ವಿಜಯಪುರ: ನಾಗಠಾಣ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ವಲಸೆ ಯಾಕ್ರೀ, ನಿಮ್ಮೂರಲ್ಲಿ ಉದ್ಯೋಗ ಖಾತ್ರಿ” ಎಂಬ ಕೂಲಿ ಬೇಡಿಕೆ ಅಭಿಯಾನ ನಡೆಯಿತು.
ಬರಗಾಲ ಇರುವದರಿಂದ ಬೇರೆ ಕಡೆ ವಲಸೆ ಹೊಗದೆ, ನಿಮ್ಮೂರಲ್ಲೆ ಇದ್ದು, ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಲು ಕೂಲಿಕಾರರಿಗೆ ತಿಳಿಸಿ, “ವಲಸೆ ಯಾಕ್ರೀ, ನಿಮ್ಮೂರಲ್ಲಿ ಉದ್ಯೋಗ ಖಾತ್ರಿ” ಎಂಬ ಕೂಲಿ ಬೇಡಿಕೆ ಅಭಿಯಾನ ಕೂಲಿಕಾರರ ಸಮಕ್ಷಮದಲ್ಲಿ ಕೈಗೊಳ್ಳಲಾಯಿತು.
ಬಳಿಕ ತಾಲೂಕಾ ಸ್ವೀಪ್ ಸಮೀತಿ ವತಿಯಿಂದ ಮತದಾರರ ಜಾಗೃತಿ ಅಭಿಯಾನ ಮಾಡಲಾಯಿತು. ಮತದಾನ ನಮ್ಮೆಲ್ಲರ ಹಕ್ಕು, ಲೋಕಸಭಾ 2024ರ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಹಾಯಕ ನಿರ್ದೇಶಕ (ನರೇಗಾ) ಕಾಸಿಮಸಾಬ ಮಸಳಿ ಕೂಲಿಕಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕು.ಅಮೃತಾ.ಕ.ನೀಲಜಗಿ, ಆಡಳಿತ ಸಹಾಯಕರು, ಶುಭಂ ಬಿರಾದಾರ, ತಾಂತ್ರಿಕ ಸಹಾಯಕರು, ಸಂಗಮೇಶ ಎಮ್ಮಿ, ತಾಲೂಕಾ ಸಾಮಾಜಿಕ ಪರಿಶೋಧನಾ ಸಂಯೋಜಕರು, ಬಿ.ಆರ್.ರಾಠೋಡ, ಪಿ.ಡಿ.ಓ., ಗ್ರಾಮ ಪಂಚಾಯಿತಿಯ ನಾಗಠಾಣ, ಗ್ರಾ.ಪಂ. ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

