ಇಂಡಿ: ಪಟ್ಟಣದ ಪ್ರಾಣ ಸ್ನೇಹಿತರ ಗೆಳೆಯರ ಬಳಗ ಭಾನುವಾರ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಗಿಡಮರಗಳಲ್ಲಿ ನೀರಿನ ಅರವಟಿಗೆಗಳನ್ನು ಇಟ್ಟು ಪಕ್ಷಿ ಸಂಕುಲಕ್ಕೆ ನೆರವಾದರು. ತಾಲ್ಲೂಕಿನಲ್ಲಿ ಬೀಕರ ಬರಗಾಲವಿದ್ದು, ಹಳ್ಳ, ಕೊಳ್ಳ, ಕೆರೆ, ಕಟ್ಟೆ, ಕಾಲುವೆಗಳಲ್ಲಿ ಒಂದು ಹನಿ ಕೂಡಾ ನೀರಿಲ್ಲ. ಇದನ್ನು ಅರಿತುಕೊಂಡು ಪಕ್ಷಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿ ಎಂದು ಗಿಡಮರಗಳಲ್ಲಿ ನೀರಿನ ಅರವಟಿಗೆ ಇಡುವ ಕಾರ್ಯ ಕೈಕೊಂಡಿದ್ದಾರೆ.
ಈ ಕಾರ್ಯದಲ್ಲಿ ಅವಿನಾಶ ಬಗಲಿ, ಶಿವಕುಮಾರ ಬಿಸನಾಳ, ಶಿವು ಬಡಿಗೇರ, ಸುಧೀರ ಕರಿಕಟ್ಟಿ, ಸಂಕೇತ ಜ್ಯೋಶಿ, ಪರಶುರಾಮ ಚೋಪಡೆ, ಕಿರಣ ಕ್ಷತ್ರಿ, ಮಹಾದೇವ ಹದಗಲ್ಲ, ರಮೇಶ ಗೋಳಸಾರ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

