ಆಲಮಟ್ಟಿ: ಯಲಗೂರದ ಯಲಗೂರೇಶ್ವರ ದೇವಸ್ಥಾನದಲ್ಲಿ ಬುಧವಾರ ರಾಮನವಮಿ ನಿಮಿತ್ತ ಯಲಗೂರೇಶ , ದೇವಸ್ಥಾನ ಪ್ರಾಂಗಣ ಸಂಪೂರ್ಣ ದ್ರಾಕ್ಷಿಯ ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗೆ ಶ್ರೀ ರಾಮನ ಉತ್ಸವ ಮೂರ್ತಿಯ ಮೆರವಣಿಗೆ ಜರುಗಿತು.
ದೇವಸ್ಥಾನದ ಪ್ರಾಂಗಣದಲ್ಲಿ ಮಧ್ಯಾಹ್ನ 12 ಕ್ಕೆ ಸರಿಯಾಗಿ ಪುಷ್ಪಾಲಂಕೃತ ತೊಟ್ಟಿಲಲ್ಲಿ ರಾಮನ ಮೂರ್ತಿ ಇಟ್ಟು ರಾಮನವಮಿಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಯಲಗೂರೇಶನಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆಯೂ ಜರುಗಿತು. ರಾಮನ ಹಾಗೂ ಪವನಸುತನ ಭಕ್ತಿಗೀತೆಗಳನ್ನು ಸೇರಿದ್ದ ಹಲವಾರು ಮಹಿಳೆಯರು ಹಾಡಿದರು.
ಭಕ್ತರಿಗೆ ಪಾನಕಾ, ಮಜ್ಜಿಗೆ, ಕೋಸಂಬರಿ ಪ್ರಸಾದ ವಿತರಿಸಲಾಯಿತು. ಡಾ ವಾದಿರಾಜ ಯಲಬುರ್ಗಿ ದಂಪತಿ ರಾಮನ ಪೂಜೆ ನೆರವೇರಿಸಿದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅನಂತ ಓಂಕಾರ, ಯಲಗೂರೇಶ್ವರ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ, ಯಲಗೂರದಪ್ಪ ಪೂಜಾರ, ಗುರುರಾಜ ಗದ್ದನಕೇರಿ, ಸಂಜೀವ ಪೂಜಾರ, ವಿಠ್ಠಲಾಚಾರ್ಯ ಗದ್ದನಕೇರಿ, ಪಾಂಡುರಂಗಾಚಾರ್ಯ ಹೊಸೂರ, ಪ್ರಹ್ಲಾದಾಚಾರ್ಯ ಗದ್ದನಕೇರಿ, ಸಂತೋಷ ಪೂಜಾರ, ಬದರಿನಾರಾಯಣ ಚಿಮ್ಮಲಗಿ, ಮಹಾಂತೇಶ ಡೆಂಗಿ, ಸಂಭಾಜಿ ಪವಾರ, ಸುಧಾಬಾಯಿ ಗದ್ದನಕೇರಿ, ರುಕ್ಮಿಣಿ ಗದ್ದನಕೇರಿ, ವಾರುಣಿ ಹಿಪ್ಪರಗಿ, ಶ್ರೀಲಕ್ಷ್ಮಿ ಗದ್ದನಕೇರಿ ಅನಘಾ ಓಂಕಾರ, ಪಂಕಜಾ ಹಿಪ್ಪರಗಿ, ವಾಣಿ ಒಡೆಯರ, ದೇವಸ್ಥಾನ ಟ್ರಸ್ಟ್ ಸಮಿತಿಯ ಸದಸ್ಯ ಗೋಪಾಲ ಗದ್ದನಕೇರಿ, ಗೋಪಾಲ ನಾಯಕ ಇನ್ನೀತರರು ಇದ್ದರು.
ಪಂಡಿತ ರಘುತ್ತೋಮಾಚಾರ್ಯ ನಾಗಸಂಪಿಗೆ ಅವರು ಭಾಗವತ್ ಪ್ರವಚನ ಆರಂಭಿಸಿದರು.
ಫಂಡರಪುರದಿಂದ ಭಕ್ತರು ದ್ರಾಕ್ಷಿಯ ಅಲಂಕಾರ ಮಾಡಿದ್ದು ವಿಶೇಷವಾಗಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

