ಇಂಡಿ: ಸಮಾನತೆಯ ಸಮಾಜ ನಿರ್ಮಾಣಗೊಳ್ಳುವಲ್ಲಿ ಡಾ. ಬಾಬು ಜಗಜೀವನರ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿ ಸಮಾನತೆ ಇರಬೇಕು.ಅರ್ಥಿಕವಾಗಿ ಮುಂದುವರೆದರೆ ಮಾನವ ಸ್ವಾವಲಂಬನೆ ಪಡೆಯಲು ಸಾದ್ಯ ಎಂದು ಕರೆ ನೀಡಿದ ಡಾ. ಬಾಬು ಜಗಜೀವನರಾಮರ ಕಾರ್ಯ ಶ್ರೇಷ್ಠವಾದುದು ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.
ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಡಾ. ಬಾಬು ಜಗಜೀವನರಾಮದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಉಪಪ್ರಧಾನಿಯಾಗಿ, ಕೇಂದ್ರ ಸರಕಾರದಲ್ಲಿ ವಿವಿಧ ಮಂತ್ರಿಗಳಾಗಿ ದೇಶದಲ್ಲಿರುವ ಜಾತಿ ಪದ್ದತಿ ಕೆಡುಕುಗಳನ್ನು ಶೋಧಿಸಿ ದೂರ ಮಾಡಿ ಬದಲಾವಣೆ ತರುವ ಕೆಲಸ ಮಾಡಿದರು ಎಂದರು.
ತಹಸೀಲ್ದಾರ ಮಂಜುಳಾ ನಾಯಕ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ.ಇಂಡಿ, ಚಂದ್ರಶೇಖರ ಹೊಸಮನಿ ಮಾತನಾಡಿದರು.
ಚುನಾವಣೆ ಶಿರಸ್ತೆದಾರ ಆರ್.ಬಿ.ಮೂಗಿ, ಎಂ.ಬಿ.ಕೊಡತೆ, ಎಸ್.ಆರ್.ಮುಜಗೊಂಡ, ಪ್ರದೀಪ ಡೊಳ್ಳಿನ, ಶಿವು ಬಗಲಿ, ರಮೇಶ ಧರೆಣ್ಣನವರ, ಅಮರ ಬಾಸೂತಕರ, ದತ್ತಾ ಬಂಡೆನವರ, ರಾಜು ಪಡಗಾನೂರ, ಮೀರಾ ವಾಘಮೋರೆ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

