ಕಲಕೇರಿ: ಶಿಕ್ಷಕ ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ, ಸರಳ ವ್ಯಕ್ತಿತ್ವದಿಂದ ಸಾರ್ಥಕತೆ ಕಂಡುಕೊಂಡು ನಿವೃತ್ತಿ ಹೊಂದುತ್ತಿರುವ ಶಿಕ್ಷಕರ ಜೀವನ ಸುಖಮಯವಾಗಿರಲಿ ಎಂದು ಸಿ ಆರ್ ಪಿ ಗುಲಾಬ ನದಾಫ ಹೇಳಿದರು.
ಪಟ್ಟಣದ ಶಿಕ್ಷಕರ ಸದನದಲ್ಲಿ ಸರಕಾರಿ ಹಿರಿಯ ಮಾದರಿ ಉರ್ದು ಪ್ರಾಥಮಿಕ ರಾಂಪೂರ ಪಿ.ಟಿ ಶಾಲೆಯ ಮುಖ್ಯ ಶಿಕ್ಷಕ ಆರ್.ಬಿ.ಕಡಿಮನಿ ಅವರು ನಿವೃತ್ತಿ ಹೊಂದಿರುವ ನಿಮಿತ್ಯ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕರ ಹುದ್ದೆ ಬಹಳ ಪವಿತ್ರವಾದದ್ದು. ವಿದ್ಯಾರ್ಥಿಗಳಿಗೆ ಉನ್ನತ ವಿಚಾರ ಧಾರೆಗಳು ಹಾಗೂ ಗುಣ ಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳಲು ಸಹಕಾರಿಯಾಗುತ್ತದೆ ಎಂದರು.
ವಿಶ್ರಾಂತ ಮುಖ್ಯ ಶಿಕ್ಷಕ ಯು.ಆಯ್ ಶೇಖ ಮಾತನಾಡಿ, ಶಿಕ್ಷಕರು ಸೇವಾ ನಿವೃತ್ತಿ ಹೊಂದಿದ ಬಳಿಕ ಆರೋಗ್ಯ ಕಡೆಗೆ ಹೆಚ್ಚು ಗಮನ ಹರಿಸಬೇಕು.
ಶಿಕ್ಷಕರಾಗಿ ಸೇವೆ ಸಲ್ಲಿಸಿದವರನ್ನು ಇಲಾಖೆ, ಪಾಲಕರು ಹಾಗೂ ವಿದ್ಯಾರ್ಥಿಗಳು ಎಂದೂ ಮರೆಯುವುದಿಲ್ಲ. ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ, ಅಧಿಕಾರಿಗಳು ಮತ್ತು ಪಾಲಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾದ ಕಡಿಮನಿ ಗುರುಗಳ ನಿವೃತ್ತಿ ಬದುಕು ಚೈತನ್ಯಪೂರ್ಣವಾಗಿರಲಿ ಎಂದು ಹಾರೈದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ
ಉರ್ದು ಶಾಲೆಯ ವಿಶ್ರಾಂತ ಮುಖ್ಯಗುರು ಅರ್ ಬಿ ಕಡಿಮನಿ ಮಾತನಾಡಿ, ತಾವು ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಹಿರಿಯ ಅಧಿಕಾರಿಗಳ, ಸರ್ವ ಶಿಕ್ಷಕರ ಪ್ರೋತ್ಸಾಹ ಹಾಗೂ ಸಹದ್ಯೋಗಿಗಳ ಸಹಕಾರವೇ ಕಾರಣ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿಶ್ರಾಂತ ಮುಖ್ಯಗುರು ಆರ್ ಬಿ ಕಡಿಮನಿ ಅವರಿಗೆ ಅವರ ಕುಟುಂಬಸ್ಥರು, ಶಿಕ್ಷಕರು ಸೇರಿದಂತೆ ಹಲವರು ಸನ್ಮಾನಿಸಿ ಗೌರವಿಸಿದರು.
ಝಡ್.ಎಸ್.ಮನಿಯಾರ್, ಎನ್.ಜಿ.ಮನಿಯಾರ, ಯುಸಿಪ್ ಸಿರಸಗಿ, ಶ್ರೀಮತಿ ಹಚ್.ಆರ್.ಕಡಿಮನಿ ಸೇರಿದಂತೆ ಅನೇಕರು ಇದ್ದರು.
ರಫೀಕ್ ಮುಲ್ಲಾ ಸ್ವಾಗತಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

