ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಮದಬಾವಿ ಎಲ್.ಟಿ-೧ ಗ್ರಾಮಸ್ಥರು
ವಿಜಯಪುರ: ಸಮೀಪದ ಮದಭಾವಿ ತಾಂಡಾ ನಂ ೧ರ ಹತ್ತಿರದ ಟಾಯರ್ ಕಾರ್ಖಾನೆಯನ್ನು ಬಂದ್ ಮಾಡಿಸಬೇಕು ಎಂದು ಆಗ್ರಹಿಸಿ ಮದಬಾವಿ ಎಲ್ಟಿ ೧ ನಿವಾಸಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಚುನಾವಣಾ ಅವಧಿಯೊಳಗೆ ಕಾರ್ಖಾನೆ ಬಂದ್ ಮಾಡದಿದ್ದರೆ ಮತದಾನ ಮಾಡದೆ ಚುನಾವಣಾ ಬಹಿಷ್ಕಾರ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ಜಿಲ್ಲಾಧಿಕಾರಿಗಳು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಸ್ಥಳಕ್ಕೆ ಖುದ್ದಾಗಿ ಆಗಮಿಸಿ ಪರಶೀಲನೆ ಮಾಡಿ, ವರದಿ ಪಡೆದುಕೊಂಡು ತಕ್ಷಣದಿಂದಲೇ ಆ ಕಾರ್ಖಾನೆಯನ್ನು ಬಂದ್ ಮಾಡಬೇಕು, ಇಲ್ಲವೇ ಬೇರೆಡೆಗೆ ಸ್ಥಳಾಂತರಿಸಬೇಕು, ಇದರಿಂದ ಇಲ್ಲಿಯ ಸಾಕಷ್ಟು ಮಕ್ಕಳಿಗೆ, ಮಹಿಳೆಯರಿಗೆ, ಮಯೋವೃದ್ಧರಿಗೆ ಸಮಸ್ಯೆ ಉಂಟಾಗಿವೆ, ಅದರಲ್ಲಿ ಮುಖ್ಯವಾಗಿ ಗಂಟಲು ಉರಿ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಲಕ್ವಾ ಸೇರಿದಂತೆ ಅನೇಕ ರೀತಿಯ ಸಮಸ್ಯೆ ಎದುರಿಸುವಂತಾಗಿದೆ ಎಂದರು
ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ೧೪೪ ಕಲಂ ಜಾರಿ ಇದ್ದು, ಯಾರು ಇಲ್ಲಿ ಬರಬಾರದು ಎಂದ ಪೋಲಿಸರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಸ್ಥಳಕ್ಕೆ ಆಗಮಿಸಿ, ಈಗಾಗಲೇ ಟಾಯರ್ ಕಾರ್ಖಾನೆಗೆ ಸಂಬಂಧಿಸಿದಂತೆ ತಲಾಟಿ, ಪಿಡಿ.ಓ ಹಾಗೂ ಚುನಾವಣಾಧಿಕಾರಿಗಳಿಂದ ವರದಿ ತರೆಸಿಕೊಂಡು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರ ಕಳುಹಿಸಲಾಗಿದೆ. ಕಾರಣ ಯಾರೂ ಚುನಾವಣಾ ಭಹಿಷ್ಕಾರ ಮಾಡಬಾರದು ಎಂದರು.
ಈ ವೇಳೆ ಗ್ರಾ ಪಂ ಸದಸ್ಯ ಪಾಂಡುರಂಗ ರಾಠೋಡ ಮಾತನಾಡಿದರು.
ಈ ವೇಳೆ ಗ್ರಾ.ಪಂ ಸದಸ್ಯ ಮೇಘ ರಾಠೋಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಕಾಶ ರಾಠೋಡ, ಮಾಜಿ ಅಧ್ಯಕ್ಷ ಉತ್ತಮ ರಾಠೋಡ, ಕೀರು ಲಕ್ಕು ರಾಠೋಡ(ಕಾರಭಾರಿ), ಕ್ರೀಷ್ಣಾ ಚವ್ಹಾಣ, ಗಂಗಾರಾಮ ಚವ್ಹಾಣ, ರಮೆಶ ರಾಠೋಡ, ಗೋಪಾಲ ನಾಯಕ, ಬಾಸು ಲಚ್ಚು ರಾಠೋಡ, ಲಕ್ಷ್ಮಣ ನಾಯಕ, ಠಾಕರು ರಾಠೋಡ, ಲಚ್ಚು ಚವ್ಹಾಣ, ಧನಸಿಂಗ ರಾಠೋಡ, ಶಾಂತಾಭಾಯಿ ರಾಠೋಡ, ಚಾಂದಾಭಾಯಿ ಚವ್ಹಾಣ, ದೇವಿಭಾಯಿ ಜಾಧವ, ರೂಪ್ಲಾಭಾಯಿ ಚವ್ಹಾಣ, ಸಕ್ಕುಭಾಯಿ ಚವ್ಹಾಣ, ಜಮ್ಲಾಭಾಯಿ ರಾಠೋಡ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.

