ಸಿಂದಗಿ: ಗುಬ್ಬೇವಾಡ ಮತ್ತು ಬನ್ನೇಟ್ಟಿ ಪಿಎ ಗ್ರಾಮದ ರೈತರಿಗೆ ಸತತವಾಗಿ ಎರಡು ತಿಂಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗದೇ ರೈತರು ಕಂಗಾಲಾಗಿ, ದನಕರುಗಳಿಗೆ ನೀರು ಪರದಾಡುವ ಸ್ಥಿತಿ ಎದುರಾಗಿದೆ ಎಂದು ರೈತ ಧರ್ಮಣ್ಣ ಗಬಸಾವಳಗಿ ಹೇಳಿದರು.
ತಾಲೂಕಿನ ಗುಬ್ಬೇವಾಡ ಗ್ರಾಮದ ರೈತರಿಂದ ಪಟ್ಟಣದಲ್ಲಿರುವ ಹೆಸ್ಕಾಂ ಕಛೆರಿಗೆ ಬೀಗ ಜಡಿದು ಪ್ರತಿಭಟಿಸಿ ಮಾತನಾಡಿದ ಅವರು, ಈಗಾಗಲೇ ಎಇಇ ಅವರ ಗಮನಕ್ಕೆ ತಂದಿದ್ದರೂ ಅವರು ಯಾವುದೇ ಕ್ರಮಕೈಗೊಳ್ಳದೇ ದರ್ಪ ತೋರುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬನ್ನೇಟ್ಟಿ ಮತ್ತು ಗುಬ್ಬೇವಾಡ ಗ್ರಾಮದ ರೈತರಿಗೆ ೩೫೦ವೋಲ್ಟ್ ವಿದ್ಯುತ್ ಪೂರೈಕೆ ಮಾಡಬೇಕು. ಮತ್ತು ರೈತರಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ರೈತರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಶಿವಾನಂದ ಕೊಂಡಗೂಳಿ ಮಾತನಾಡಿ, ಈಗಾಗಲೇ ಕೊಳವೆಬಾವಿ ತೆರೆದ ಬಾವಿಗಳ್ಲಲಿ ನೀರಿಲ್ಲದೇ ಸಮಸ್ಯೆಗಳು ಸೃಷ್ಠಿಯಾಗಿದೆ. ಅದರಲ್ಲಿ ಹೆಸ್ಕಾಂ ವತಿಯಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡರು.
ಒಂದು ವೇಳೆ ಈ ಸಮಸ್ಯೆ ಪರಿಹರಿಸದಿದ್ದಲ್ಲಿ ಮತ್ತೆ ಇಲಾಖೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಹೆಸ್ಕಾಂ ಅಧಿಕಾರಿ ಮನಯನ್ನು ಸ್ವೀಕರಿಸಿ ಮಾತನಾಡಿದ ಅವರು, ಗುಬ್ಬೇವಾಡ ಗ್ರಾಪಂ ವ್ಯಾಪ್ತಿಯಲ್ಲಿ ಕಡಿಮೆ ಇರುವ ವೋಲ್ಟೆಜ್ನ್ನು ಹೆಚ್ಚಿಗೆ ಮಾಡಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಈ ವೇಳೆ ಸಿದ್ದು ಗಬಸಾವಳಗಿ, ಗೌರಿಶಂಕರ ಹುಬ್ಬಳ್ಳಿ, ಸಿದ್ದಲಿಂಗಪ್ಪ ಗಬಸಾವಳಗಿ, ಪಟೇಲ ಚಟ್ಟರಕಿ, ಗಂಗಾಧರ ಗಬಸಾವಳಗಿ, ಭೀಮಣ್ಣ ಜಾಯವಾಡಗಿ, ಮುತ್ತಣಗೌಡ ಪಾಟೀಲ, ಸಂತೋಷ ಗಬಸಾವಳಗಿ, ಶ್ರೀಶೈಲ ಕರಬಂಟನಾಳ, ಶಿವಾನಂದ ಲಾಳಸಂಗಿ, ಶರಣಪ್ಪ ನಾಯ್ಕೋಡಿ, ಹಣಮಂತ್ರಾಯ ಗಬಸಾವಳಗಿ, ಶರಣಬಸು ಜಾಯವಾಡಗಿ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

