ಇಂಡಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ರ ಚುನಾವಣೆಯಲ್ಲಿ ವಿವಿಧ ಅನುಮತಿಗಳನ್ನು ನೀಡಲು ಏಕ ಗವಾಕ್ಷಿ ತಂಡವನ್ನು ರಚಿಸಲಾಗಿದೆ ಎಂದು ಸಹಾಯಕ ಚುನಾವಣಾ ಆದಿಕಾರಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನಡೆಸುವ ಪ್ರಚಾರದ ಸಂಬಂಧವಾಗಿ ಅನುಮತಿಗಾಗಿ ಕೋರುತ್ತಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಏಕ ಗವಾಕ್ಷಿ ಕಾರ್ಯ ಮಾಡುವದು.
ಕಂದಾಯ ಇಲಾಖೆಯ ಎಸ್.ಆರ್.ಮುಜಗೊಂಡ, ಪೋಲಿಸ ಇಲಾಖೆಯ ಪಿ.ಎ.ಅರವತ್ತು, ಪುರಸಭೆಯ ಎಲ್.ಎಸ್.ಸೋಮನಾಯಕ, ತಾ.ಪಂ ವಾಯ್.ಡಿ.ಮಾದರ, ಅಗ್ನಿಶಾಮಕ ಇಲಾಖೆಯ ಮುಬಾರಕ ಇಂಡಿಕರ, ಲೋಕೋಪಯೋಗಿ ಇಲಾಖೆಯ ಷಣ್ಮುಖ ಚಂದನಸೇವೆ, ಹೆಸ್ಕಾಂ ಇಲಾಖೆಯ ಶರಣಪ್ಪ ಕಟ್ಟಿಮನಿ, ಸಾರಿಗೆ ಇಲಾಖೆಯ ಸಂಗನಗೌಡ ಬಿರಾದಾರ, ಆರ್.ಟಿ.ಓ ಇಲಾಖೆಯ ಕೆ.ಸುರೇಶಕುಮಾರ ತಂಡದಲ್ಲಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

