ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದ ನಿರ್ಗತಿಕ ವಯೋವೃದ್ಧೆ ಈರಮ್ಮ ಬಡಿಗೇರ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿಯ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ ಬುಧವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಾ ಯೋಜನಾಧಿಕಾರಿ ಮಂಜುನಾಥ ಎಚ್.ಕೆ. ಮಾತನಾಡಿ, ದಾರಿಯಲ್ಲಿ ವಾಸ ಮಾಡುವವರಿಗೆ, ಯಾರೂ ನೋಡದೇ ಇರುವ ನಿರ್ಗತಿಕರ ಬದುಕನ್ನು ಹಸನ್ನಾಗಿಸಿ ಅವರ ಬದುಕನ್ನು ಕಟ್ಟಿಕೊಡುವ ಉದ್ದೇಶದಿಂದ ಮಾತೃಶ್ರೀ ಹೇಮಾವತಿ ಅಮ್ಮನವರು ನಿರ್ಗತಿಕರಿಗೆ ಮನೆಯನ್ನು ಕಟ್ಟಿಕೊಡುವದು ಮನದಾಸೆ ಹೊಂದಿದ್ದಾರೆ. ವಯೋವೃದ್ಧೆಯಾಗಿರುವ ಈರಮ್ಮ ಬಡಿಗೇರ ಅವರಿಗೆ ಉಳಿಯಲು ಸರಿಯಾದ ಮನೆ ಇಲ್ಲದೇ ಇರುವದರಿಂದಾಗಿ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ವಾತ್ಸಲ್ಯ ಎಂಬ ಮನೆಯನ್ನು ಕಟ್ಟಿಕೊಡುವ ಮೂಲಕ ಅವರಿಗೆ ಈ ಮನೆಯನ್ನು ಹಸ್ತಾಂತರ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಸುಮಾರು ೭೦ ಸದಸ್ಯರಿಗೆ ಪ್ರತಿ ತಿಂಗಳು ಮಾಶಾಸನ, ವರ್ಷದಲ್ಲಿ ಎರಢ್ಮೂರು ಸಲ ಪೌಷ್ಟಿಕ ಆಹಾರ ಸೇರಿ ಅವರಿಗೆ ಜೀವನಾವಶ್ಯಕ ಸಾಮಗ್ರಿಗಳನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಣಕಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಕುಂಬಾರ, ಬಸವಸೈನ್ಯ ಮುಖಂಡ ಶ್ರೀಕಾಂತ ಕೊಟ್ರಶೆಟ್ಟಿ, ಸಂಸ್ಥೆಯ ವಲಯದ ಮೇಲ್ವಿಚಾರಕ ಅನಂತಗೌಡ ರಂಗೊಳ್ಳಿ, eನವಿಕಾಸ ಸಮನ್ವಯಾಧಿಕಾರಿ ಶ್ರೀದೇವಿ ಕಾಳಸಿಂಗೆ, ಸೇವಾ ಪ್ರತಿನಿಧಿಗಳಾದ ಅನುರಾಧ ಬೀರಲದಿನ್ನಿ, ಕೌಶಿಂಬಿ ಕನ್ನೂರ, ಭಾಗೀರಥಿ ಸಾಲವಾಡಗಿ, ಸಪ್ನಾ ನಾಯಕ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

