ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜಯಮೃತ್ಯುಂಜಯ ಶ್ರೀ ಅಭಿಮತ
ದೇವರಹಿಪ್ಪರಗಿ: ಇಂದಿನ ಯುವಜನತೆ ತಮ್ಮ ಗ್ರಾಮ, ಪಟ್ಟಣ, ನಗರಗಳ ಹಿನ್ನೆಲೆ, ಇತಿಹಾಸ, ವಿಶಿಷ್ಟತೆಗಳ ಬಗ್ಗೆ ಅರಿತುಕೊಳ್ಳುವುದು ಅಗತ್ಯವಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕಲ್ಮೇಶ್ವರ ದೇವಸ್ಥಾನ ಸಭಾಭವನದಲ್ಲಿ ಶನಿವಾರ ಜರುಗಿದ ಶ್ರೀಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯ ತೃತಿಯ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ದೇವರಹಿಪ್ಪರಗಿ ಪಟ್ಟಣ ವೀರಶರಣರ ಜನ್ಮಭೂಮಿಯೆಂದೂ ಮುಂದಿನ ಪೀಳಿಗೆ ಗುರುತಿಸಲು ಸಹಕಾರಿಯಾಗುವಂತೆ ಇನ್ನಷ್ಟು ಅಭಿವೃದ್ಧಿಗೊಳಿಸಬೇಕಾಗಿದೆ ಎಂದರು.
ಗದ್ದಗಿಮಠದ ಮಡಿವಾಳೇಶ್ವರ ಸ್ವಾಮೀಜಿ, ಸದಯ್ಯನಮಠದ ವೀರಗಂಗಾಧರಶ್ರೀ, ಜಡಿಮಠದ ಜಡಿಸಿದ್ಧೇಶ್ವರಶ್ರೀಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸೃಷ್ಟಿ ಹಾಗೂ ಕುಮಾರಿ ಸುದೀಕ್ಷಾ ಬಿರಾದಾರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಕಾಶೀಪತಿ ದೇವಣಗಾಂವ ಅಧ್ಯಕ್ಷತೆ ವಹಿಸಿದ್ದರು. ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಯ ವ್ಹಿ.ಕೆ. ಪಾಟೀಲ ಸ್ವಾಗತಿಸಿದರು. ಸಂಚಾಲಕ ಬಿ.ಎಂ.ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಡಾ:ಬಿ.ಎಸ್.ಪಾಟೀಲ. ನಾಗರಾಳ ಹುಲಿ(ವೈದ್ಯಕೀಯ), ನೀಲಕಂಠಗೌಡ ಪಾಟೀಲ(ಶಿಕ್ಷಣ), ಅಶೋಕ ಪಾಟೀಲ (ಸಾಮಾಜಿಕ), ಕಮಲಾ ಗೆಜ್ಜೆ, ಮುರಾಳ (ಸಾಹಿತ್ಯ), ಮಲ್ಲಿಕಾರ್ಜುನ ಗಡಗಿ(ಸಾಮಾಜಿಕ), ಮಲ್ಲಪ್ಪ ತುಂಗಳ(ಸಹಕಾರಿ), ಡಿ.ಎಚ್.ಲಮಾಣಿ(ಶಿಕ್ಷಣ), ಬಸವರಾಜ ಕೌಜಲಗಿ(ಕ್ರೀಡೆ) ಗಣ್ಯರಿಗೆ ವಿಶೇಷ ಸನ್ಮಾನ ಜರುಗಿತು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಟ್ಟಣದ ಹಿರಿಯರು, ಶಿಕ್ಷಕರು ಹಾಗೂ ವೈದ್ಯಕೀಯ ಶಿಕ್ಷಣ ಅಧ್ಯಯನಿಸುತ್ತಿರುವ ನೂತನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಗುತ್ತಿಗೆದಾರ ಬಿ.ಎಸ್.ಬಿರಾದಾರ(ಬಬಲೇಶ್ವರ), ವಿಜಯಲಕ್ಷ್ಮೀ ಪಾಟೀಲ, ಸಿ.ಕೆ.ಕುದರಿ, ಶಾಂತಗೌಡ ಬಿರಾದಾರ(ಯರನಾಳ), ಡಾ:ಆರ್.ಆರ್.ನಾಯಿಕ್, ಬಿ.ಸಿ.ಹಿರೇಮಠ, ಕೆ.ಸಿ.ಮಠ,ಸಂಗಪ್ಪ ತಡವಲ್, ಜೆ.ಆರ್.ಬಿರಾದಾರ, ಕೆ.ಎಂ.ನಂದಿ, ಕೆ.ಕೆ.ಭಾವಿಮನಿ, ಜಿ.ಪಿ.ಬಿರಾದಾರ, ಶಾಂತಪ್ಪ ಪಡನೂರ, ವೈ.ಜಿ.ತಾವರಖೇಡ, ಗುರುಬಾಳ ಯರಗಲ್, ಗುರುರಾಜ ಕುಲಕರ್ಣಿ, ನಾಗರಾಜ ಬಿರಾದಾರ, ಮಲ್ಲಪ್ಪ ಅಗಸರ, ರಮೇಶ ಹಡಪದ, ಈರಣ್ಣ ಒಂಟೆತ್ತೀನ, ಕೆ.ಆಯ್.ಬಿರಾದಾರ ಕಾಶೀನಾಥ ರಾಮಗೊಂಡ, ರಮೇಶ ಕುಂಬಾರ ಸೇರಿದಂತೆ ಚುಟಕು, ಕಸಾಪ, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್, ಬಸವಶರಣ ಸಂಗಮ ಸೇವಾ ಸಮಿತಿ, ನಿವೃತ್ತ ನೌಕರರ ಸಂಘ ಹಾಗೂ ದೇವರಹಿಪ್ಪರಗಿ ಗೆಳೆಯರ ಬಳಗದ ಸರ್ವಸದಸ್ಯರು, ಮಡಿವಾಳ ಮಾಚಿದೇವ ಪ್ರತಿಷ್ಠಾನದ ಪದಾಧಿಕಾರಿಗಳು ಇದ್ದರು.

