ಕೊಲ್ಹಾರ: ದೇಶದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತಾಪಿ ವರ್ಗದವರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವದು. ಆದ್ದರಿಂದ ಮತದಾರರು ಜಾಗೃತರಾಗಿ ಪ್ರಸಕ್ತ ಸಾಲಿನ ಲೋಕಸಭಾ ಚುಣಾವನೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರದ ಚುಕ್ಕಾನೆ ಹಿಡಿಯಲು ಅನುಕೂಲ ಮಾಡಿಕೊಡಬೇಕೆಂದು ಸಚಿವ ಶಿವಾನಂದ ಎಸ್ ಪಾಟೀಲ ಮನವಿ ಮಾಡಿಕೊಂಡರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಲೋಕಸಭಾ ಚುನಾವಣಾರ್ಥವಾಗಿ ಕೊಲ್ಹಾರ ತಾಲೂಕು ಕೂಡಗಿ ಮತ್ತು ಮುಳವಾಡ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹಾಗೂ ಪಟ್ಟಣದ ಮತದಾರ ಪ್ರಭುಗಳಲ್ಲಿ ಮತದಾನ ಮಾಡಬೇಕೆಂಬ ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ದೇಶದ ರೈತರಿಗೆ ಸೂಕ್ತ ಬೆಂಬಲ ಬೆಲೆ ಕೊಡದೇ ಇರುವದು ಅಲ್ಲದೇ ಇನ್ನೊಂದು ಕಡೆ ಬಂಗಾರದ ಬೆಲೆಯನ್ನು ಗಗನಕ್ಕೆ ಏರಿಸುತ್ತಾ ನಡೆದಿರುವದು ಈಗಿರುವ ಕೇಂದ್ರ ಸರಕಾರದ ದ್ವಿಮುಖ ನೀತಿಯನ್ನು ಎತ್ತಿ ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ಚಿನ್ನದ ಬೆಲೆ ಆಕಾಶದೆತ್ತರಕ್ಕೆ ಏರುತ್ತಿರುವದನ್ನು ಗಮನಿಸಿದರೆ ಹೆಣ್ಣುಮಕ್ಕಳು ಕೊರಳಲ್ಲಿ ತಾಳಿಯ ಬದಲಾಗಿ ಕಬ್ಬಿಣದ ತುಕಡಿಯನ್ನು ಹಾಕಿಕೊಳ್ಳಬೇಕೋ ಅಥವಾ ಅರಿಷಿಣದ ಕೊಂಬನ್ನು ಧರಿಸಿಕೊಂಡು ಇರಬೇಕು ಎನ್ನುವಂತಹ ಸ್ಥಿತಿ ನಿರ್ಮಾಣವಾಗಲು ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಸಚಿವ ಶಿವಾನಂದ ಎಸ್ ಪಾಟೀಲ ಹೇಳಿದರು.
ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಹೆಚ್ಚಿನ ಮತವನ್ನು ಕೊಟ್ಟು ಅವರ ಗೆಲುವಿನಲ್ಲಿ ಕ್ಷೇತ್ರದ ಜನತೆಯ ಹಿರಿಮೆಯಾಗಿರಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಸರ್ವಜನರನ್ನು ಸಮನ್ವಯತೆಯಿಂದ ಸರ್ವರಿಗೂ ಸಮಪಾಲು ಸರ್ವಜನಾಂಗಕ್ಕೂ ಅನುಕೂಲ ಕಲ್ಪಿಸುವ ಸಿದ್ದಾಂತ ಹೊಂದಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಅದರಂತೆ ರಮೇಶ ಜಿಗಜಿಣಗಿ ಅವರಿಗೆ ಆರೋಗ್ಯ ಕೈಕೊಡುತ್ತಾ ಬರುತ್ತಿರುವದು ಜಿಗಜಿಣಗಿ ಅವರೇ ನಿಮಗೆ ವಯಸ್ಸಾಗಿದೆ ಮನೆಯಲ್ಲಿ ಮೊಮ್ಮಕ್ಕಳೊಂದಿಗೆ ಕಾಲ ಕಳೆಯಿರಿ ಎನ್ನುವ ಮುನ್ಸೂಚಣೆ ನೀಡುತ್ತಾ ಬಂದರೂ ಈ ಬಾರಿಯೂ ಚುಣಾವಣೆಗೆ ಸ್ಪರ್ದಿಸಿರುವ ವಯಸ್ಸಾದ ಎತ್ತು ಜಿಗಜಿಣಗಿ ಮುತ್ಯಾರನ್ನು ಶಾಶ್ವತವಾಗಿ ಮನೆಯಲ್ಲಿಯೇ ನೀವೃತ್ತಿ ಜೀವನ ಕಳೆಯುವಂತೆ ಮತದಾರರು ಮಾಡಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದರು.
ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಈ ಬಾರಿಯ ಲೋಕಸಭಾ ಚುಣಾವಣೆಯಲ್ಲಿ ಜಿಲ್ಲೆಯ ಮತದಾರರು ನನ್ನನ್ನು ಗೆಲ್ಲಿಸಿ ಕಳುಹಿಸಿದ್ದೇ ಆದರೆ ಅವಳಿ ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚಿಸಿ ನ್ಯಾಯವನ್ನು ದೊರಕಿಸಿಕೊಡಲು ಪ್ರಾಮಾಣಿಕವಾದ ಪ್ರಯತ್ನ ಪಡುತ್ತೇನೆ ಕ್ಷೇತ್ರದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಪ್ರದೇಶಗಳ ಮತದಾರರ ಕುಂದು ಕೊರತೆಗಳನ್ನು ನಿಭಾಯಿಸಲು ನಮ್ಮ ನಾಯಕರಾದ ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ ಜಿಲ್ಲೆಯ ಎಲ್ಲ ಚುಣಾಯಿತ ಪ್ರತಿನಿಧಿಗಳ ಸಮಕ್ಷಮ ಚರ್ಚಿಸಿ ನಿಮ್ಮಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದ ಅವರು ಪಕ್ಕದ ಬಾಗಲಕೋಟ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರ ಗೆಲುವಿನಲ್ಲಿ ತಮ್ಮದೂ ಪಾತ್ರ ಇರಬೇಕೆಂದು ಮನವಿ ಮಾಡಿದರು.
ಈ ವೇಳೆ ಶ್ರೀಶೈಲ ಪತಂಗಿ, ಉಸ್ಮಾನಸಾಬ ಪಟೇಲ, ಸದಾನಂದ ನಿಂಗನೂರ ಮಾತನಾಡಿದರು.
ಕಲ್ಲು ದೇಸಾಯಿ, ರಫೀಕಹ್ಮದ ಪಕಾಲಿ, ಚನಮಲ್ಲಪ್ಪ ಗಿಡ್ಡಪ್ಪಗೋಳ, ಈರಣ್ಣ ಪಟ್ಟಣಶೆಟ್ಟಿ, ಸಿ.ಪಿ.ಪಾಟೀಲ, ಚನ್ನಪ್ಪಗೌಡ ಪಾಟೀಲ, ತಾನಾಜಿ ನಾಗರಾಳ, ಕಮಲಾಬಾಯಿ ಮಾಕಾಳಿ, ಶ್ರೀಮತಿ ಮುಸ್ಕಾನ ಶಿರಬೂರ, ಅನೇಕ ಪ್ರಮುಖರು ವೇದಿಕೆ ಮೇಲೆ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ :ಸಚಿವ ಶಿವಾನಂದ
Related Posts
Add A Comment

