ಮುದ್ದೇಬಿಹಾಳ: ತಾಲೂಕಿನ ಗೋನಾಳ ಎಸ್.ಎಚ್.ಗ್ರಾಮದಲ್ಲಿ ನಿರ್ಮಿಸುತ್ತಿರುವ ರಸ್ತೆ ನಿರ್ಮಾಣಕ್ಕೆ ರೈತ ಪರೂತಯ್ಯ ಹಿರೇಮಠ ಜಿಲ್ಲಾಧಿಕಾರಿಗೆ ಮತ್ತು ವಿಜಯಪುರದ ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನೀಯರ್ ಗೆ ತಕರಾರು ಸಲ್ಲಿಸಿದ್ದಾರೆ.
ಈ ಕುರಿತು ದೂರಿನ ಸ್ವೀಕೃತಿ ಪ್ರತಿ ಮಾಧ್ಯಮಕ್ಕೆ ನೀಡಿ ಮಾತನಾಡಿದ ಅವರು, ಗೋನಾಳ ಗ್ರಾಮದ ಸರ್ವೇ ನಂಬರ್ ೧೦, ೧೧, ೧೨ ಈ ಜಮೀನುಗಳಲ್ಲಿ ಗೋನಾಳ ಗ್ರಾಮದ ಮಳೆಯ, ಕೊಳಚೆ, ಕಾಲುವೆಯ, ಹಡಲಗೇರಿ ರಸ್ತೆಯಿಂದ ಬರುವ ಹೀಗೆ ಎಲ್ಲ ನೀರು ರಸ್ತೆಗುಂಟ ಹರಿದು ಬಂದು ನಿಲ್ಲುತ್ತಿರುವದರಿಂದ ಯಾವುದೇ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮಗೆ ತುಂಬಿಬಾರದ ಹಾನಿ ಉಂಟಾಗುತ್ತಿದ್ದು, ಸಧ್ಯ ನಿರ್ಮಿಸುತ್ತಿರುವ ರಸ್ತೆಯ ಬದಿ ನೀರು ಹರಿದು ಹೋಗಲು ಯಾವುದೇ ಚರಂಡಿ ನಿರ್ಮಿಸುವ ವ್ಯವಸ್ಥೆ ಕೂಡ ಮಾಡಿಲ್ಲ. ಈ ಸಮಸ್ಯೆ ಬಗ್ಗೆ ಹಿಂದೆ ಹಲವಾರು ಬಾರಿ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಹಿಂದೆ ತಕರಾರು ನೀಡಿದ ಕಾರಣ ಕಾಮಗಾರಿಯನ್ನ ತಡೆಹಿಡಿಯಲಾಗಿತ್ತು. ಸಧ್ಯ ಅದೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಈಗಾಗಲೇ ನ್ಯಾಯ ಕೋರಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನ್ಯಾಯಾಲಯದ ಆದೇಶ ಬರುವವರೆಗೂ ಈ ರಸ್ತೆಯನ್ನು ನಿರ್ಮಿಸ ಕೂಡದು. ಒಂದು ವೇಳೆ ರಸ್ತೆ ನಿರ್ಮಿಸುವ ಅನಿವಾರ್ಯತೆ ಇದ್ದರೆ ಮೊದಲು ಚರಂಡಿ ನಿರ್ಮಿಸಿ ನಂತರ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ನಾವೆಲ್ಲ ರೈತರು ಸೇರಿ ಧರಣಿ ಸತ್ಯಾಗ್ರಹ ನಡೆಸುವ ಅನಿವಾರ್ಯತೆ ಎದುರಾಗುತ್ತದೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment
