ಬೆಕಿನಾಳದಲ್ಲಿ ನಡೆದ ಧರ್ಮಸಭೆಯನ್ನು ಉದ್ಘಾಟಿಸಿದ ಡಾ.ಪ್ರಭುಗೌಡ ಅಭಿಮತ
ಕಲಕೇರಿ: ನಮ್ಮ ಪ್ರಾಂಪಚಿಕ ಜೀವನದಲ್ಲಿ ಯಶಸ್ಸು ಕಾಣಲು ಗುರು ಮತ್ತು ಗುರಿ ಬಹುಮುಖ್ಯ ಸಾರ್ಥಕ ಬದುಕನ್ನು ಕಾಣಲು ಪ್ರತಿಯೋಬ್ಬರು ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಗುರುಗಳು ಗುರಿಯನ್ನು ತೋರುತ್ತಾರೆ, ಅದು ಬದುಕಿನ ದಾರಿಯೂ ಹೌದು. ಗುರು ಮತ್ತು ಗುರಿಯ ದರ್ಶನ ನೀಡುವುದೇ ಧರ್ಮಸಭೆಯ ಮೂಲ ದ್ಯೇಯವಾಗಿರುತ್ತದೆ ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕ ಡಾ.ಪ್ರಭುಗೌಡ ಲಿಂಗದಳ್ಳಿ (ಚಭನೂರ) ಹೆಳಿದರು.
ಕಲಕೇರಿ ಸಮಿಪದ ಬೇಕಿನಾಳ ಗ್ರಾಮದ ಶಕ್ತಿಪೀಠ ಮಾತೇಮಹೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಧರ್ಮ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ,ಆಚಾರ ವಿಚಾರಗಳನ್ನು ಯುವ ಜನತೆಯಲ್ಲಿ ಬಿತ್ತುವ ಕಾರ್ಯವನ್ನು ನಾವಿಂದು ಮಾಡಬೇಕಾಗಿದೆ, ಯುವ ಸಮೂಹ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಪಡೆದುಕೊಳ್ಳಬೇಕು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ಬೇಕಿನಾಳ-ವಣಕಿಹಾಳ ಶಕ್ತಿಪೀಠದ ಮಹೇಶಮುತ್ಯಾ ಅವರು ಮಾಡುತ್ತಿರುವ ಧಾರ್ಮಿಕ ಕಾರ್ಯಗಳು ನಿಜಕ್ಕೂ ಶ್ಲಾಘನಿಯ ಎಂದು ಅವರು ಹೆಳಿದರು.
ಆಲೂರ ಹಿರೇಮಠದ ಕೇಂಚವೃಷಬೇಂದ್ರ ಶಿವಾಚಾರ್ಯರ ಸಾನಿಧ್ಯದಲ್ಲಿ, ಮಾತೇಮಹೇಶ್ವರಿ ದೇವಸ್ಥಾನದ ಮಹೇಶಮುತ್ಯಾ ಅವರ ನೇತ್ರತ್ವದಲ್ಲಿ ದೇವಿಗೆ ರುದ್ರಾಭಿಷೇಕ ಲೋಕ ಕಲ್ಯಾಣಾರ್ಥವಾಗಿ ಹೋಮ ಹವನಗಳು ದೇವಿಯ ದೇವಸ್ಥಾನದಲ್ಲಿ ನಡೆದವು.
ನಾವದಗಿ ಬ್ರಹನ್ಮಠದ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು,ಚಬನೂರ ಹಿರೇಮಠದ ಜ್ಯೋತಿಷ್ಯರತ್ನ ರಾಮಲಿಂಗಯ್ಯ ಸ್ವಾಮಿಜಿ, ಅಮರಗೋಳದ ಬಸವಲಿಂಗ ಸ್ವಾಮಿಗಳು ಆಶಿರ್ವಚನ ನಿಡಿದರು.
ಈ ವೇಳೆ ವಿವಿದ ಕ್ಷೇತ್ರಗಳ ಸಾಧಕರಿಗೆ ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಳ್ಳೇಪ್ಪಗೌಡ ಚೌದ್ರಿ, ಸುರೇಶಬಾಬುಗೌಡ ಬಿರಾದಾರ ಪೀರಾಪುರ, ಎಂ ಎಲ್ ವಡ್ಡರ್, ನಾನಾಗೌಡ ಡವಳಾರ, ಈಶ್ವರಪ್ಪ ಸಜ್ಜನ್, ಸಿದ್ದನಗೌಡ ಪಾಟೀಲ, ಗುರುಪಾದಪ್ಪಗೌಡ ಪೋಲಿಸ್ಪಾಟೀಲ, ಪ್ರಭುಗೌಡ ಪಾಟೀಲ, ವಿಜುಗೌಡ ಚೌದ್ರಿ, ಚಂದ್ರುಗೌಡ ಪಾಟೀಲ, ಅನೀಲ ರಾಠೋಡ, ದೇವು ರಾಠೋಡ, ಶ್ರೀಶೈಲ ವಾಲಿಕಾರ ಸೇರದಂತೆ ಇತರರು ಇದ್ದರು

