ವಿಜಯಪುರ: ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೃಷ್ಣಾ ನದಿಯ ಮೂಲದ ೨ನೇ ಹಂತದ ಕೋಲ್ಹಾರ ಮೂಲ ಸ್ಥಾವರದಿಂದ ಜಲನಗರ ನೆಲಮಟ್ಟದ ಜಲಸಂಗ್ರಹಗಾರದವರೆಗೆ ೯೦೦/೯೬೫ಎಂ.ಎಂ ವ್ಯಾಸದ ಪಿ.ಎಸ್.ಸಿ/ಎಂ.ಎಸ್ಏರು ಕೊಳವೆ ಮಾರ್ಗದ ಚೈನೇಜ್ ೦.೦೦ಕಿ.ಮೀ ಕೋಲ್ಹಾರ ಜಾಕವೆಲ್ ಹತ್ತಿರಎಂ.ಎಸ್ ಕೊಳವೆ ಮಾರ್ಗದಲ್ಲಿ, ಚೈನೆಜ್ ೩೩.೩೫೦ಕಿ.ಮೀ ಸಾಯಿಬಾಬಾ ಗುಡಿ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ಚೈನೆಜ್ ೩೪.೭೬೦ಕಿ.ಮೀ ಬಾರಾಕೋಟರಿ ತಾಂಡಾ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ, ಚೈನೆಜ್ ೩೯.೯೧೦ಕಿ.ಮೀ ಮಮದಾಪೂರ ರಮೇಶ ತೋಟದ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ಮತ್ತು ಚೈನೆಜ್ ೪೦.೯೫೫ಕಿ.ಮೀ ಅಣ್ಣಾ ಡಾಬಾ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ನೀರು ಸೋರುವಿಕೆ ಉಂಟಾಗಿದ್ದು ಶುಧ್ದ ನೀರು ಪೋಲಾಗುತ್ತಿರುವುದರಿಂದ, ತುರ್ತು ದುರಸ್ಥಿ ಕಾಮಗಾರಿಯನ್ನು ಏಪ್ರೀಲ್ ೨೧ರಂದು ಮಂಡಳಿ ವತಿಯಿಂದ ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ.
ಆದಕಾರಣ ಏಪ್ರೀಲ್ ೨೧ರಂದು ವಿಜಯಪುರ ನಗರಕ್ಕೆ ಕೋಲ್ಹಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಆಗುವ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ನೀರು ಸೋರುವಿಕೆ ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಹಕರಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಂ.೧ ನಿರ್ವಹಣಾ ಉಪ ವಿಭಾಗ ವಿಜಯಪುರದ ಸಹಾಯಕ ಕಾರ್ಯಪಾಲ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
