– ಸಂಪದಾ ಹಿರೇಮಠ
ಆಲಮಟ್ಟಿ: ಆಹಾ ! ಹೂವಾ ನೋಡು ಎಂಥಾ ಅಂದವಾಗಿದೆ.ಹಸಿರೆಲೆಗಳ ನಡುವೆ ಎಷ್ಟೊಂದು ಮಧುರ ಭಾವ ಬೀರಿದೆ. ಬೆಳ್ಳನೆಯ ದೈವೀ ಸೌಗಂಧಿತ ಹೂವಿನ ದಳಗಳು ಕಗ್ಗತ್ತಿನಲ್ಲಿ ರಾಣಿಯಂತೆ ಮಿನುಗಿ ಸುಗಂಧಿತ ಸುವಾಸನೆಯುತ ಪರಿಮಳ ತೆಲ್ಲಿದೆ.!
ಇದು ವರ್ಷಕ್ಕೊಮ್ಮೆ ತನ್ನ ವಿಶೇಷ ವ್ಯಯಾರ ಮೊನಚಿನೊಂದಿಗೆ ಅರಳಿ ಘಮಘಮಿಸುವ ದೈವೀ ಪುಷ್ಪ ಖ್ಯಾತಿಯ ಬ್ರಹ್ಮ ಕಮಲ ಹೂವಿನ ವರ್ಣಲೇಪನ !
ಆಲಮಟ್ಟಿ ರೈಲ್ವೆ ಸ್ಟೇಷನ್ ಬಡಾವಣೆಯಲ್ಲಿನ ನಿವೃತ್ತ ಹೈಸ್ಕೂಲ್ ನೌಕರ ಬಾಬು ಪಿ.ಲಮಾಣಿ ಅವರ ಮನೆ ಅಂಗಳದಲ್ಲಿ ಮಂಗಳವಾರ ರಾತ್ರಿ ಬ್ರಹ್ಮಕಮಲ ನಾಲ್ಕೈದು ಹೂವುಗಳು ವೈವಿಧ್ಯಮಯವಾಗಿ ಅರಳಿ ಪುಷ್ಪರಸ ದೌತಣದೊಂದಿಗೆ ಹೃನ್ಮನ ತಣಿಸಿದವು.
ಪವಿತ್ರ ಭಾವದ ಈ ಬ್ರಹ್ಮ ಕಮಲದ ಬಳ್ಳಿ ಎಲೆಯಿಂದಲೇ ನಿರ್ಮಾಣಗೊಳ್ಳುತ್ತದೆ. ಹೂವು ಮೊಗ್ಗುಗಳು ಎಲೆಯಿಂದಲೇ ಅರಳಿ ರಾತ್ರಿ ವೇಳೆ ಅರಳುವುದನ್ನು ಕಂಡು ಮನೆ ಮಂದಿ ಸಂತಸಗೊಂಡರು.ಈ ಹೂವು ಕಣ್ತುಂಬಿಸಿಕೊಂಡರೆ ಅದೃಷ್ಟ ಖುಲಾಯಿಸುತ್ತೆ ಎಂಬ ನಂಬಿಕೆಯ ಪರಿಕಲ್ಪನೆಯಿಂದ ತನ್ನದೇ ವಿಶಿಷ್ಟತೆ ಛಾಪು ಬ್ರಹ್ಮ ಕಮಲ ಹೂವಿಗಿದೆ. ಹೀಗಾಗಿ ಅಪರೂಪಕ್ಕೆ ಅರಳುವ ಈ ಹೂವಿಗೆ ಪೂಜ್ಯನೀಯ ಭಾವದಿಂದ ಸತ್ಕರಿಸಿ ಸಾಂಪ್ರದಾಯಿಕ ಪೂಜಾ ಕೈಂಕರ್ಯ ಬಾಬು ಲಮಾಣಿ ಕುಟುಂಬದ ಸದಸ್ಯರು ಶ್ರದ್ಧೆಯಿಂದ ಕೈಗೊಂಡು ಭಕ್ತಿನಮನ ಸಲ್ಲಿಸಿದರು.
ಕತ್ತಲೆಯಲ್ಲಿ ಅರಳಿ ಬೆಳಗಾಗುವುದರೊಳಗೆ ಕಮರಿದ ರಾತ್ರಿ ರಾಣಿ ಎನ್ನುವ ಬ್ರಹ್ಮ ಕಮಲ ಹೂವು ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ ಜೊತೆಗೆ ಆರ್ಥಿಕ ಶಕ್ತಿ ಬಲಗೊಳಿಸುತ್ತದೆ ಎನ್ನುವ ಪ್ರತೀತಿಯಿದೆ. ಈ ಹೂವು ಸಂತೋಷ, ಸಮೃದ್ಧಿ ಸಂಕೇತವಾಗಿದೆ ಎನ್ನಲಾಗುತ್ತಿದೆ. ಶಿವನಿಗೂ ಪ್ರಿಯ ಹೂವು ಬ್ರಹ್ಮ ಕಮಲ ಎನ್ನುವುದು ಸರ್ವಾದಿತ. ರಾತ್ರಿ ಅರಳಿ ಮುಂಜಾನೆಯಾಗುವಷ್ಟರಲ್ಲೇ ಮುದುಡಿ ಬಾಡುವ ಈ ಹೂವು ಆಧ್ಯಾತ್ಮಿಕ ಮಹತ್ವ ಪಡೆದಿದೆ. ಬ್ರಹ್ಮ ಕಮಲ ಹೂವು ಅರುಳಿಕೆಯ ಸಂಭ್ರಮ ಬಾಬು ಲಮಾಣಿ ಕುಟುಂಬ ಪರಿವಾರದಲ್ಲಿ ಸಂತಸದ ಅಲೆ ಮೂಡಿಸಿದೆ. ಈ ಬ್ರಹ್ಮ ಕಮಲ ಹೂವಿನ ಸೌಂದರ್ಯದ ಪರಿಮಳ ಬಾಬು ಲಮಾಣಿ ಅವರ ಮಡದಿ ಶ್ಯಾನಾಬಾಯಿ, ಮಗಳು ಕವಿತಾ,ಮಗ ರವಿ ಸೊಸೆ ತನು ಅವರ ಭಾವ ಮನದಲ್ಲಿ ಸಂಪದ್ಭರಿತ ಖುಷಿಯ ಕ್ಷಣಗಳನ್ನು ಅರಳಿಸಿ ಕಮರಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

