ದೇವರಹಿಪ್ಪರಗಿ: ಪ್ರಧಾನಿ ಮೋದಿಯವರ ದೂರದೃಷ್ಠಿಯ ಫಲವಾಗಿ ಇಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಂದ್ರ ಸರ್ಕಾರದ ಒಂದೊಂದು ಯೋಜನೆಯ ಲಾಭ ಪಡೆದುಕೊಳ್ಳುವಂತಾಗಿದೆ. ಎಂದು ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಇತ್ತೀಚಿಗೆ ಜರುಗಿದ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರಸರ್ಕಾರ ರೈತ ಸಮ್ಮಾನ, ಉಜ್ವಲಾ, ಆತ್ಮನಿರ್ಭರ ನಿಧಿ, ಅಗ್ನಿಪಥ, ಗರೀಬ್ ಕಲ್ಯಾಣ ರೋಜಗಾರ್ , ಮತ್ಸö್ಯ ಸಂಪದ, ಜಲಜೀವನ ಮೀಷನ್ , ಆಯುಷ್ಮಾನ್ ಭಾರತ, ಮಾತೃತ್ವ ವಂದನಾ, ಫಸಲಭೀಮಾ, ಕೃಷಿ ಸಿಂಚಾಯಿ, ಆವಾಸ್, ಅಟಲ್ ಪಿಂಚಣಿ, ಸುಕನ್ಯಾ ಸಮೃದ್ಧಿ, ಭಾರತೀಯ ಜನೌಷಧಿ ಸೇರಿದಂತೆ ನೂರಾರು ಯೋಜನೆಗಳನ್ನು ರಾಷ್ಟ್ರದ ಪ್ರತಿ ಪ್ರಜೆಯ ಕಲ್ಯಾಣಕ್ಕಾಗಿ ಆರಂಭಿಸಿದ್ದು ಇಂದು ಇವುಗಳೆಲ್ಲಾ ಮನೆಮಾತಾಗಿವೆ. ಮುಂದಿನ ದಿನಗಳಲ್ಲಿ ಭಾರತೀಯರ ಅಭಿವೃದ್ಧಿಗೆ ಮೋದಿಯವರ ನಾಯಕತ್ವ ಅಗತ್ಯ ಆದ್ದರಿಂದ ನಾವೆಲ್ಲ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸೋಣ ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದರು.
ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಮಾತನಾಡಿ, ಜಿಲ್ಲೆಯ ಕಳಂಕರಹಿತ ರಾಜಕಾರಣಿಯಾಗಿ ರಮೇಶ ಜಿಗಜಿಣಗಿ ಸದ್ದಿಲ್ಲದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಅವರಿಗೆ ಮತ್ತೋಮ್ಮೆ ಅವಕಾಶ ನೀಡುವುದರ ಮೂಲಕ ಜಿಲ್ಲೆಯ ಅಭಿವೃದ್ಧಿಯನ್ನು ಹೆಚ್ಚಿಸೋಣ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಮಾತನಾಡಿ, ಈ ಬಾರಿಯ ಚುನಾವಣೆ ಧರ್ಮ ಹಾಗೂ ಅಧರ್ಮಗಳ ನಡುವಿನ ಹೋರಾಟ. ಈ ಹೋರಾಟದಲ್ಲಿ ಬಿಜೆಪಿಗೆ ಮತ ನೀಡಿ ಮೋದಿಯವರ ನಾಯಕತ್ವದಲ್ಲಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಕಂಕಣಬದ್ದರಾಗೋಣ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ಕಳೆದ ೧೧ ಚುನಾವಣೆಗಳ ಮೂಲಕ ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿಕೊಂಡ ರಮೇಶ ಜಿಗಜಿಣಗಿ ಪರ ಮತ ನೀಡಿ ಮೋದಿಯವರ ನಾಯಕತ್ವ ಬಲಪಡಿಸೋಣ ಎಂದರು.
ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಭೀಮನಗೌಡ ಸಿದರಡ್ಡಿ, ಈರಣ್ಣಾ ರಾವೂರ, ಶಿಲ್ಪಾ ಕುದರಗೊಂಡ, ಸಿದ್ದು ಬುಳ್ಳಾ, ಗಾಯತ್ರಿ ದೇವೂರ, ಮಳುಗೌಡ ಪಾಟೀಲ, ಪ್ರಕಾಶ ಡೋಣೂರಮಠ, ಶೇಖರಗೌಡ ಸಿದರಡ್ಡಿ, ಭೀಮನಗೌಡ ಲಚ್ಯಾಣ, ಪ್ರಕಾಶ ದೊಡಮನಿ, ಮಹಾಂತೇಶ ಬಿರಾದಾರ, ಸಂಗಯ್ಯ ಮೇಲಿನಮಠ, ರಾಮನಗೌಡ ವರ್ಕಾನಳ್ಳಿ, ಕಾಶೀನಾಥ ಸುಂಬಡ, ಸಂಜೀವ ಹಾರವಾಳ, ಮಲ್ಕು ಬಾಗೇವಾಡಿ, ಸಾಹೇಬಗೌಡ ಬಿರಾದಾರ, ಸಿದ್ದು ಬೋರಗಿ ಸೇರಿದಂತೆ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

