ವಿಜಯಪುರ: ಪ್ರಾಮಾಣಿಕ ಸಮಾಜ ಸೇವೆಯಿಂದ ಸದೃಢ ಸಮಾಜ ನಿರ್ಮಾಣಕ್ಕೆ ಯುವಕರು ಪಣ ತೊಡಬೇಕು. ಸಾಮಾಜಿಕ ಅಸಮಾನತೆ ಹೋಗಲಾಡಿಸುವುದು ಎಲ್ಲರ ಮುಖ್ಯ ಗುರಿಯಾಗಿರಲಿ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಹೇಳಿದರು.
ಅವರು ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ನಗರ ಘಟಕದ ಉದ್ಘಾಟನೆ ಹಾಗೂ ಡಾ.ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ತಮ್ಮ ಸಹವಾಸದ ಚಿಂತನೆಯನ್ನು ಬುದ್ಧಿವಂತಿಕೆಯಿಂದ ಆರಿಸಿಕೊಂಡು, ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಯುವಕರ ಬದುಕು ತಪಸ್ವಿಯಂತಾಗಬೇಕು. ಅವರು ತಮ್ಮ ಬದುಕಿನಲ್ಲಿ ಸಹಕಾರ, ಸಹಬಾಳ್ವೆ, ಸಹೋದರತ್ವ, ಶಿಸ್ತು, ಸಮಯ ಪ್ರಜ್ಞೆ, ಆತ್ಮವಿಶ್ವಾಸ, ದೃಢ ನಂಬಿಕೆ, ಶ್ರದ್ಧಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಆದರ್ಶ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವ್ಹಿ ಸಿ ನಾಗಠಾಣ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಭವಿಷ್ಯಕ್ಕಾಗಿ ಸತ್ಯ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಶ್ರಮಿಸಬೇಕು ಎಂದು ಹೇಳಿದರು.
ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ವೇದಿಕೆಯ ಉದ್ದೇಶ, ಗುರಿ, ಸಾಮಾಜಿಕ ಪ್ರಜ್ಞೆಯ ಕಾರ್ಯ ಚಟುವಟಿಕೆಗಳ ಕುರಿತು ತಿಳಿಸುತ್ತಾ,ಆಧುನಿಕ ಯುಗದಲ್ಲಿ ದೇಶದ ಭವಿಷ್ಯ ಯುವಕರ ಕೈಯಲ್ಲಿದ್ದು, ಯುವ ಪೀಳಿಗೆ ಅಂಬೇಡ್ಕರ್ ಅವರ ವಿಚಾರಧಾರೆಯನ್ನರಿತು, ಮುನ್ನಡೆದಾಗ ಭವ್ಯ ರಾಷ್ಟ್ರದ ಕನಸು ಸಾಕಾರಗೊಳ್ಳುತ್ತದೆ ಎಂದು ಹೇಳಿದರು.
ಸಿದ್ದಸಿರಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಆರ್ ಟಿ ಪಾಟೀಲ, ಉಪನ್ಯಾಸಕ ಅಮರೇಶ ಸಾಲಕ್ಕಿ ಮುಖ್ಯ ಅತಿಥಿಗಳಾಗಿದ್ದರು.
ನಗರ ಘಟಕದ ನೂತನ ಅಧ್ಯಕ್ಷರಾಗಿ ಜಗದೀಶ ಗುಳೇದಗುಡ್ಡ, ಉಪಾಧ್ಯಕ್ಷರಾಗಿ-ಸಂತೋಷ ಹೆಗಡೆ,ಅನಿಲ ಮುಳಸಾವಳಗಿ,ಪ್ರಧಾನ ಕಾರ್ಯದರ್ಶಿ-ಆಕಾಶ ರಾಮತೀರ್ಥ,ಕಾರ್ಯದರ್ಶಿ-ಪ್ರಶಾಂತ ಹಾರವಾಳ,ಸಹ ಕಾರ್ಯದರ್ಶಿ-ಐಗೊಂಡ ಕಗ್ಗೋಡ,ಸಂಘಟನಾ ಕಾರ್ಯದರ್ಶಿ-ಆಕಾಶ ಕೋಳಿ,ಸಹ ಸಂಘಟನಾ ಕಾರ್ಯದರ್ಶಿ-ಗುರುದಾಸ ಗುಗ್ಯಾಳ,ಖಜಾಂಚಿ-ದತ್ತಾತ್ರೇಯ ವಡ್ಡರ ಅವರು ಅಧಿಕಾರ ಸ್ವೀಕರಿಸಿದರು.
ವೈಷ್ಣವಿ ಬಳ್ಳಾರಿ, ಅರುಣ, ಉದಯ, ಸಂಪ್ರೀತ, ರಾಘವೇಂದ್ರ, ಜೇಮ್ಸ್, ಕೃಷ್ಣಾ, ಮನೋಜ್, ಪ್ರವೀಣ, ಮಲ್ಲು, ಪ್ರತೀಕ, ಸೋಮನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

