ನಿಡಗುಂದಿ: ಆಲಮಟ್ಟಿಯ ಜಲಾಶಯದ ನಿರ್ಮಾಣಕ್ಕಾಗಿ ಮುಳುಗಡೆಯಾಗಿ ಮತ್ತೊಂದೆಡೆ ಬದುಕು ಕಟ್ಟಿಕೊಂಡಿರುವ ಕಮದಾಳ ಗ್ರಾಮದ ಜನರ ತ್ಯಾಗ ದೊಡ್ಡದು, ಮತ್ತೊಬ್ಬರ ಏಳಿಗೆಗಾಗಿ ನಿಮ್ಮ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಕಮದಾಳ ಮುದ್ದೇಶಪ್ರಭು ಜಾತ್ರೆಯ ನಿಮಿತ್ತ ಏರ್ಪಡಿಸಿದ್ದ “ಹೊಳಿಸಾಲಿನ ಹುಲಿ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಳುಗಡೆಯಾಗಿ ಬೀಳಗಿ ತಾಲ್ಲೂಕಿನಿಂದ ಏಳು ಗ್ರಾಮದ ಜನರು ಒಂದೆಡೆ ನಿಡಗುಂದಿಯಲ್ಲಿ ನೆಲೆ ನಿಂತರೂ, ತಮ್ಮ ಸಂಪ್ರದಾಯವನ್ನು ಮರೆಯದ ಈ ಸಂತ್ರಸ್ತರ ಕಾರ್ಯ ಸ್ಮರಣೀಯ ಎಂದರು. ತಮ್ಮ ಭೂಮಿ, ಮನೆ, ಮನಸ್ಸುಗಳನ್ನು ಕಳೆದುಕೊಂಡಿರುವ ಸಂತ್ರಸ್ತರ ಆರ್ಥಿಕ ಏಳಿಗೆಗೆ ಸರ್ಕಾರ ಪ್ರತ್ಯೇಕ ಯೋಜನೆ ಜಾರಿಗೆ ತರಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
೧೩೬ ಗ್ರಾಮಗಳು ಮುಳುಗಡೆಯಾಗಿ ಹೊಸ ಹೊಸ ಪುನರ್ವಸತಿಗಳು ನಿರ್ಮಾಣಗೊಂಡರೂ ಇಡೀ ಬದುಕನ್ನು ಕಟ್ಟಿಕೊಡಲು ಸಾಧ್ಯವಾಗಿಲ್ಲ. ಮತ್ತೆ ಮೊದಲಿನ ಗ್ರಾಮದ ಸಂಪ್ರದಾಯ ಬೆಳೆಯಲು ಒಂದು ಜನಾಂಗವೇ ಬದಲಾಗಬೇಕು ಎಂದರು.
ಸಾಮಾಜಿಕ ನಾಟಕ, ಜಾತ್ರೆಗಳಿಂದ ಭಕ್ತಿಯ ಭಾವ, ಸುಸಂಸ್ಕೃತ, ಗ್ರಾಮದ ಒಗ್ಗಟ್ಟು ಪ್ರದರ್ಶನಕ್ಕೆ ಕಾರಣವಾಗುತ್ತದೆ, ನಾಥ ಪಂಥದ ಪ್ರತಿಪಾದಕ ಮುದ್ದೇಶಪ್ರಭುಗಳ ಪವಾಡಗಳು ಕೂಡಾ ಅಪಾರ. ಸಂಸಾರದಲ್ಲಿದ್ದು ಪಾರಮಾರ್ಥ ಸಾಧನೆ ಮಾಡಿದ ಮಹಾನ್ ಪುರುಷ ಎಂದು ನುಗ್ಗಲಿ ಅಭಿಪ್ರಾಯಪಟ್ಟರು. ಯಾರೂ ನಮ್ಮ ಬದುಕನ್ನು ಕಟ್ಟಿಕೊಡಲು ಸಾಧ್ಯವಿಲ್ಲ, ನಿರುದ್ಯೋಗವನ್ನು ಮೆಟ್ಟಿ, ಚಿಕ್ಕ ಚಿಕ್ಕ ಬಂಡವಾಳದೊAದಿ ಸ್ವಂತ ಉದ್ಯೋಗ ಮಾಡುವತ್ತ ಯುವಕರು ಚಿಂತನೆ ಮಾಡಬೇಕು, ಉತ್ತಮ ಶಿಕ್ಷಣ ಎಲ್ಲರೂ ಪಡೆಯಬೇಕು ಅಂದಾಗ ಮಾತ್ರ ನಾವು ಅತ್ಯುತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸAಭ್ರಮದ ರಥೋತ್ಸವ:
ಸಹಸ್ರಾರು ಜನರ ಭಕ್ತರ ಮಧ್ಯೆ ಮುದ್ದೇಶಪ್ರಭುಗಳ ರಥೋತ್ಸವವು ಸಂಭ್ರಮ,ಸಡಗರದಿAದ ಜರುಗಿತು.
ಎಂ.ಎನ್ ಪುಜಾರಿ, ಮುದ್ದಪ್ಪ ಗೌಡರ, ವೀರಭದ್ರಯ್ಯ ಹಿರೇಮಠ, ರೇವಡಿ, ಮುಖಂಡರಾದ ಮುದ್ದಪ್ಪ ಯಳ್ಳಿಗತ್ತಿ, ಎಂ.ಕೆ. ಮುತ್ತಣ್ಣವರ, ಚನ್ನಬಸು ಚೆನ್ನಿಗಾವಿ, ರಾಜು ಮುಚ್ಚಂಡಿ, ಹನುಮಂತ ಬೇವಿನಕಟ್ಟಿ, ಆರ್.ಬಿ. ಗೌಡರ, ಯಮನಪ್ಪ ಈಳಗೇರ, ಮುತ್ತು ಸಾವಳಗಿ, ಹನುಮಂತ ಮಾಳಗೊಂಡ, ರಾಮನಗೌಡ ಹೊಸಗೌಡರ, ಕರಿಯಪ್ಪ ಸಿಂದಗಿ, ಬಸವರಾಜ ಮೇಟಿ, ರಾಮಣ್ಣ ಶಿರೂರ, ಸಲೀಂ ದಡೆದ, ಎಂ.ಎಂ. ಮುಲ್ಲಾ, ಅಶೋಕ ಗುಂಡಿನಮನಿ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ಡ್ಯಾಂ ನಿರ್ಮಾಣಕ್ಕೆ ಕಮದಾಳ ಜನತೆಯ ತ್ಯಾಗ ದೊಡ್ಡದು :ನುಗ್ಗಲಿ
Related Posts
Add A Comment

