ಕೊಲ್ಹಾರ: ತಾಲೂಕಿನ ಕಲಗುರ್ಕಿ ಗ್ರಾಮದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನದ ೧೦ನೇ ವಾರ್ಷಿಕೋತ್ಸವ ಏ.೧೬ರಿಂದ ೨೬ರ ವರೆಗೆ ವಿವಿಧ ಧಾರ್ಮಿಕ, ಮನೋರಂಜನಾ, ಹಾಸ್ಯ ವಿಡಂಬನೆ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮಗಳು ನಡೆಯುವವು ಎಂದು ಮಲ್ಲಿಕಾರ್ಜುನ ದೇವಸ್ಥಾನದ ದಶಮಾನೋತ್ಸವ ಸೇವಾ ಸಮೀತಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ನಡೆಯುವವು. ದಿನಾಂಕ ೧೬ ಮಂಗಳವಾರ ಸಾಯಂಕಾಲ ೭ ಘಂಟೆಗೆ ಪುರಾಣ ಕಾರ್ಯಕ್ರಮದ ಪ್ರಾರಂಭೋತ್ಸವ ಹರ ಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ನಡೆಯುವದು. ಕಲಬುರ್ಗಿ ಜಿಲ್ಲೆ ಚಿಂಚೊಳ್ಳಿ ತಾಲೂಕಿನ ಐನಾಪೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಪಂಚಾಕ್ಷರಿ ದೇವರ ಅಮ್ರತವಾಣಿಯಿಂದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪಠಣ ನಡೆಯುವದು. ಬಸಲಿಂಗಯ್ಯ ಗವಾಯಿಗಳು ಹಾಗೂ ಸುಭಾಸ ಸಂಗೀತಸೇವೆ ಒದಗಿಸುವರು.
ದಿನಾಂಕ ೨೫ ಗುರುವಾರ ಮುಂಜಾನೆ ೯ ಘಂಟೆಗೆ ಮುತ್ತೆöÊದೆಯರಿಗೆ ಉಡಿತುಂಬುವ ಕಾರ್ಯಕ್ರಮ ೧೦.೩೦ ಘಂಟೆಗೆ ಧರ್ಮಸಭೆ, ಸಾಯಂಕಾಲ ೬ ಘಂಟೆಗೆ ದೇಶ ಸೇವೇಗೈದ ನೀವೃತ್ತ ಸೈನಿಕರಿಗೆ ಪ್ರಗತಿಪರ ರೈತರಿಗೆ ಸನ್ಮಾನ ಹಾಗೂ ಮನರಂಜನಾ ಕಾರ್ಯಕ್ರಮ ಈ ಕಾರ್ಯಕ್ರಮದ ಸಾನಿಧ್ಯವನ್ನು ಹಾನಗಲ್, ಉಪ್ಪಿನಬೆಟಗೇರಿ, ಕಲಗುರ್ಕಿ, ಜೇವರ್ಗಿ, ಗುಳೇದಗುಡ್ಡ ಮತ್ತು ಮಲಘಾನ ಶ್ರೀಗಳು ವಹಿಸುವರು. ರಾಜಕೀಯ ಗಣ್ಯಮಾನ್ಯರು, ಮುಖಂಡರು ಅತಿಥಿಗಳಾಗಿ ಆಗಮಿಸುವರು.
ದಿನಾಂಕ ೨೬ ಶುಕ್ರವಾರ ಬೆಳಿಗ್ಗೆ ೫ ಘಂಟೆಗೆ ವೇದಮೂರ್ತಿ ಈರಯ್ಯ ಹಿರೇಮಠ ಇವರಿಂದ ಮಹಾರುದ್ರಾಭಿಷೇಕ ೮ ಘಂಟೆಗೆ ಸಂಗಮೇಶ್ವರ ದೇವಸ್ಥಾನದಿಂದ ಕಳಸ ಕುಂಭ, ಆರತಿ, ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮಲ್ಲಿಕಾರ್ಜುನ ದೇವರ ಭಾವಚಿತ್ರದ ಭವ್ಯ ಮೆರವಣಿಗೆಯು ಜರುಗುವದು. ನಂತರ ಕಳಸಾರೋಹಣ ನಡೆಯುವದು. ೧೦ ಘಂಟೆಗೆ ದೂರದರ್ಶನ ಕಲಾವಿದರಾದ ಗೋಪಾಲ ಇಂಚಗೇರಿ, ಶಿವು ಮುರಗೋಡ ಇವರಿಂದ ಹಾಸ್ಯದ ಹೊನಲು ಕಾರ್ಯಕ್ರಮ ಇರುವದು. ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಸಿದ್ದಪ್ಪ ಬಿದರಿ ಅವರಿಂದ ಆಧುನಿಕ ಶೈಲಿಯ ಕವಿವಾಚನ ಜರಗುವುದು. ಶ್ರೀಗಳು ಗಣ್ಯರು ಉಪಸ್ಥಿತರಿರುವರು.
ರಾತ್ರಿ ೧೦ ಘಂಟೆಗೆ ಮಲ್ಲಿಕಾರ್ಜುನ ನಾಟ್ಯ ಸಂಘ ಕಲಗುರ್ಕಿ ಇವರಿಂದ ಮಗಾ ಹೋದರು ಮಾಂಗಲ್ಯ ಬೇಕು ಎಂಬ ಸಾಮಾಜಿಕ ನಾಟಕ ಇರುವದು.
Subscribe to Updates
Get the latest creative news from FooBar about art, design and business.
Related Posts
Add A Comment
