ವಿಜಯಪುರ: ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಏ.04ರಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹೊಂಗಯ್ಯ.ಕೆ ರವರು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಬರಗಾಲ ಇರುವ ಕಾರಣ ಎಲ್ಲ ಕೂಲಿಕಾರರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿ, ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕು. ಮತ್ತು ಬೇರೆ ಕಡೆ ಕೆಲಸಕ್ಕೆ ಹೋದರೆ, ಅಲ್ಲಿ ಕೊಡುವ ಕೂಲಿ ಮೊತ್ತಕ್ಕಿಂತ, ನರೇಗಾ ಯೋಜನೆಯ ಕೂಲಿ ಮೊತ್ತ ಹೆಚ್ಚು ಅಂದರೆ ರೂ.349/- ಇರುತ್ತದೆ, ಆದ ಕಾರಣ ಇನ್ನೂ ಹೆಚ್ಚು ಜನರಿಗೆ ಕೂಲಿ ಕೆಲಸಕ್ಕೆ ಕರೆದುಕೊಂಡು ಬನ್ನಿರಿ ಎಂದು ಕೂಲಿಕಾರರಿಗೆ ಕರೆ ನೀಡಿದರು.
ಬಳಿಕ ತಾಲೂಕಾ ಸ್ವೀಪ್ ಸಮೀತಿ ವತಿಯಿಂದ ಮತದಾರರ ಜಾಗೃತಿ ಅಭಿಯಾನ ಮಾಡಲಾಯಿತು. ಮತದಾರರ ಪ್ರತಿಜ್ಞಾ ವಿಧಿ ಹೇಳಲಾಯಿತು. ಲೋಕಸಭಾ 2024ರ ಚುನಾವಣೆಯಲ್ಲಿ ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಹೊಂಗಯ್ಯ.ಕೆ ರವರು ಅಲ್ಲಿರುವ ಕೂಲಿಕಾರರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪರಶುರಾಮ ಶಾಹಪೂರ, ತಾಂತ್ರಿಕ ಸಂಯೋಜಕರು, ಕು.ಅಮೃತಾ.ಕ.ನೀಲಜಗಿ, ಆಡಳಿತ ಸಹಾಯಕರು, ಸಿ.ಜಿ.ಚನಗೊಂಡ, ತಾಂತ್ರಿಕ ಸಹಾಯಕರು, ಬಿ.ಆರ್.ರಾಠೋಡ, ಪಿ.ಡಿ.ಓ., ಗ್ರಾಮ ಪಂಚಾಯಿತಿಯ ನಾಗಠಾಣ, ಬಿ.ೆಫ್.ಟಿ., ಜಿ.ಕೆ.ಎಮ್, ಗ್ರಾ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

