಿನಲ್ಲಿ ಗಡಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ತಾಳಿಕೋಟೆಯ ಜಾನಪದ ವಿದ್ವಾಂಸೆ ಶಿವಲೀಲಾ ಮುರಾಳ ಮಾತನಾಡುತ್ತ, ಜಾನಪದವು ದಿನನಿತ್ಯ ಬೆಳಸುವ ಬದುಕಿನ ಸಂಸ್ಕೃತಿ ಅಂಗವಾಗಿದೆ. ಜನಪದ ಸಾಹಿತ್ಯವು ತಾಯಂದಿರು ಹಾಡುವ ಲಾಲಿಗಳಿಂದ ಪ್ರಾರಂಭವಾಗಿ ಹಾಡುವಾಗ, ಬೀಸುವಾಗ, ಕುಟ್ಟುವಾಗ ಹಾಡುವ ಹಾಡಿನಿಂದ ಈ ಜಾನಪದ ಹುಟ್ಟುತ್ತದೆ.
ಮೊಬೈಲ್ ಯುಗದಲ್ಲಿ ಜನಪದ ಹಾಡುಗಳು ನಶಿಸಿ ಹೋಗುತ್ತಿವೆ. ಈಗಿನ ಯುಗದಲ್ಲಿ ಎಲ್ಲರೂ ಅವುಗಳನ್ನು ಸಂರಕ್ಷಣೆ ಮಾಡಬೇಕು ಎಂದರು. ಜಾನಪದದ ಹಾಡನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ ಮಾತನಾಡಿ, ಜಾನಪದ ಎಂಬುದು ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆಯ ಮೂಲವೇ ಆಗಿದೆ, ಜಾನಪದ ಸಾಹಿತ್ಯ ಜನರ ಬದುಕಿನಲ್ಲಿ ಅವಿನಾಭಾವ ಸಂಬಂಧ ಇದ್ದು ನಡೆ ನುಡಿಯಲ್ಲಿ, ಆಹಾರ, ವೇಷಭೂಷಣ, ಕೃಷಿ, ಕಲೆ ಇವೆಲ್ಲದರಲ್ಲೂ ಜನಪದ ಹಾಸುಹೊಕ್ಕಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಚಡಚಣ ವಿರಕ್ತಮಠದ ಷಡಕ್ಷರಿ ಮಹಾಸ್ವಾಮಿಜಿ ವಹಿಸಿ ಆರ್ಶೀವಚನ ನೀಡಿದರು.
ನಾಗಠಾಣ ಮಾಜಿ ಶಾಸಕ ದೇವಾನಂದ ಚವ್ಹಾಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, ಮಾಜಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಡಿ.ಪಾಟೀಲ, ಚಡಚಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪಾ ಮಾನೆ,
ಶಿಕ್ಷಕ ರಮೇಶ ಬಸರಗಿ,
ಚಡಚಣ ಬಿಆರ್ಪಿ ಸತೀಶ ಬಗಲಿ, ನಿವೃತ್ತ ಶಿಕ್ಷಕ ಸಿ.ಆರ್.ತಳವಾರ, ಅಮಸಿದ್ದ ಬಿಜ್ಜರಗಿ, ಸುರೇಶ ಏಣಪೆ, ಎನ್ .ಡಿ.ಜಂಹಾಗೀರದಾರ, ಶಿಕ್ಷಕರಾದ ಎನ್.ಎ.ಪಾಟೀಲ, ರವಿಕಾಂತ ಜಂಹಾಗೀರದಾರ,
ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಜಯಶ್ರೀ ಚಂದ್ರಕಾಂತ ಹೂನ್ನೂರ, ಉಪಾಧ್ಯಕ್ಷ ತಮ್ಮಾರಾಯ ತೇಲಿ, ಸದಸ್ಯರಾದ ಕಾಶೀನಾಥ ಸಂಖ, ಸಂಜೀವ ದಾಂಡೇಕರ, ಪ್ರಕಾಶ್ ಬ ಮಾಸ್ತರ, ನಿಂಗಪ್ಪಾ ಇಂಗಳೆ, ಶ್ರಾವಣ ಕಾಂಬಳೆ, ಅಶೋಕ ಕಾರಾಜನಗಿ, ಬೀರಪ್ಪ ಬರಗುಡಿ, ಮುತ್ತಣ್ಣ ಚಿಕ್ಕಲಕ್ಕಿ, ಲಲಿತಾ ದಳವಾಯಿ, ದೀಪಾ ಅ ಕಾಂಬಳೆ, ಊರಿನ ಮುಖಂಡರಾದ ಎಮ್.ಒಂ.ಹೀರೆಕುರಬರ, ಸಿದ್ದನಗೌಡ್ರು ಪಾಟೀಲ್, ಸಿದ್ದು ಸಿದ್ದಾಪುರ, ಹಿರಗಣ್ಣ ಪೂಜಾರಿ, ಕವಿಯತ್ರಿ ವಿದ್ಯಾ ಕಲ್ಯಾಣಶೆಟ್ಟಿ.
ಸಿದ್ದು ಮೇಲಿನಮನಿ ತಂಡ ತಮ್ಮ ಜಾನಪದ ಹಾಡುಗಳ ಮೂಲಕ ಜನರನ್ನು ರಂಜಿಸಿದರು. ನಿವರಗಿಯ ತಾಯಂದಿರು, ಗ್ರಾಮಸ್ಥರು, ಯುವಕರು, ಮುದ್ದು ಮಕ್ಕಳು ಮುಂತಾದವರು ಈ ಕಾರ್ಯಕ್ರಮಕ್ಕೆ ಭಾಗವಹಿಸುವದರ ಮೂಲಕ ಮೆರುಗು ತಂದರು.
Subscribe to Updates
Get the latest creative news from FooBar about art, design and business.
Related Posts
Add A Comment

