ಸಿಂದಗಿ: ತಾಲೂಕಿನ ಚಾಂದಕವಟೆ ಗ್ರಾಮದ ಬಸವೇಶ್ವರರ ಜಾತ್ರಾ ಮಹೋತ್ಸವ ನಿಮಿತ್ಯ ಏ.೦೯ರಿಂದ ಪ್ರತಿದಿನ ಸಾಯಂಕಾಲ ೦೭ ಗಂಟೆಗೆ ಬಸವಣ್ಣನವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖ್ಯಸ್ಥ ಗುರುರಾಜಗೌಡ ಪಾಟೀಲ ತಿಳಿಸಿದ್ದಾರೆ.
ಪ್ರವಚನವನ್ನು ಧಾರವಾಡ ಜಿಲ್ಲೆಯ ಬೆಳ್ಳೇರಿಯ ಶಿವಾನಂದ ಮಠದ ಪೂಜ್ಯ ಶ್ರೀ ಡಾ.ಬಸವಾನಂದ ಸ್ವಾಮಿಗಳು ನಡೆಸಿಕೊಡಲಿದ್ದಾರೆ. ಆದ್ದರಿಂದ ಎಲ್ಲ ಬಸವ ಭಕ್ತರು, ಅಕ್ಕಪಕ್ಕದ ಗ್ರಾಮಸ್ತರು ಪ್ರವಚನಕ್ಕೆ ಆಗಮಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ೧೬ ವರ್ಷದ ಒಳಗಿನ ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದ್ದು, ಅತೀ ಹೆಚ್ಚು ವಚನಗಳನ್ನು ಹೇಳಿದ ಮಕ್ಕಳಿಗೆ ಪ್ರಥಮ ಬಹುಮಾನ ೫೦೦೦, ದ್ವಿತೀಯ ಬಹುಮಾನ ೨೫೦೦, ತೃತೀಯ ಬಹುಮಾನ ೧೫೦೦ ರೂಪಾಯಿ ಬಹುಮಾನ ಜೊತೆಗೆ ಮತ್ತು ಬಾಗವಹಿಸಿದ ಎಲ್ಲ ಮಕ್ಕಳಿಗೂ ವಚನ ಪುಸ್ತಕಗಳನ್ನು ವಚನೋತ್ಸವ ಸಮಿತಿ ವತಿಯಿಂದ ನೀಡಲಾಗುವುದು. ಆಸಕ್ತಿಯುಳ್ಳ ಮಕ್ಕಳು ಶಿವಕುಮಾರ ಕಕ್ಕಳಮೇಲಿ ೯೯೭೨೪೩೫೭೬೪ ಇವರಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು. ಸ್ಪರ್ಧೆಯ ದಿನಾಂಕ ಮತ್ತು ಸಮಯ ತಿಳಿಸುತ್ತಾರೆ. ಮತ್ತು ಪ್ರವಚನದ ಸಂದರ್ಭದಲ್ಲಿ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಗುವುದು.
ಎ.೧೮ರಂದು ಸಾಯಂಕಾಲ ಬಸವೇಶ್ವರರ ರಥೋತ್ಸವ ಜರುಗುವುದು. ಎ.೧೯ರಂದು ಮಧ್ಯಾಹ್ನ ಜಂಗಿ ಕುಸ್ತಿ ಹಾಗೂ ಸಾಯಂಕಾಲ ಪಟಾಕಿ ಸುಡುವ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರಣ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಬೇಕೆಂದು ಬಸವೇಶ್ವರ ಜಾತ್ರಾ ಮಹೋತ್ಸವ ಸಮಿತಿಯ ಮುಖ್ಯಸ್ಥ ಗುರುರಾಜಗೌಡ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

