Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (ಮಾರ್ಚ್ 8) ಯ ಒಂದು ಝಲಕ್
ವಿಶೇಷ ಲೇಖನ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (ಮಾರ್ಚ್ 8) ಯ ಒಂದು ಝಲಕ್

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

’ವೀಣಾಂತರಂಗ’

– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ

ಅದೊಂದು ಬೃಹತ್ತಾದ ವೇದಿಕೆ. ದೊಡ್ಡ ಮಠದ ಸ್ವಾಮೀಜಿಗಳು, ಆ ಭಾಗದ ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯರು, ಪುರಸಭೆ ಅಧ್ಯಕ್ಷರು ಮತ್ತಿತರ ಘಟಾನುಘಟಿ ರಾಜಕಾರಣಿಗಳು ತಮಗೆ ಮೀಸಲಾಗಿದ್ದ ಕುರ್ಚಿಗಳಲ್ಲಿ ಆಸೀನರಾಗಿದ್ದರು. ಅದು ಸರ್ಕಾರವು ಪ್ರತಿ ವರ್ಷ ನಡೆಸುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವಾಗಿತ್ತು.

ಎಂದಿನಂತೆ ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸ್ವಾಮೀಜಿಯವರ ಅಮೃತ ಹಸ್ತದಿಂದ ಕಾರ್ಯಕ್ರಮದ ಉದ್ಘಾಟನೆಯ ನಂತರ ಉದ್ಘಾಟನಾ ಭಾಷಣವನ್ನು ಮಾಡಿದ ಅವರು ಹೆಣ್ಣು ಮಕ್ಕಳ ವ್ಯಕ್ತಿತ್ವವನ್ನು ಘನತೆಯನ್ನು ನಮ್ಮ ಹಲವಾರು ಪುಣ್ಯ ಸ್ತ್ರೀಯರ ಕುರಿತಾಗಿ ವಿವರಗಳ ಸಮೇತ ಹೇಳಿದರು. ನಂತರ ಮುಖ್ಯ ಅತಿಥಿಗಳ ಭಾಷಣ. ಮಹಿಳಾ ಸಮಾನತೆ ಕುರಿತಾಗಿ ಉಪನ್ಯಾಸ ನೀಡಿದ ಮುಖ್ಯ ಅತಿಥಿಗಳು ಅವರ ಉಪನ್ಯಾಸವನ್ನು ಮುಗಿಸುವ ಹೊತ್ತಿಗೆ ಸುಮಾರು ಒಂದು ಗಂಟೆ ಕಳೆದು ಹೋಗಿತ್ತು. ಅದಾದ ನಂತರ ಆ ಭವ್ಯವೇದಿಕೆಯಲ್ಲಿ ಆ ವರ್ಷದ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.

ಅಂತೆಯೇ ಆ ವರ್ಷ ಸನ್ಮಾನಿಸಿಕೊಳ್ಳಲಿರುವ ಮಹಿಳೆಯರನ್ನು ವೇದಿಕೆಯ ಮೇಲೆ ಕರೆಯ ತೊಡಗಿದರು. ಅವರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಜನರಿಗೆ ಒದಗಿಸಿದರು.
ಈ ಬಾರಿ ಮಹಿಳಾ ದಿನಾಚರಣೆಯಂದು ಸನ್ಮಾನಗೊಳ್ಳಲಿರುವ ನನ್ನನ್ನು ವೇದಿಕೆಗೆ ಕರೆದಾಗ ಅತ್ಯಂತ ಪುಳಕದಿಂದ ಹೋಗಿ ಕುರ್ಚಿಯ ಮೇಲೆ ಕುಳಿತುಕೊಂಡೆ. ಶಾಲು ಹೊದೆಸಿ ಹಾರ ಹಾಕಿ ಸ್ಮರಣಿಕೆಯನ್ನು ನೀಡಿ ಸುತ್ತಲು ನಿಂತು ಪುಷ್ಪವೃಷ್ಠಿಗರೆಯುತ್ತಿರಲು ಮಂಗಳವಾದ್ಯಗಳು ಮೊಳಗಿದವು. ಅಷ್ಟರಲ್ಲಿ ಯಾರೋ ನನ್ನ ಕೈ ಹಿಡಿದು ಜಗ್ಗಿದಂತಾಗಲು ಕಣ್ತೆರೆದು ನೋಡಿದರೆ ನಾನಿನ್ನು ಹಾಸಿಗೆಯ ಮೇಲೆ ಮಲಗಿದ್ದೆ. ಒಂದು ಕ್ಷಣ ಅಯೋಮಯವೆನಿಸಿತ್ತು. ನನ್ನ ಮೊಬೈಲ್ ಫೋನಿನ ಕರೆಗಂಟೆ ಮಂಗಳವಾದ್ಯದಂತೆ ಗೋಚರಿಸಿದರೆ ಜಗ್ಗಿದ್ದು ಸಾಕ್ಷಾತ್ ನನ್ನ ಪತಿದೇವರು. ಕೂಡಲೇ ಗಡಬಡಿಸಿ ನನ್ನ ಮೊಬೈಲನ್ನು ಎತ್ತಿ ಕರೆ ಸ್ವೀಕರಿಸಿದರೆ
ಅತ್ತಲಿಂದ ಕೆಲಸದಾಕೆ ತನ್ನ ಮಗನಿಗೆ ಹುಷಾರಿಲ್ಲವೆಂದೂ, ತಾನು ಕೆಲಸಕ್ಕೆ ಬರಲಾಗುವುದಿಲ್ಲ ಎಂದೂ ಬಡ ಬಡನೆ ಹೇಳಿ ಫೋನು ಇಟ್ಟಳು. ಕನಸಿನಲ್ಲಿ ಸನ್ಮಾನ ಸ್ವೀಕರಿಸುತ್ತಿದ್ದ ನಾನು ರಸಭಂಗವಾದಂತಾಗಿ ಎದ್ದು ಕೂತರೆ ಇಲ್ಲಿ ಇನ್ನೊಂದು ಆಭಾಸ. ಆದರೂ ಅನಿವಾರ್ಯವಾಗಿ ಎದ್ದು ಕುಳಿತು ನಿತ್ಯ ವಿಧಿಗಳನ್ನು ಪೂರೈಸಿ ಚಹಾ ಕುಡಿದು ಕೈಯಲ್ಲಿ ಕಸಬರಿಗೆ ಹಿಡಿದು ಇಡೀ ಮನೆಯ ಕಸವನ್ನು ಗುಡಿಸಲಾರಂಭಿಸಿದೆ. ಕಸ ಗುಡಿಸಿದ ನಂತರ ಬಕೆಟ್ ನಲ್ಲಿ ನೀರು ತಂದು ಫಿನಾಯಿಲ್ ಹಾಕಿ ಮನೆಯ ಮೂಲೆ ಮೂಲೆಯನ್ನು ಉಜ್ಜಿ ಉಜ್ಜಿ ನೆಲ ವರೆಸುವ ಹೊತ್ತಿಗೆ ಮುಂಜಾನೆಯ ಉಪಹಾರದ ಸಮಯ ಮೀರಿ ಹೋಗಿತ್ತು. ಮೇಲಿನ ತನ್ನ ಕೋಣೆಯಿಂದ ಮಗ ಅಮ್ಮ, ಇವತ್ತಿನ ಟಿಫನ್ ಏನು?? ಎಂಬ ಕೂಗಿಗೆ ‘ನೀನೇ ಬಂದು ಹೋಟೆಲಿನಿಂದ ತಂದು ಕೊಡು’ ಎಂದು ಹೇಳಲಷ್ಟೇ ಸಾಧ್ಯವಾಗಿದ್ದು.

ಕೂಡಲೆ ಕಾರ್ಯ ಪ್ರವೃತ್ತನಾದ ಮಗ ಸ್ನಾನ ಮಾಡಿ ಕೆಳಗಿಳಿದು ಬಂದು ಹೋಟೆಲಿಗೆ ಹೋಗಿ ತಿಂಡಿ ಕಟ್ಟಿಸಿಕೊಂಡು ಬಂದ. ಬಿಸಿ ಬಿಸಿ ಇಡ್ಲಿ, ವಡ ಹೊಟ್ಟೆ ಗಿಳಿದಾಗ ಅಬ್ಬಾ!! ಬಹಳಷ್ಟು ಸಮಾಧಾನವಾಯಿತು. ಮತ್ತೆ ಅಡುಗೆ ಮನೆಗೆ ಹೋಗಿ ಹಿಂದಿನ ದಿನದ ಎಲ್ಲ ಪಾತ್ರಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಎಲ್ಲವನ್ನು ತಿಕ್ಕಿ, ತೊಳೆದು ಸ್ವಸ್ಥಾನ ಸೇರಿಸುವಷ್ಟರಲ್ಲಿ ಸಾಕಾಗಿ ಹೋಯಿತು. ನಂತರ ಬಟ್ಟೆಯ ಸರದಿ. ಮನೆಯ ಎಲ್ಲಾ ಸದಸ್ಯರ ಬಟ್ಟೆಗಳನ್ನು ನೆನೆ ಹಾಕಿ ಒಗೆದು ಹಿಂಡಿ ಹರವಿದ ನಂತರ ಸ್ನಾನ, ಪೂಜೆ ಪೂರೈಸಿ ಅಡುಗೆ ಮನೆಗೆ ಬಂದರೆ ಹೊಟ್ಟೆ ಸಣ್ಣದಾಗಿ ಚುರುಗುಡುತ್ತಿತ್ತು.

ಪಲ್ಯ, ಕಾಳಿಗೆ ಒಗ್ಗರಣೆ ಹಾಕಿ ಅನ್ನ ಸಾರು ಮಾಡಿ ರೊಟ್ಟಿಗೆ ಹೆಂಚು ಇಟ್ಟು ಎಲ್ಲರಿಗೂ ಬಿಸಿ ಬಿಸಿ ರೊಟ್ಟಿ ಬಡಿದು ಕೊಟ್ಟು ಊಟ ಮಾಡಿ ತುಸು ವಿಶ್ರಾಂತಿ ಪಡೆಯಲು ಮಲಗಿದಾಗ ಮಧ್ಯಾಹ್ನದ ಮೂರೂವರೆ.
ಇದು ನಮ್ಮ ಮಹಿಳೆಯರು ತಿಂಗಳಲ್ಲಿ ಮೂರು ನಾಲ್ಕು ಬಾರಿ ಅನುಭವಿಸುವ ಮಹಿಳಾ ದಿನಾಚರಣೆಯ ಒಂದು ಝಲಕು.

ಈ ವರ್ಷ ನನ್ನ ಮಹಿಳಾ ದಿನಾಚರಣೆ ಹೀಗೆ ಪ್ರಾರಂಭವಾಗಿ ಕೊನೆಯಾಯಿತು…. ಖೇದವೇನಿಲ್ಲ ಆದರೆ ಅಭ್ಯಾಸ ಆಗಿ ಹೋಗಿದೆ. ನಿಮ್ಮ ಮಹಿಳಾ ದಿನಾಚರಣೆ ಹೇಗಿತ್ತು ತಿಳಿಸಿ ಸ್ನೇಹಿತರೆ!?

– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ
    In (ರಾಜ್ಯ ) ಜಿಲ್ಲೆ
  • ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ
    In (ರಾಜ್ಯ ) ಜಿಲ್ಲೆ
  • ಶಾಸಕ ಮನಗೂಳಿ ಯಿಂದಅಹವಾಲು ಸ್ವೀಕಾರ
    In (ರಾಜ್ಯ ) ಜಿಲ್ಲೆ
  • ಇಂದು ವ್ಯಸನಮುಕ್ತ ಶಿಬಿರದ ಸಮಾರೋಪ :ಅಲ್ಲಾಪೂರ
    In (ರಾಜ್ಯ ) ಜಿಲ್ಲೆ
  • ಸಿಂದಗಿ: ಇಂದು ವಿದ್ಯುತ್ ವ್ಯತ್ಯೆಯ
    In (ರಾಜ್ಯ ) ಜಿಲ್ಲೆ
  • ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಈ ಜಗವೆಲ್ಲ..
    In ವಿಶೇಷ ಲೇಖನ
  • ಕುಡಿವ ನೀರಿನ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಿ
    In (ರಾಜ್ಯ ) ಜಿಲ್ಲೆ
  • ಶರಣ ಭೋಗಣ್ಣನವರ ಕುರಿತು ಸಂಶೋಧನೆ ಅಗತ್ಯ :ಗೋಗಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.