ಸಿಇಟಿ ಮತ್ತು ನೀಟ್ ತರಬೇತಿ ಪೂರ್ವಭಾವಿ ಪಾಲಕರ ಸಭೆಯಲ್ಲಿಡಾ.ಪ್ರಭುಸಾರಂಗದೇವ ಶ್ರೀ ಅಭಿಮತ
ಸಿಂದಗಿ: ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರವೂ ಬಹಳ ಮಹತ್ವದ್ದಾಗಿದೆ ಎಂದು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ಪ.ವಿ.ವ.ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ತರಬೇತಿ ಪೂರ್ವಭಾವಿ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳ ಚನವಲನಗಳ ಮೇಲೆ ಪಾಲಕರು ನಿಗಾ ಇಡುವುದು ಅತೀ ಮುಖ್ಯವಾಗಿದೆ. ಈ ಮೋಬೈಲ್ ಗೀಳು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಬೇರೆ ಕಾಲೇಜುಗಳಿಗೆ ಹೋಲಿಸಿದರೆ ನಮ್ಮ ಸಂಸ್ಥೆಯಲ್ಲಿ ತರಬೇತಿಗಾಗಿ ಕಡಿಮೆ ಶುಲ್ಕವನ್ನು ತೆಗೆದುಕೊಂಡು ಪಾಲಕರ ಅಭಿಪ್ರಾಯದೊಂದಿಗೆ ಅನುಭವಿ ವಿಷಯ ಪರಿಣಿತ ಬೋಧಕರಿಂದ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ತರಬೇತಿಯನ್ನು ನೀಡಲಾಗುವುದು ಎಂದರು.
ಸಭೆಯನ್ನು ಉದ್ಘಾಟಿಸಿ ನಿವೃತ್ತ ಪ್ರಾಚಾರ್ಯ ವಿಮಲಕಾಂತ ಪಾಟೀಲ ಮಾತನಾಡಿ, ನಿಮ್ಮ ಕನಸನ್ನು ನನಸಾಗಿಸುವ ಸಲುವಾಗಿಯೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉಜ್ವಲ ಭವಿಷ್ಯಕ್ಕಾಗಿ ಸಂಸ್ಥೆಯ ಕಾರ್ಯ ಮಾದರಿಯಾಗಿದೆ. ಪ್ರತಿಯೊಂದು ವಿಷಯದಲ್ಲಿ ಆಳವಾದ ಜ್ಞಾನವನ್ನು ಪಡೆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪಾಚಾರ್ಯ ವಿಜಯಕುಮಾರ ಜಿರಲಿ, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಪ್ರಸನ್ ಜೋಗೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಿವಯೋಗಿ ತಾಳಿಕೋಟಿ, ಪಿ.ವ್ಹಿ.ಮಹಲಿನಮಠ, ಸುರೇಶ ಜಾಧವ, ರಾಹುಲ ನಾರಾಯಣಕರ್, ಸುನೀಲ ಪಾಟೀಲ, ಗವಿಸಿದ್ದಪ್ಪ ಆನೆಗುಂದಿ, ಡಾ.ವಿಶ್ವನಾಥ ನಂದಿಕೋಲ, ಶಿವಶರಣ ಬೂದಿಹಾಳ, ಡಾ. ಶರಣಬಸವ ಜೋಗೂರ, ನೀಲಕಂಠ ಮೇತ್ರಿ, ವ್ಹಿ.ಕೆ.ಹಿರೇಮಠ, ಎಂ.ಐ.ಮುಜಾವರ್, ವಿಜಯಲಕ್ಷ್ಮೀ ಕನ್ನೊಳ್ಳಿ, ಮೇಘಾ ಕಮರಡ್ಡಿ, ಪ್ರಿಯಾಂಕಾ ಪಡಶೆಟ್ಟಿ, ಸ್ನೇಹಾ ಕುಲಕರ್ಣಿ, ಎ.ಬಿ.ಬಮ್ಮಣ್ಣಿ, ಸಂಗಮೇಶ ಚಾವರ, ಎನ್.ಬಿ.ಪೂಜಾರಿ, ಎನ್.ಎಂ.ಶೆಳ್ಳಗಿ, ಎಸ್.ಎಸ್.ಹೂಗಾರ, ಎಸ್.ಬಿ.ಹೊಸಮನಿ, ಬಿ.ಬಿ.ಜಮಾದಾರ, ಚಂದ್ರು ಬಬಲೇಶ್ವರ್, ರೋಹಿತ್ ಸುಲ್ಪಿ, ರಾಹುಲ ಕುನ್ನಾಳ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಇನ್ನಿತರರು ಇದ್ದರು.

