ವಿಜಯಪುರ: ಕವಿಯ ಭಾಷೆಯ ಒಳಗಿನ ಪಲ್ಲಟಗಳು ಕವಿತೆಯ ರೂಪ ಮತ್ತು ವಸ್ತುವಿನಲ್ಲೂ ಹುಡುಕಾಟ, ವಿನಾಶಕಾರಿ ಕ್ರಮಗಳು, ಚಿಂತೆಗಳು, ಮಾನವ ಜನಾಂಗದ ಆರೋಗ್ಯ ಮತ್ತು ಮನಸ್ಸನ್ನು ಕೇಂದ್ರಿಕರಿಸುವ ಆಲೋಚನೆಗೆ ಲೇಖಕರು ಸಾಮಾನ್ಯ ಮೌಲ್ಯಗಳ ಅರ್ಥಪೂರ್ಣತೆಗಾಗಿ ಕವನಗಳು ಶ್ರೇಷ್ಟತೆಯನ್ನು ಪಡೆಯುತ್ತವೆ ಎಂದು ಡಾ. ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭೀಮಣ್ಣ ಸ.ಬಜಂತ್ರಿ ಅವರ ‘ನಾನ್ಯಾರು ನನ್ನವರು ಯಾರು’? ಆಧುನಿಕ ವಚನ ಸಂಕಲನ ಕೃತಿ ಪರಿಚಯ ಮಾಡುತ್ತ ಸಂಕಲನದಲ್ಲಿ ಅಂತರಂಗದ ಶೋಧನೆ, ಮನೋವೈಜ್ಞಾನಿಕ ಚಿಂತನೆ, ಆಧ್ಯಾತ್ಮಿಕ ಚಿಂತನೆ ಬದುಕಿನ ಸಂಬಂಧ ಇವೆಲ್ಲವೂ ಬದುಕಿನ ಸಿಹಿ-ಕಹಿ ಅನುಭವಗಳನ್ನು ಪ್ರೀತಿಯಿಂದ ಎಲ್ಲವೂ ಭಾವನಾತ್ಮಕವಾಗಿ ತೆರೆದುಕೊಳ್ಳುತ್ತಿವೆ. ಸಂಕಲನ ಕನ್ನಡ ಸಾಹಿತ್ಯಕ್ಕೆ ನೆಮ್ಮದಿ ಹಾಗೂ ಭರವಸೆಯ ಕೃತಿ ಎಂದರು.
ಜಿಲ್ಲಾ ಶಿಕ್ಷಣಾಧಿಕಾರಿ ಡಾ. ಎ.ಎಮ್.ಲಿಮಕರ ಮಾತನಾಡುತ್ತ, ಸಾಮಾಜಿಕ ವ್ಯವಸ್ಥೆಯ ಕರಾಳತೆಯ ಬಗ್ಗೆ ಸುತ್ತಲಿನ ಬದುಕಿನಲ್ಲಿ ನಡೆಯುವ ವಿದ್ಯಮಾನಗಳು, ಮೌಡ್ಯತೆ, ಅನಿಷ್ಟಗಳ ಬಗೆಗೆ ಅರಿವು ಮೂಡಿಸುವ ಕೃತಿ ಎಂದು ಹೇಳಿದರು. ಆರ್.ಪಿ.ಚವ್ಹಾಣ, ಅಕ್ಷಯ ನಾಗೇಶಿ ಮಾತನಾಡಿದರು. ಸಂಗಮೇಶ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು.
ಪ್ರೊ.ದೊಡ್ಡಣ್ಣ ಬಜಂತ್ರಿ ಸ್ವಾಗತಿಸಿದರು. ಪ್ರಭು ಕೊಟ್ಯಾಳ ವಂದಿಸಿದರು ಸಂಗಮೇಶ ಬದಾಮಿ ಕಾರ್ಯಕ್ರಮ ನಿರ್ವಹಿಸಿದರು.
ಡಾ. ಬಾಲಾಜಿ ಕೃತಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಡಾ. ಜಾವೇದ ಜಮಾದಾರ, ಮಲ್ಲಿಕಾರ್ಜುನ ಭಜಂತ್ರಿ, ಡಿ.ಎಮ್.ಬಜಂತ್ರಿ, ಚಂದ್ರಶೇಖರ ಹೊಸಮನಿ, ಗೋವಿಂದ ವಾಜಂತ್ರಿ ಎ.ಡಿ.ಮುಲ್ಲಾ, ಬಿ.ವಿ.ಪಾಟೀಲ, ಎಮ್.ಬಿ.ಕುಚನೂರ, ಪಿ.ಎ.ಆಸಂಗಿ, ಎನ್.ಕೆ.ಮನಗೊಂಡ. ಕೃಷ್ಣ ಬಜಂತ್ರಿ, ಶ್ರೀಮಂತ ಬಜಂತ್ರಿ, ಯಮನಪ್ಪ ಬಜಂತ್ರಿ, ಸದಾಶಿವ ಬಜಂತ್ರಿ, ವಿಜಯ ಮಾನೆ, ಮಲ್ಲನಗೌಡ ಬಿರಾದಾರ, ಸಾದೀಕ್ ಉಸ್ತಾದ, ಪ್ರಕಾಶಕರಾದ ಮಹೇಂದ್ರ ಬಿ.ಜಾಧವ ಮತ್ತು ರಾಜೇಂದ್ರ ಬಿ.ಜಾಧವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲೇಖಕ ಭೀಮಣ್ಣ ಬಜಂತ್ರಿ ಅವರಿಗೆ ಸ್ನೇಹಿತರು, ಹಿತೈಷಿಗಳು, ಸನ್ಮಾನಿಸಿ ಸತ್ಕರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

