ಢವಳಗಿ: ಸಮೀಪದ ರೂಡಗಿ ಗ್ರಾಮದ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಅದ್ದೂರಿಯಾಗಿ ರಥೋತ್ಸವ ಜರುಗಿತು.
ತೇರಿಗೆ ಭಕ್ತರು ಉತ್ತತ್ತಿ,ಬಾಳೆಹಣ್ಣು , ಚುರುಮುರಿ,ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಇದಕ್ಕೂ ಮೊದಲು ಶ್ರೀ ಸಿದ್ದಲಿಂಗೇಶ್ವರ ಮತ್ತು ಯಲ್ಲಾಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ ಮತ್ತು ಶ್ರೀ ಅಕ್ಕ ಮಹಾದೇವಿ ಮಹಿಳಾ ಸಂಘ ರೂಢಗಿ ಇವರಿಂದ ಪಂಚಮುಖಿ ಪಲ್ಲಕ್ಕಿಗಳಿಗೆ ಮಹಾಪೂಜೆ ಮತ್ತು ಶ್ರೀ ಸಿದ್ದಲಿಂಗ ದೇವರು ಶ್ರೀ ಖಾಸ್ಗತೇಶ್ವರ ಮಠ ತಾಳಿಕೋಟಿ ಇವರ ಸಮ್ಮುಖದಲ್ಲಿ ಶ್ರೀ ಯಲ್ಲಾಲಿಂಗ ಮಹಾರಾಜರು ಪುಣ್ಯಶ್ರಮ ರೂಢಗಿ ಹಾಗೂ ಶ್ರೀ ತಿಪ್ಪಣ್ಣ ಪೂಜಾರಿ ಇವರಿಂದ ಮುಂಜಾನೆ 11 ಘಂಟೆಗೆ ಅಗ್ನಿ ಪ್ರವೇಶ ಮಾಡಿ ಭಕ್ತಿ ಸಮರ್ಪಿಸಿದರು. ನಂತರ ಸಾಯಂಕಾಲ 6 ಘಂಟೆಗೆ ರೂಢಗಿ ಗ್ರಾಮಸ್ಥರಿಂದ ಮತ್ತು ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ಭಕ್ತರು ಸೇರಿ ತೇರು ಎಳೆದು ಸಂಭ್ರಮಿಸಿದರು.
ಇದೇ ವೇಳೆ ಗ್ರಾಮದ ಹಿರಿಯರಾದ ಬಸವರಾಜ ದೋಡಮನಿ, ಶಿವಾನಂದ ಕೋರಿ ಎಸ್ ಪೀ ಸೇವಾಲಾಲ್, ಶ್ರೀಶೈಲ ದೊಡಮನಿ, ಬಸವರಾಜ ವಡ್ಡರ, ಬಸವರಾಜ ಬೆಲ್ಲದ, ಸಂಗಮೇಶ ಹಾರಿವಾಳ, ಆನಂದ ರಾಠೋಡ, ಲಕ್ಷ್ಮಣ ಈಳಗೇರ, ಪೀ ಪೀ ಸಾಗರ, ಬಾಬು ಗೊಲಗೇರಿ, ಪರಶುರಾಮ ರಾಠೋಡ, ಪವಾಡೆಪ್ಪ ಮಾದರ, ಶಿವಾನಂದ ಚವ್ಹಾಣ, ಕಲ್ಲಪ್ಪ ಪೂಜಾರಿ, ಬಸಪ್ಪ ಈಳಗೇರ, ಲಕ್ಷ್ಮಣ ಕುಂದರಗಿ ಮತ್ತು ಆರಕ್ಷಕ ಪಡೆಯ ಸಿಬ್ಬಂದಿ ಶಾಂತಿ ಸುಭದ್ರತೆಯನ್ನು ಕಾಪಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

