ವಿಜಯಪುರ: ಬರಲಿರುವ ಲೋಕಸಭೆ ಚುನಾವಣೆ ಹಾಗೂ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಪಾಠ ಕಲಿಸಲು ಬಂಜಾರಾ ಸಮಾಜ ಪ್ರತಿಜ್ಞೆ ಮಾಡಿದೆ. ಸಮಾಜದ ಗುರು ಸಂತ ಶ್ರೀ ಸೇವಾಲಾಲ್ರ ಹೆಸರಿನಲ್ಲಿ ಪ್ರಮಾಣ ಮಾಡಿ ಯಾವುದೇ ಕಾರಣಕ್ಕೆ ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ರಾಜ್ಯ ಆ್ಯಂಟಿ ಕರಪ್ಷನ್ ಫೌಂಡೇಶನ್ ಆಫ್ ಇಂಡಿಯಾ ಅಧ್ಯಕ್ಷ ಬಿ.ಬಿ. ಲಮಾಣಿ ಗುಡುಗಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರಕಾರ ಬಂಜಾರಾ ಸಮಾಜದ ಸದಾಶಿವ ಆಯೋಗವನ್ನು ಜಾರಿಗೆ ತಂದಿದ್ದಕ್ಕೆ ಬಂಜಾರಾ ಸಮಾಜ ಯಾವ ರೀತಿ ಪ್ರತಿಭಟನೆ ಮಾಡಿತು. ಅದು ಕಾಂಗ್ರೆಸ್ಸಿಗೆ ಗೊತ್ತೇ ಇದೆ. ಅದರ ಪ್ರತಾಪದಿಂದ ಬಿಜೆಪಿಯು ರಾಜ್ಯದಲ್ಲಿ ತನ್ನ ಸರಕಾರವನ್ನೇ ಕಳೆದುಕೊಂಡಿದ್ದನ್ನು ಸ್ವತಃ ಬಿಜೆಪಿ ರಾಜ್ಯ ನಾಯಕರೇ ಒಪ್ಪಿಕೊಂಡಿದ್ದಾರೆ. ಈ ಸಲ ಸಮಾಜವು ಸುಮ್ಮನೇ ಕೂಡದು. ಅತೀ ಶೀಘ್ರದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಹಾಗೂ ರಾಜ್ಯಾದ್ಯಾಂತ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆಯನ್ನು ಕೈಕೊಳ್ಳಲಾಗುವುದು ಎಂದು ಬಿ.ಬಿ. ಲಮಾಣಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

