ದೇವರಹಿಪ್ಪರಗಿ: ದುರ್ಬಲ ವರ್ಗದ ಜನತೆಗೆ ವೃದ್ಧಾಪ್ಯದ ಅವಧಿಯಲ್ಲಿ ನೆಮ್ಮದಿಯ ಜೀವನ ಕಳೆಯಲು ವಾತ್ಸಲ್ಯ ಕಾರ್ಯಕ್ರಮ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ಹೇಳಿದರು.
ಮತಕ್ಷೇತ್ರದ ಬೆಕಿನಾಳ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿ ಮಂಜೂರಾದ ಮನೆಯನ್ನು ಫಲಾನುಭವಿ ಕಾಶೀಬಾಯಿ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಇದು ಧರ್ಮಸ್ಥಳದ ಹೇಮಾವತಿ ಅಮ್ಮನವರ ನೆಚ್ಚಿನ ಕಾರ್ಯಕ್ರಮ. ಸಮಾಜದಲ್ಲಿರುವ ಅಶಕ್ತರು ಸಂತೋಷದಿಂದ ಎಲ್ಲರಂತೆ ಬದುಕಲು ಸಹಕಾರಿಯಾಗುವಂತೆ ಸೂರು ನಿರ್ಮಿಸಿ ಅವರಿಗೆ ಮಾಶಾಸನ ವಿತರಿಸುವುದರ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಖಚಿತ ಭರವಸೆ ನೀಡುವದಾಗಿದೆ ಎಂದರು.
ಜ್ಞಾನವಿಕಾಸ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಶಕುಂತಲಾ ಹಾಗೂ ತಾಲ್ಲೂಕು ಯೋಜನಾಧಿಕಾರಿ ಗಿರೀಶಕುಮಾರ ಮಾತನಾಡಿ, ಫಲಾನುಭವಿಗೆ ಶುಭಹಾರೈಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸಿದ್ಧನಗೌಡ ಬಿರಾದಾರ, ರವಿ ಸುಧಾಕರ, ಹುಸೇನಸಾಬ್, ಮಲ್ಲಿಕಾರ್ಜುನ ಹಿರೇಮಠ, ಸಿದ್ಧರಾಮಪ್ಪಗೌಡ , ಪ್ರಕಾಶ ವಣಿಕ್ಯಾಳ, ಶೇಖಪ್ಪ ಅಗಸರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯ, ಸೇವಾಪ್ರತಿನಿಧಿಗಳಾದ ನೀಲಮ್ಮ, ಸವಿತಾ, ಶಾಂತಾ, ಸ್ವಪ್ನ, ಮತ್ತು ಸಂಘದ ಸದಸ್ಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

