ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಯಿಂದ ಕಳೆದ ಎಂಟು ದಿನಗಳಿಂದ ತಾಲೂಕಿನಲ್ಲಿರುವ ಎಲ್ಲ ಕೆರೆ ಮತ್ತು ಹಳ್ಳಗಳಲ್ಲಿ ನೀರು ಹರಿಸಲಾಗಿದೆ.
ಇದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಅದಲ್ಲದೆ ಅಂತರ್ಜಲ ಹೆಚ್ಚಾಗಿ ಬಾವಿಗಳಿಗೆ, ಬೋರುಗಳಿಗೆ ನೀರು ಹೆಚ್ಚಾಗುವದು.
ತಾಲೂಕಿನ ಸಂಗೋಗಿ,ಹಂಜಗಿ,ಲೋಣಿ ಕೆಡಿ ಮತ್ತು ಅರ್ಜನಾಳ ಕೆರೆಗಳನ್ನು ತುಂಬಲಾಗಿದೆ.
ಅದಲ್ಲದೆ ನಾದ ಕೆ.ಡಿ, ಭೈರುಣಗಿ, ಹಲಸಂಗಿ ಸೇರಿದಂತೆ ಇಂಡಿಯ ಹಳ್ಳ, ಇಂಗಳಗಿ,ನೆಹರು ನಗರ, ಹಿರೇಬೇವನೂರ, ಭೂಯ್ಯಾರ ಹಳ್ಳಗಳನ್ನು ತುಂಬಿಸಲಾಗಿದ್ದು ಅಲ್ಲಿಂದ ನೀರು ಭೀಮಾ ನದಿ ಸೇರುತ್ತಿದೆ.
ಬರದಿಂದ ಕಂಗೆಟ್ಟಿರುವ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ಕುರಿತು ಕೃಷ್ಣಾ ಮುಖ್ಯ ಕಾಲುವೆಯಿಂದ ನೀರು ಆಸರೆ ಯಾಗುತ್ತಿದೆ. ಸಕಾಲದಲ್ಲಿ ಮಳೆ ಯಾಗದೆ ಇರುವದರಿಂದ ತಾಲೂಕಿನ ಕೆರೆ ಹಳ್ಳ ಬಾವಿ, ಬೋರು ಗಳು ಬತ್ತಿದ್ದರಿಂದ ಕುಡಿಯುವ ನೀರಿನ ಉಂಟಾಗಬಾರದೆಂದು ಕೃಷ್ಣಾ ಕಾಲುವೆಯಿಂದ ನೀರು ತುಂಬಿಸಲಾಗುತ್ತಿದೆ.
ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಕಾರ್ಯ ಪಾಲಕ ಅಭಿಯಂತರ ಶಾಂತವೀರ ಮಠ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅರವಿಂದ ಪೋಳ, ಶ್ರೀಮಂತ ಅಂಗಡಿ, ಕಿರಿಯ ಅಭಿಯಂತರ ಮಹಮ್ಮದ ಸಾಧಿಕ ಹೊನ್ನುಟಗಿ
ಈ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಕಾಲುವೆ ನೀರು ಕೆರೆ ಹಳ್ಳಗಳಿಗೆ ಬಂದಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

