ರಾಜು ಆಲಗೂರ ಗೆಲುವಿಗೆ ಶ್ರಮಿಸಿ :ಶಾಸಕ ನಾಡಗೌಡ
ತಾಳಿಕೋಟಿ: ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಅವರ ಗೆಲುವಿಗೆ ನಮ್ಮೆಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ ಅಪ್ಪಾಜಿ ಹೇಳಿದರು.
ಶನಿವಾರ ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಲೋಕಸಭೆ ಚುನಾವಣೆ ಪ್ರಯುಕ್ತ ಕರೆದ ತಾಳಿಕೋಟಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷದ ಸರಕಾರ ಆಡಳಿತದಲ್ಲಿದೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ನಮ್ಮ ಸರ್ಕಾರವು ರಾಜ್ಯದ ಜನರ ವಿಶ್ವಾಸವನ್ನು ಗಳಿಸಿದೆ. ಆದರೆ ಇದರ ಕುರಿತು ಬಿಜೆಪಿಯವರು ಅವರಲ್ಲಿ ತಪ್ಪು ಅಭಿಪ್ರಾಯಗಳನ್ನು ಮೂಡಿಸುತ್ತಿದ್ದಾರೆ. ಬಿಜೆಪಿಯವರಿಗೆ ದ್ವೇಷದ ರಾಜಕಾರಣ ಮಾಡುವುದು ಬಿಟ್ಟು ಬೇರೇನು ಬರುವುದಿಲ್ಲ. ಕೇವಲ ಭಾವನಾತ್ಮಕ ವಿಷಯಗಳನ್ನು ತೆಗೆದುಕೊಂಡು ಚುನಾವಣೆಗಳನ್ನು ಎದುರಿಸುತ್ತಿದ್ದಾರೆ. ಅವರ ಈ ಮುಖವಾಡವನ್ನು ಕಳಚುವ ಕೆಲಸ ನಮ್ಮ ಕಾರ್ಯಕರ್ತರು ಮಾಡಬೇಕಾಗಿದೆ. ಯಾರು ಏನೇ ಮಾಡಿದರೂ ನಮ್ಮ ಅಭ್ಯರ್ಥಿ ರಾಜು ಆಲಗೂರ ಅವರ ಗೆಲುವನ್ನು ತಪ್ಪಿಸಲು ಸಾಧ್ಯವಿಲ್ಲ. ಇದಕ್ಕಾಗಿ ನಾವೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸೋಣ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಹತ್ತು ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಪಕ್ಷ ಏನು ಮಾಡಿದೆ ಎಂಬುದನ್ನು ಜನರಿಗೆ ತಿಳಿಸಬೇಕಾಗಿದೆ. ಕೇವಲ ಧಾರ್ಮಿಕ ಭಾವನೆಗಳನ್ನು ಚುನಾವಣೆ ವಿಷಯಗಳನ್ನಾಗಿ ಮಾಡಿ ದೇಶದ ಜನರಿಗೆ ಬಿಜೆಪಿ ಮೋಸ ಮಾಡುತ್ತಿದೆ. ನಾವು ಅಭಿವೃದ್ಧಿಯ ಮೂಲಕ ಚುನಾವಣೆಯನ್ನು ಎದುರಿಸುತ್ತೇವೆ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಅದನ್ನು ಕರ್ನಾಟಕದಲ್ಲಿ ನಾವು ಸಾಧಿಸಿ ತೋರಿಸಿದ್ದೇವೆ. ನಮ್ಮ ಕಾರ್ಯಗಳೇ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಇದಕ್ಕಾಗಿ ನಾವೆಲ್ಲರೂ ಟೊಂಕ ಕಟ್ಟಿ ನಿಲ್ಲೋಣ ಎಂದರು.
ಕೆಪಿಸಿಸಿ ಸದಸ್ಯ ಬಿಎಸ್ ಪಾಟೀಲ ಯಾಳಗಿ ಮಾತನಾಡಿದರು.
ಮುಖಂಡ ವಿಜಯ ಸಿಂಗ್ ಹಜೇರಿ ವೀರೇಶ್ ಬಾಗೇವಾಡಿ, ಶಿವರಾಜ ನಾಗೂರ ಜೈ ಭೀಮ್ ಮುತ್ತಗಿ ಸಿದ್ದು ಬಾರಿಗಿಡ ಸಂದೇಶ ದೇಸಾಯಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ, ಪ್ರಭುಗೌಡ ಮದರ್ಕಲ್ ಎಸ್. ಬಿ. ಕಟ್ಟಿಮನಿ, ವಿ.ಸ್ಹಿ. ಹಿರೇಮಠ, ಅಕ್ಕಮಹಾದೇವಿ ಕಟ್ಟಿಮನಿ, ಕಾಸಿಂ ಪಟೇಲ ಪಾಟೀಲ, ನೀಲಮ್ಮ ಪಾಟೀಲ, ಸುರೇಶಗೌಡ ನಾಡಗೌಡ(ಬಿಜಲಭಾವಿ), ಶರಣುಧಣಿ ದೇಶಮುಖ, ಸಿಕಂದರ ವಠಾರ, ರಾಜೇಸಾಬ ಒಂಟಿ, ಅಬ್ದುಲರಜಾಕ ನಾಡಗೌಡ, ಸಂಗನಗೌಡ ಅಸ್ಕಿ, ಚಿನ್ನುಧಣಿ ಬಸರಕೋಡ, ಕಾರ್ತಿಕ್ ಕಟ್ಟಿಮನಿ. ಮಹೇಶ್ ಚಲವಾದಿ, ಕಾಶಿನಾಥ ದೇಸಾಯಿ ಫಯಾಜ್ ಉತ್ನಾಳ, ಕೆ ಐ ಸಗರ, ಗೋಪಾಲ ಕಟ್ಟಿಮನಿ, ಆಸಿಪ್ ಕೆಂಬಾವಿ, ತುಕಾರಾಂ ಗೊಂದಳಿ. ಆಸಿಫ ಕೆಂಭಾವಿ ಮತ್ತಿತರರು ಉಪಸ್ಥಿತರಿದ್ದರು.

