ಆಲಮಟ್ಟಿ: ಸಂವಿಧಾನ ಶಿಲ್ಲಿ, ವಿಶ್ವಜ್ಞಾನಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮನುಸ್ಮೃತಿ ಆವಣಿ೯ಯವಾಗಿದೆ ಎಂದು ಆಲಮಟ್ಟಿ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎ.ಹೇಮಗಿರಿಮಠ ಹೇಳಿದರು.
ಭಾನುವಾರ ಸ್ಥಳೀಯ ಎಂ.ಎಚ್.ಎಂ.ಪಪೂ ಕಾಲೇಜು ಆವರಣದಲ್ಲಿ ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೩ ನೇ ಜಯಂತಿ ಕಾರ್ಯಕ್ರಮದ ನಿಮಿತ್ಯ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶ್ರದ್ಧೆಯಿಂದ ಪಡೆದ ಶಿಕ್ಷಣವೇ ಅಂಬೇಡ್ಕರ್ ಅವರನ್ನು ಜಗದಲ್ಲಿ ಮಿನುಗುವಂತೆ ಮಾಡಿದೆ.ದೇಶದ ಅಪ್ರತಿಮ ಅಂಬೇಡ್ಕರ್ ಎಂಬ ಸರಳತೆಯ ಪ್ರತಿಭೆಗೆ ಇಡೀ ವಿಶ್ವವೇ ಇಂದು ಗೌರವನಮನ ಸಲ್ಲಿಸಿ ಧನ್ಯತೆಭಾವ ಮೆರೆಯುತ್ತಿದೆ. ಅಂಬೇಡ್ಕರ್ ಅವರಲ್ಲಿ ಜ್ಞಾನ ಭಂಡಾರದ ಅಗಾಧತೆ ಎಂಥದಿತ್ತು ಎಂಬುದನ್ನು ನಾವು ಅರಿಯಬಹುದು. ದೇಶದ ಜನತೆಯ ನೆಮ್ಮದಿಯ ಬದುಕಿಗೆ ಪವಿತ್ರ,ಅದ್ಭುತ ಸಂವಿಧಾನ ಅವರು ನೀಡಿದ್ದಾರೆ. ಸಂವಿಧಾನದ ಅಡಿಯಲ್ಲಿ ನಾವುಗಳು ಜೀವನಪಥ ಸಾಗಿಸಿದರೆ ಯಶಸ್ಸು ಕಾಣಬಹುದು ಎಂದರು.
ಬಾಬಾಸಾಹೇಬರ ದೂರದೃಷ್ಟಿಯ ಚಿಂತನೆ, ವಿಶಾಲ ಮನಸ್ಥಿತಿಯ ಅಧ್ಯಯನ, ಮಾನವೀಯ ಮೌಲ್ಯಗಳ ಸಾಮಾಜಿಕ ಕಳಕಳಿ ದೈತ್ಯ ರೂಪದ ಪರಿಮಳಗಳಾಗಿವೆ. ಜಿಡ್ಡಗಟ್ಟಿ ಬೇರು ಬಿಟ್ಟಿದ ಸಾಮಾಜಿಕ ಅಸ್ಪೃಶ್ಯತೆ ತೊಲಗಿಸಲು ಚಿಂತನಾರ್ಹ ಸ್ಮರಣ ಶಕ್ತಿಯೊಂದಿಗೆ ಅವರು ಶ್ರಮಿಸಿದ್ದಾರೆ. ಅವರ ವ್ಯಕ್ತಿತ್ವ, ಸಾಧನೆ ಅನುಪಮವಾಗಿದೆ ಎಂದರು.
ಅಂಬೇಡ್ಕರ್ ಅವರ ಬದುಕು ಶ್ರೇಷ್ಠತೆಯ ಶ್ರೇಣಿಯಲ್ಲಿ ನಡೆದಿವೆ. ಸಮಾನತೆ, ಭ್ರಾತೃತ್ವದ ಪರಿಕಲ್ಪನೆಯಿಂದ ವ್ಯಕ್ತಿಗೌರವಕ್ಕೆ ಪಾತ್ರರಾಗಿರುವ ಅಂಬೇಡ್ಕರ್ ಅವರ ವಿಚಾರಧಾರೆಗಳು ಸದಾಕಾಲವೂ ಪ್ರಸ್ತುತವಾಗಿವೆ. ಮಹಾನ್ ನಾಯಕನ ತತ್ವಾದರ್ಶಗಳು ಸ್ಪೂರ್ತಿಯ ಸೆಲೆಯಾಗಿದೆ.ಸಂವಿಧಾನವೇ ಭಾರತದ ಸಂಜೀವಿನಿ ಅಗಿದೆ ಎಂದು ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಅಭಿಪ್ರಾಯಿಸಿದರು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜಿಸಿ ಗೌರವಿಸಲಾಯಿತು. ಗಂಗಾಧರ ಹಿರೇಮಠ, ಈರಣ್ಣ ಕುಮಟಗಿ, ಶಾಂತೂ,ತಡಸಿ, ತಿಮ್ಮಣ್ಣ ದಾಸರ, ಗೋಪಾಲ ಬಸಪ್ಪ ವಡ್ಡರ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

