ಆಲಮಟ್ಟಿ: ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಲು ಸಂವಿಧಾನವೇ ಮೂಲ ಕಾರಣ.ಇಂಥ ಪವಿತ್ರ ಗ್ರಂಥದ ಅಡಿಯಲ್ಲಿ ಬದುಕು ಕಟ್ಟಿಕೊಳ್ಳಲು ಹಾಗೂ ಜೀವನದ ಪಯಣ ಸುಗಮವಾಗಿ ಸಾಗಿಸಲು ಅಂಬೇಡ್ಕರ್ ಅವರೇ ನಮಗೆಲ್ಲ ಪ್ರೇರಣೆ ಅಗಿದ್ದಾರೆ.ಅವರ ಮಾನವೀಯತೆ ತುಡಿತ ನಿಜಕ್ಕೂ ಅನನ್ಯ ಎಂದು ಮುಖ್ಯೋಪಾಧ್ಯಾಯ ಎನ್.ಬಿ.ಬಾಬಾನಗರ ಹೇಳಿದರು.
ಇಲ್ಲಿಗೆ ಸಮೀಪದ ಚಿಮ್ಮಲಗಿ ಭಾಗ-೨ ಪುನರ್ವಸತಿ ಕೇಂದ್ರದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ೧೩೩ ನೇ ಜನ್ಮ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಪ್ರಬುದ್ಧ ಸಮಾಜ,ಶೋಷಿತರ ಜೀವನ ಮಟ್ಟ ಸುಧಾರಿಸುವ ಕನಸು ಹೊಂದಿದ್ದ ಅಂಬೇಡ್ಕರ್ ಅವರ ಜೀವನ ಮೌಲ್ಯದ ಯಶೋಗಾಥೆ ದೇಶವಾಸಿಗಳಿಗೆಲ್ಲ ಸ್ಪೂರ್ತಿಯಾಗಿದೆ. ಸಮಗ್ರ ಗೌರವಾಧಾರಿತ ವ್ಯಕ್ತಿತ್ವದ ಹೆಗ್ಗಳಿಕೆಗೆ ಅಂಬೇಡ್ಕರ್ ಪಾತ್ರರಾಗಿದ್ದಾರೆ. ಅವರ ಕಳಕಳಿ, ಸಾಧನೆಯಿಂದಲೇ ಸಂವಿಧಾನದ ಅದ್ಭುತ ಗ್ರಂಥ ಮಾರ್ಗ ದೊರೆತಿದೆ. ಅಂಬೇಡ್ಕರ್ ಅವರ ಚಿಂತನೆ ವಿಶ್ವದೆಲ್ಲೆಡೆ ಘಮಘಮಿಸಿದೆ ಎಂದು ಬಣ್ಞಿಸಿದರು.
ವಿಶ್ವಜ್ಞಾನಿ ಅಂಬೇಡ್ಕರ್ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ ಗೌರವಿಸಲಾಯಿತು.
ಈ ವೇಳೆ ಸಹ ಶಿಕ್ಷಕ ಎಚ್.ವಿ.ಪಾಪುಲರ್, ಎಂ.ಬಿ.ಸದಬ, ಗುರುಮಾತೆ ಶ್ರೀಮತಿ ವಿ.ಪಿ.ನಂದಾಪುರಮಠ, ಶ್ರೀಮತಿ ಜೆ.ಆಯ್.ಹೊಸಮನಿ, ಎಸ್.ಜಿ.ಹೊನವಾಡ, ಬಿ.ಎಚ್.ನಡಕೂರ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

