ಆಲಮಟ್ಟಿ: ಇದೇ ಪ್ರದೇಶದಲ್ಲಿ ಜನಿಸಿರುವ ಮಹಾನ್ ಮಾನವತಾವಾದಿ ಬಸವಣ್ಣನವರ ಚರಿತ್ರೆಯನ್ನು ಸಾರುವ ಒಂದು ಉದ್ಯಾನ ನಿರ್ಮಿಸುವುದು ಅಗತ್ಯವಾಗಿದೆ ಎಂದು ನಾದಬ್ರಹ್ಮ ಹಂಸಲೇಖ ಅಭಿಪ್ರಾಯಪಟ್ಟರು.
ಶುಕ್ರವಾರ ಆಲಮಟ್ಟಿ ಮಯೂರಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೂರು ರಾಜ್ಯಗಳ ಜನತೆಯ ದಾಹ ನೀಗಿಸುವ ಕೃಷ್ಣಾ ನದಿಯು ರಾಜ್ಯದಲ್ಲಿ ಉದ್ದವಾಗಿ ಹರಿದು ಆಲಮಟ್ಟಿ ಅಣೆಕಟ್ಟು ಒಂದರಲ್ಲಿಯೇ ೧೨೩ಟಿಎಮ್ಸಿ ನೀರು ಸಂಗ್ರಹಿಸಿ ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸುತ್ತಿದೆ. ನಾವು ಕಾವೇರಿ ನದಿಯಲ್ಲಿ ಸಂಗ್ರಹವಾಗುವ ನೀರಿನಲ್ಲಿ ಒಂದು ಟಿಎಮ್ಸಿ ಅಡಿ ನೀರಿಗೂ ಹೋರಾಟ ಮಾಡುತ್ತೇವೆ, ಆದರೆ ಆಲಮಟ್ಟಿಯಲ್ಲಿ ೧೨೩ಟಿಎಮ್ಸಿ ಅಡಿ ನೀರು ಸಂಗ್ರಹಿಸುತ್ತಿದ್ದರೂ ಇದರ ಬಗ್ಗೆ ವ್ಯಾಪಕವಾಗಿ ಪ್ರಚಾರದಲ್ಲಿ ಮತ್ತು ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗಲು ಈ ಭಾಗದ ಜನರು ಗಟ್ಟಿ ಧ್ವನಿ ಎತ್ತದೇ ಇರುವುದು ಕಾರಣವಾಗಿದೆ ಎಂದರು.
ಕೃಷ್ಣಾ ನದಿಯ ಬಗ್ಗೆ ಕಿಸಾನರ ಕೃಷಿಕರ ರೈತರ ಲಾಲಬಹಾದ್ದೂರ್ ಆಲಮಟ್ಟಿ ಎಂದು ಇಂದು ನಾಲ್ಕು ಹಾಡುಗಳನ್ನು ರಚಿಸುತ್ತಿದ್ದೇನೆ ಬೆಂಗಳೂರಿಗೆ ಹೋದ ನಂತರ ಈ ಭಾಗದ ಚಿತ್ರೀಕರಣಕ್ಕೆ ತಂಡವನ್ನು ಕಳಿಸಿ, ಈ ಭಾಗದ ಮಹತ್ವದ ಬಗ್ಗೆ ತಿಳಿಸಲು ದೊಡ್ಡ ದೊಡ್ಡ ಚಿತ್ರತಾರೆಯರನ್ನು ಕರೆಸಿ ಹಾಡುಗಳನ್ನು ಬಿಡುಗಡೆಗೊಳಿಸಲಾಗುವುದು. ಆಲಮಟ್ಟಿ ಜಲಾಶಯ ನಿರ್ಮಾಣಕ್ಕೆ ೫೦ವರ್ಷಗಳು ಗತಿಸಿವೆ. ಮುಖ್ಯಮಂತ್ರಿಗಳು ಈ ಪ್ರದೇಶಕ್ಕೆ ಆಗಮಿಸಲಿದ್ದಾರೆ, ಮುಖ್ಯಮಂತ್ರಿಯವರಿಗೆ ಬಸವಣ್ಣನವರ ಕುರಿತು ಈ ಭಾಗದ ಜನರು ಗಟ್ಟಿ ಧ್ವನಿಯಲ್ಲಿ ಹೇಳಬೇಕು. ಇಡೀ ದೇಶದಲ್ಲಿಯೇ ಜಾನಪದ ವಿಶ್ವವಿದ್ಯಾಲಯವಿರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಅದರ ಸಮಗ್ರ ಅಭಿವೃದ್ಧಿಗೆ ಈ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರಲ್ಲಿ ವಿನಂತಿಸಿಕೊಳ್ಳಲಾಗಿತ್ತು. ಈಗ ಮತ್ತೆ ಈಗಿನ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರಲ್ಲಿಯೂ ವಿನಂತಿಸಿಕೊಳ್ಳಲಾಗುವುದು ಎಂದು ಹೇಳಿದರು.
. ಇಲ್ಲಿ ಸೀತಾವನ ನಿರ್ಮಿಸುತ್ತಿರುವದು ಒಳ್ಳೆಯ ವಿಚಾರ, ಶ್ರೀ ರಾಮನು ಮಹಾರಾಜರಾಗಿದ್ದರು, ಬಸವಣ್ಣನವರು ಸಾಮಾನ್ಯ ಜನರ ಧ್ವನಿಯಾಗಿದ್ದರು, ನುಡಿದಂತೆ ನಡೆದವರು, ಅನುಭವ ಮಂಟಪ ಸ್ಥಾಪಿಸಿದವರು. ಬಸವಣ್ಣನವರ ಬಾಲ್ಯ, ವಿದ್ಯಾಭ್ಯಾಸ, ಮಂತ್ರಿ ಪದವಿ, ಕಲ್ಯಾಣ ಕ್ರಾಂತಿ ಹೀಗೆ ಬಸವಣ್ಣನವರ ಚರಿತ್ರೆಯನ್ನು ಈ ಭಾಗದಲ್ಲಿ ಪ್ರಚುರಪಡಿಸುವುದು ಅಗತ್ಯವಾಗಿದೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

