ಇಂಡಿ: ಸಕಲ ಜೀವಿಗಳಿಗೂ ಅನ್ನ ನೀಡುವ ಭೂತಾಯಿಗೆ ಎಲ್ಲ ರೈತ ಸಮುದಾಯ ನೈವೆಧ್ಯ ತೋರಿಸಿ ಕೃತಜ್ಞತೆ ಅರ್ಪಿಸುವುದೇ ಎಳ್ಳ ಅಮವಾಸ್ಯೆಯ ವಿಶೇಷ. ಭೂಮಿ ಉಳ್ಳ ಪ್ರತಿಯೊಬ್ಬ ರೈತರು ಈ ಅಮವಾಸ್ಯೆಯನ್ನು ಅತ್ಯಂತ ಸಂಭ್ರಮದೊಂದಿಗೆ ಆಚರಿಸಿದರು.
ತನ್ಮಿತ್ತವಾಗಿ ಬೆಳಗ್ಗೆಯಿಂದಲೇ ಮಹಿಳೆಯರು ತರಹೇವಾರಿ ತರಕಾರಿಯ ಪಲ್ಲೆಗಳು, ಸಿಹಿ ದಿನಸಿಗಳು ಭಕ್ಷಗಳು ಮಾಡಿದ್ದರು.
ನಂತರ ಎತ್ತಿನ ಗಾಡಿ, ದ್ವೀ ಚಕ್ರ, ಜೀಪು,ಕಾರು, ರಿಕ್ಷಾ, ಟಂ ಟಂ ಸೇರಿದಂತೆ ಇನ್ನಿತರ ವಾಹನಗಳಲ್ಲಿ ತಮ್ಮ ಹೊಲಗಳಿಗೆ ಮಧ್ಯಾನ್ಹ ೧೧ ರಿಂದ ೧೨ ರ ವರೆಗೆ ತೆರಳಿದರು.
ತೋಟಗಳಿಲ್ಲದವರಿಗೆ ಹೊಲಗಳಿದ್ದವರು ಕರೆದುಕೊಂಡು ಹೋಗುವದು ವಿಶೇಷವಾಗಿತ್ತು.
ಹೊಲಗಳಲ್ಲಿರುವ ಬೆಳೆಗೆ, ಭಾವಿಗಳಿಗೆ, ಕರೆಂಟು ಇಂಜಿನುಗಳಿಗೆ ಮತ್ತು ಹೊಲದಲ್ಲಿರುವ ದೇವರ ಗುಡಿಯಲ್ಲಿ ಪೂಜೆ ಸಲ್ಲಿಸಿ ಚೆರಗ ಚೆಲ್ಲುವದು ವಿಶೇಷವಾಗಿತ್ತು.
ಮಹಿಳೆಯರು ಭಾವಿಗಳಲ್ಲಿ ತೆಪ್ಪಗಳನ್ನು ಮಾಡಿ ಪೂಜೆ ಸಲ್ಲಿಸಿದರು.
ಭೂಮಿತಾಯಿಗೆ ನೈವೆಧ್ಯ ರೂಪದಲ್ಲಿ ರೈತರು ಚೆರಗ ಚೆಲ್ಲುವದು ವಿಶೇಷವಾಗಿತ್ತು.
ಸಜ್ಜೆ ರೊಟ್ಟಿ, ಸಜ್ಜೆ ಹಿಟ್ಟಿನ ಕಡಬು, ಚವಳಿಕಾಯಿ, ಬೆಂಡೆಕಾಯಿ , ಪುಂಡಿ ಪಲ್ಲೆ, ಕಾಳು ಪಲ್ಲೆ , ಹೆಸರು ಕಾಳು, ಮೂಕಣಿ ಪಲ್ಲೆ, ಬದನೆಕಾಯಿ, ಎಳ್ಳು ಹಚ್ಚಿದ ಕಟಿರೊಟ್ಟಿ, ಹೂರಣ ಹೊಳಿಗೆ, ದಪಾಟಿ, ಶೆಂಗಾ ಹೊಳಿಗೆ, ತುಪ್ಪ, ಬಿಳಿ ಅನ್ನ, ಮಸಾಲಾ ಅನ್ನ, ಸಾಂಬಾರು, ಸೆಂಡಗಿ ಇನ್ನಿತರ ವಿಶೇಷ ಭಕ್ಷಗಳನ್ನು ಹೊಲದ ಪ್ರತಿಯೊಂದು ಮೂಲೆಗೂ ಅರ್ಪಿಸಿ ಪೂಜೆ ಮಾಡಿ ಸಜ್ಜೆ ರೊಟ್ಟಿ ಚವಳಿಕಾಯಿ ಚೆಂಗೆ ಭಲೋ ಎಂದು ಹೇಳುತ್ತ ನೈವೇಧ್ಯ ಸಮರ್ಪಿಸಿದರು. ಬಹುತೇಕ ರೈತರು ಹೊಲಗಳಲ್ಲಿ ಜೋಳ, ಗೋಧಿ, ಕಡಲೆ ಸೇರಿದಂತೆ ಇನ್ನಿತರ ಬೆಳೆ ಮೈ ದುಂಬಿ ಕೊಂಡಿರುವ ಮಾಗಿ ಹಬ್ಬದ ಕಾಲದಲ್ಲಿ ಹೊಲದಲ್ಲಿ ಕುಳಿತುಕೊಂಡು ಒಂದು ಸಂಭ್ರಮ ಹೀಗಾಗಿ ರೈತರು ತಮ್ಮ ಹೊಲಗಳಿಗೆ ತಮ್ಮ ಆತ್ಮೀಯರನ್ನು ಕರೆದು ಕೊಂಡು ಹೋಗಿ ಹೊಲದಲ್ಲಿ ಎಳ್ಳ ಅಮವಾಸೆಯ ವಿಶೇಷ ಊಟ ಮಾಡಿದರು. ಇದರಿಂದ ಭೂತಾಯಿ ಪ್ರಸನ್ನಳಾಗಿ ಫಸಲು ಹುಲುಸಾಗಿ ಬೆಳೆಯಲೆಂದು ಫ್ರಾರ್ಥಿಸುತ್ತಾರೆ.
ನಂತರ ಸಂಜೆ ಗೌಡರ ಮನೆಯ ಎತ್ತಿನ ಗಾಡಿಯನ್ನು ಜೋಳದ ದಂಟುಗಳಿಂದ ಸಿಂಗಾರ ಮಾಡಿ ದೀಪ ಹಚ್ಚಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೈತರೆಲ್ಲರೂ ಸೇರಿ ಮೆರವಣಿಗೆ ತೆಗೆದರು.
Subscribe to Updates
Get the latest creative news from FooBar about art, design and business.
Related Posts
Add A Comment

