ವಿಜಯಪುರ: ವಿದ್ಯುತ್ ನಿರ್ವಹಣಾ ಕಾಮಗಾರಿ ಕಾರ್ಯ ಕೈಗೊಳ್ಳಲಾಗಿರುವುದರಿಂದ ೨೨೦/೧೧೦/೧೧ ಕೆವಿ ಬಸವನ ಬಾಗೇವಾಡಿ, ಮಮದಾಪೂರ ಕೇಂದ್ರದಿಂದ ಹೊರಹೋಗುವ ೧೧೦ ಕೆವಿ ಮಮದಾಪೂರ, ಬಬಲೇಶ್ವರ, ಶಿರಬುರ, ಬೆಳುಬ್ಬಿ ಹಾಗೂ ಕಂಬಾಗಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೋಗುವ ಎಲ್ಲಾ ೩೩ಕೆವಿ, ೧೧ಕೆವಿ ವಿದ್ಯುತ್ ಮಾರ್ಗದಲ್ಲಿ ಮಾ.೨೩ರಂದು ಬೆಳಗ್ಗೆ ೮ರಿಂದ ಸಾಯಂಕಾಲ ೪ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಾರಣ ಎಲ್ಲಾ ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
