ವಿಜಯಪುರ: ನಗರದಲ್ಲಿ ದೇಶ ರಕ್ಷಕರ ಪಡೆ ಸಂಘಟನೆಯ ಕೋರ ಕಮಿಟಿ ಸಭೆಯಲ್ಲಿ ಸಂಘಟನೆಯ ನೂತನ ಅಧ್ಯಕ್ಷರಾಗಿ ಆಕಾಶ ಇಂಡಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ರೂಗಿಮಠ ಹಾಗೂ ಖಜಾಂಚಿಯಾಗಿ ವಸುಂಧರಾ ದೇಶಪಾಂಡೆ ನೇಮಕಗೊಂಡಿದ್ದಾರೆ .
ಈ ಸಂದರ್ಭದಲ್ಲಿ ಬಿಜೆಪಿ ವಿಜಯಪುರ ನಗರ ಮಂಡಲ ಕಾರ್ಯದರ್ಶಿ ಮತ್ತು ಸಂಸ್ಥಾಪಕ ರೋಹನ ಆಪ್ಟೆ ಮಾತನಾಡಿ, 2018 ರಲ್ಲಿ ಸಂಘಟನೆ ಪ್ರಾರಂಭವಾಗುವಾಗ ಇದ್ದ ಸಂಘಟಿಗರು, ಇವತ್ತಿಗೆ ಸಂಘಟನೆಗೆ 6 ವರ್ಷಗಳಾದರೂ ತಂಡ ಇನ್ನೂ ಹೆಚ್ಚು ಆಗಿದೆ. ಆಗ ಇದ್ದ ಸದಸ್ಯರು ಇವತ್ತಿಗೂ ಇದ್ದಾರೆ. ಯಾವುದೇ ಆಸೆ ಅಪೇಕ್ಷೆ ಇಲ್ಲದೆ ಸಮಾಜಕ್ಕಾಗಿ ಸಮಾಜದ ನಡುವೆ ಇದ್ದು ಕೆಲಸ ಮಾಡುತ್ತಿರುವ ತಂಡ ನನಗೆ ಪ್ರಾರಂಭದಲ್ಲಿ ಸಿಕ್ಕಿದ್ದು ನನ್ನ ಅದೃಷ್ಟ. ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳು ಮುಂಬರುವ ದಿನಗಳಲ್ಲಿ ಇನ್ನೂ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎಂಬುವ ವಿಶ್ವಾಸವಿದೆ ಅಂದರು .
ಮಾರ್ಗದರ್ಶಕರಾದ ಗಿರೀಶ ನೀಲಗುಂದ ಮಾತನಾಡಿದರು.
ನಿಕಟಪೂರ್ವ ಸಂಪರ್ಕ ಪ್ರಮುಖರಾದ
ಪ್ರೇಮ ಕಲಕುಟಗಿ ಮಾತನಾಡಿ, ಸಮಾಜಕ್ಕಾಗಿ ಕೆಲಸ ಮಾಡಲು ಅವಕಾಶ ಸಿಕ್ಕಾಗ ತಂಡವಾಗಿ ಕೆಲಸ ಮಾಡಿದ್ದೇವೆ. ನೂತನ ಪದಾಧಿಕಾರಿಗಳಿಗೆ ಶುಭ ಕೋರುತ್ತೇನೆ ಎಂದರು.
ನಿಕಟಪೂರ್ವ ಅಧ್ಯಕ್ಷರಾದ ನ್ಯಾಯವಾದಿ ಅಜಯ ಸೂರ್ಯವಂಶಿ ಮಾತನಾಡಿ, 6 ವರ್ಷಗಳ ಕಾಲ ಸಂಘಟನೆಯಲ್ಲಿ ಅಧ್ಯಕ್ಷನಾಗಿ ಸ್ವಂತಕ್ಕ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮಂತ್ರದೊಂದಿಗೆ ಕೆಲಸ ಮಾಡಿದ್ದೇವೆ. ಸಂಘಟನೆಯಲ್ಲಿ ಇದ್ದು ಕೆಲಸ ಮಾಡುತ್ತೇನೆ ಅಂದರು.
ಈ ಸಂದರ್ಭದಲ್ಲಿ ಪ್ರಿಯಾಂಕಾ ಖೋತ , ಶ್ರಾವಣಿ ಆಪ್ಟೆ , ಕಿರಣ ಕೊಳುರಗಿ, ಶುಭಂ ಹಳ್ಳಿ, ಶ್ರೀಧರಗೌಡ ಬಿರಾದಾರ, ಆದಿತ್ಯ ಹಳ್ಳಿ , ಸಾಗರ ಭಜಂತ್ರಿ, ಕೃಷ್ಣಾ ಕುಲಕರ್ಣಿ, ಅಮಿತ ದೇಸಾಯಿ, ರಾಹುಲ ಪಾಟೀಲ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

