ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದ ಭಾರತೀಯ ಯುವಜನ ಸೇವಾ ಸಂಸ್ಥೆ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಶ್ರೀ ಕೊಡೆಕಲ್ ಬಸವೇಶ್ವರ ಜಾತ್ರಾ ನಿಮಿತ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕೊಡೆಕಲ್ ಬಸವ ಶ್ರೀ ರಾಜ್ಯ ಪ್ರಶಸ್ತಿ ಸಮಾರಂಭದಲ್ಲಿ ಅಂತರಾಷ್ಟ್ರೀಯ ಕ್ರೀಡಾ ವಿಭಾಗದಲ್ಲಿ ಸಾಧನೆಗೈದ ಸಮರ್ಥ ವಸಂತಕುಮಾರ ಬಜಂತ್ರಿ ಹಾಗೂ ಸಂಜೀವ ವಸಂತಕುಮಾರ ಬಜಂತ್ರಿ ಇವರಿಗೆ ಕೊಡೆಕಲ್ ಬಸವ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಕೊಡೆಕಲ್ ಮಠದ ಸಂಗಯ್ಯ ಸ್ವಾಮಿಗಳು ವೀರಸಂಗಯ್ಯ ಕೊಡೆಕಲ್ ಮಠ ಸ್ವಾಮಿಗಳು ಹಾಗೂ ಪರಶುರಾಮ ಪೂಜಾರಿ ಮಣ್ಣೂರ ಬೀರಪ್ಪ ಪೂಜಾರಿ ನಂದಿಹಾಳ, ನ್ಯಾಯವಾದಿಗಳು ಹಾಗೂ ಸಾಹಿತಿಗಳಾದ ಮಲ್ಲಿಕಾರ್ಜುನ ಭೃಂಗಿಮಠ, ಸಾಹಿತಿ ಲಾಯಪ್ಪ ಇಂಗಳೆ, ಯಲಬುರ್ಗಾದ ಪತ್ರಕರ್ತರಾದ ವಿ ಎಸ್ ಶಿವಪ್ಪಯ್ಯನ ಮಠ ವಿನಾಯಕ ಸೌಹಾರ್ದ ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಪಾಟೀಲ ಪ್ರಕಾಶ ಕೋಲ್ಕಾರ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

