Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಹಿಂದೂಗಳ ಪ್ರಮುಖ ಹಬ್ಬವಾದ ರಂಗಿನಾಟದ ಪ್ರಮುಖ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಶಾಸಕ ನಾಡಗೌಡರನ್ನು ಆಹ್ವಾನಿಸಿದ್ದರೂ ಅವರು ನಿರ್ಲಕ್ಷಿಸಿ ತೆರಳಿರುವ ಘಟನೆ ಪಟ್ಟಣದ ಹಿಂದೂ ಸಮಾಜ ಹಾಗೂ ವ್ಯಾಪಾರಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕೇವಲ ಕಾರ್ಯಕ್ರಮದ ನಿರ್ಲಕ್ಷ್ಯವಲ್ಲ, ಹಿಂದೂ ಸಮಾಜದ ಭಾವನೆಗಳನ್ನು ಅವಮಾನಿಸಿದ ಕ್ರಮವಾಗಿದೆ ಎಂದು ವ್ಯಾಪಾರಸ್ಥರ ಮುಖಂಡ ಜಗದೀಶ ಕಂಠಿ ಕಿಡಿಕಾರಿದರು.ಪಟ್ಟಣದ ಬಜಾರ್‌ನ ದುರ್ಗಾದೇವಿ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಲಾದ ಬಣ್ಣದಾಟ ಕಾರ್ಯಕ್ರಮದ ಸಂದರ್ಭದಲ್ಲಿ ಉದಯರಶ್ಮಿ ದಿನಪತ್ರಿಕೆಯೊಂದಿಗೆ ಮಾತನಾಡಿದ ಅವರು, ಶಾಸಕ ನಾಡಗೌಡರು ಸಾರ್ವಜನಿಕ ವೇದಿಕೆಗಳಲ್ಲಿ ಎಲ್ಲ ಧರ್ಮಗಳೂ ಒಂದೇ ಎಂದು ಹೇಳುತ್ತಾ ಭಾವೈಕ್ಯತೆಯ ಬಗ್ಗೆ ಮಾತನಾಡುತ್ತಾರೆ. ಆದರೆ ತಮ್ಮದೇ ಧರ್ಮದ ಹಬ್ಬಕ್ಕೆ ಆಹ್ವಾನ ನೀಡಿದಾಗ ಅದನ್ನು ನಿರ್ಲಕ್ಷಿಸುವುದು ಅವರ ಮಾತು ಮತ್ತು ನಡೆ ನಡುವೆ ಇರುವ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಆರೋಪಿಸಿದರು.ಬಜಾರ್ ವ್ಯಾಪಾರಸ್ಥರು ಹಾಗೂ ಹಿಂದೂ ಸಮಾಜದ ಮುಖಂಡರು ಗೌರವಪೂರ್ವಕವಾಗಿ ಆಹ್ವಾನ ನೀಡಿದ್ದರೂ ಅದನ್ನು ಸ್ವೀಕರಿಸದೇ ಕಾರ್ಯಕ್ರಮವನ್ನು ಕಡೆಗಣಿಸಿರುವುದು ಇಡೀ ಬಜಾರ್ ಜನತೆಗೂ ಹಾಗೂ ಹಿಂದೂ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುಗಾದಿ ಹಬ್ಬದ ಹಿನ್ನೆಲ್ಲೆಯಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರೆಯ ಪ್ರಯುಕ್ತ ಶ್ರೀಶೈಲಗೆ ತೆರುಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮೂಲಕ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬಸವನ ಬಾಗೇವಾಡಿ ಬಸ್ ನಿಲ್ದಾಣದಿಂದ ದಿನಾಂಕ೦೬-೦೩-೨೦೨೬ ಜನದಟ್ಟಣೆಗನುಗುಣವಾಗಿ ಶ್ರೀಶೈಲಕ್ಕೆ ಹೆಚ್ಚುವರಿ ಬಸ್ಸುಗಳು ಕಾರ್ಯಾಚರಿಸಲಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಸಹ ಕಲ್ಪಿಸಿದೆ.ಈ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ೧ನೇ ಘಟಕ ವ್ಯವಸ್ಥಾಪಕರು- ಮೊ:೭೭೬೦೯೯೨೨೬೩, ವಿಜಯಪುರದ ೨ನೇ ಘಟಕದ ವ್ಯವಸ್ಥಾಪಕರು ಮೊ:೭೭೬೦೯೯೨೨೬೪, ಇಂಡಿ ಘಟಕ ವ್ಯವಸ್ಥಾಪಕರು ಮೊ:೭೭೬೦೯೯೨೨೬೫, ಸಿಂದಗಿ ಘಟಕ ವ್ಯವಸ್ಥಾಪಕರು ಮೊ:೭೭೬೦೯೯೨೨೬೬, ಮುದ್ದೇಬಿಹಾಳ ಘಟಕ ವ್ಯವಸ್ಥಾಪಕರು ಮೊ:೭೭೬೦೯೯೨೨೬೭, ತಾಳಿಕೋಟಿ ಘಟಕ ವ್ಯವಸ್ಥಾಪಕರು ಮೊ:೭೭೬೦೯೯೨೨೬೮, ಬ.ಬಾಗೇವಾಡಿ ಘಟಕ ವ್ಯವಸ್ಥಾಪಕರು ಮೊ:೭೭೬೦೯೯೮೮೬೯, ವೀರರಾಣಿ ಕಿತ್ತೂರ ಚನ್ನಮ್ಮ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ವ್ಯವಸ್ಥಾಪಕರ ಮೊ:೭೭೬೦೯೯೨೨೫೮, ವಿಜಯಪುರ ಮುಂಗಡ ಟಿಕೇಟ ವಿಭಾಗ ಮೊ:೭೭೬೦೯೯೨೨೭೦, ವಿಭಾಗೀಯ ಸಾರಿಗೆ ಅಧಿಕಾರಿ ಮೊ:೭೭೬೦೯೯೨೨೫೨, ವಿಭಾಗೀಯ…

Read More

ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾ ವಾರ್ತಾಧಿಕಾರಿ ಅಮರೇಶ ದೊಡಮನಿ ಕೋರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಮಾರ್ಚ್ ೯ರ ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಂಜೆ ೪ ಗಂಟೆಗೆ ಭೀಮ ಗಾಯನ ಕಾರ್ಯಕ್ರಮ ನಡೆಯಲಿದೆ.ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಸಾಧನೆ, ಸಮಾನತೆಯ ಹೋರಾಟ, ಅಸ್ಪೃಶ್ಯತೆ ನಿರ್ಮೂಲನೆ, ಸ್ತ್ರೀ ಸಮಾನತೆ ಕುರಿತ ಗೀತೆಗಳ ಗಾಯನ ನಡೆಯಲಿದೆ.ಸಮಾನತೆಯ ಸ್ವರ ಸಂಭ್ರಮ ಭೀಮನ ಆದರ್ಶಗಳನ್ನು ಸ್ವರಗಳಲ್ಲಿ ಜೀವಂತಗೊಳಿಸುವ ಜಾಗೃತಿ, ಆತ್ಮಗೌರವ ಮತ್ತು ಸಮಾನತೆಯ ಸಂಗೀತ ಕಾರ್ಯಕ್ರಮವೇ ಭೀಮ ಗಾಯನವಾಗಿದೆ.ಸಿದ್ಧಾರ್ಥ ಯುವ ಕ್ರೀಡಾ ಸಾಂಸ್ಕೃತಿಕ ಅಭಿವೃದ್ಧಿ ಸಂಘವು ಭೀಮ ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ.ಡಾ.ಬಿ.ಆರ್.ಅಂಬೇಡ್ಕರ್ ಅವರು ಭೇಟಿ ನೀಡಿರುವ ರಾಜ್ಯದ ಪ್ರಮುಖ ಸ್ಥಳಗಳ ಪೈಕಿ ಆಯ್ದ ಸ್ಥಳಗಳಲ್ಲಿ ಭೀಮಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅವರು ಭೀಮ ಗಾಯನ ಕಾರ್ಯಕ್ರಮಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಕಳೆದ ೧೫ ವರ್ಷಗಳಿಂದ ಪತ್ರಕರ್ತರಾಗಿ ಹಾಗೂ ಪತ್ರಿಕೆ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ಕಲಕೇರಿ ಗ್ರಾಮದ ಈರಣ್ಣ ಎಂ. ಝಳಕಿ ಅವರು ಗ್ರಾಮದ ಶ್ರೀಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠವು ಕೊಡಮಾಡುವ ೨೦೨೬ನೇ ಸಾಲಿನ “ಶ್ರೀ ಗುರು ಮರುಳಾರಾಧ್ಯ ಸಿರಿ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಶ್ರೀಯುತರಿಗೆ ಪ್ರತ್ರಿಕಾ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮಾ.೮ ರಂದು ಶ್ರೀಶೈಲ ಜಗದ್ಗುರುಗಳ ಸಾನಿಧ್ಯದಲ್ಲಿ ನಡೆಯುವ ಶ್ರೀಗುರು ಮರುಳಾರಾಧ್ಯರ ಅನುಭಾವ ಜಾತ್ರಾ ಮಹೋತ್ಸವ ಹಾಗೂ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು ಎಂದು ಶ್ರೀಮಠದ ಪೀಠಾಧಿಪತಿ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡಿರುವ ನೂರಾರು ಭಕ್ತರಿಗೆ ಬಿಸಿಲಿನ ತಾಪ ತಗ್ಗಿಸಲು ಓಂ ಸಾಯಿ ಎಂಟರಪ್ರೈಜಸ್ ಮಾಲಿಕ ಶಿವಾನಂದ ಎಸ್. ಸುಕಂದ ಅವರು ಎಲ್ಲ ಭಕ್ತಾಧಿಗಳಿಗೆ ಟೋಪಿ ವಿತರಿಸಿದರು.ಪ್ರತಿ ವರ್ಷ ಶ್ರೀಶೈಲ ಪಾದಯಾತ್ರಿಗಳಿಗೆ ವಿವಿಧ ಸೇವೆ ನೀಡುತ್ತಿರುವ ಸುಕಂದ ಅವರು ಈ ಬಾರಿ ಟೋಪಿ ಹಾಗೂ ಕುಡಿಯಲು ನೀರಿನ ಬಾಟಲ್ ಸೇವೆ ನೀಡಿದರು.

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ಸರ್ಕಾರದ ೨೦೨೬-೨೭ ನೇ ಸಾಲಿನ ಆಯವ್ಯಯವನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ ೬ ಶುಕ್ರವಾರ ದಂದು ಮಂಡಿಸಲಿದ್ದಾರೆ.೧೭ನೇ ಬಾರಿ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಸೃಷ್ಟಿಸಿದ್ದು, ಈ ಬಜೆಟ್ ಮಂಡನೆಯ ನೇರಪ್ರಸಾರವನ್ನು ರಾಜ್ಯದ ಆಯ್ದ ಬಸ್ ನಿಲ್ದಾಣದ ಟಿವಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.ರಾಜ್ಯದ ೨೩೦ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಪ್ರಸಾರ ಮಾಡಲು ಉದ್ದೇಶಿಸಿದೆ.ಕರ್ನಾಟಕ ರಾಜ್ಯದ ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ದಿನಾಂಕ ೦೬ ಮಾರ್ಚ್ ೨೦೨೬ರಂದು ವಿಧಾನಸೌಧದಲ್ಲಿ ರಾಜ್ಯದ ಬಜೆಟ್ ಮಂಡಿಸಲಿದ್ದಾರೆ.ಈ ಮಹತ್ವದ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶದಿಂದ ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ರಾಜ್ಯದಾದ್ಯಂತ ಇರುವ ೨೩೦ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಇರುವ ತನ್ನ ಡಿಜಿಟಲ್ ಡಿಸ್ಪ್ಲೇ (ಐಇಆ) ಪರದೆಗಳ ಮೂಲಕ ನೇರ ಪ್ರಸಾರ ಮಾಡಲು ಮುಂದಾಗಿದೆ.ವಿಧಾನಸೌಧದಲ್ಲಿ ನಡೆಯುವ ಬಜೆಟ್…

Read More

ಬಿಸಿಗಾಳಿಯ ಪ್ರಭಾವ ಕಂಡುಬರುವ ಸಾಧ್ಯತೆ | ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ | ಡಿಸಿ ಡಾ.ಆನಂದ ಕೆ. ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅತೀ ಹೆಚ್ಚು ತಾಪಮಾನ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೀಡಲಾದ ಸಲಹೆ ಸೂಚನೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಮನವಿ ಮಾಡಿದ್ದಾರೆ.ರಾಜ್ಯದ ಕೆಲ ಜಿಲ್ಲೆಗಳಲ್ಲಿ ೩ ರಿಂದ ೬ ದಿನಗಳವರೆಗೆ ಬಿಸಿಗಾಳಿಯ ಪ್ರಭಾವ ಕಂಡುಬರುವ ಸಾಧ್ಯತೆಯಿದೆ. ತೀವ್ರ ತಾಪಮಾನವು ಸಾರ್ವಜನಿಕರ ಆರೋಗ್ಯದ ಮೇಲೆ, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರ ಮೇಲೆ ಗಂಭೀರ ಪರಿಣಾಮ ಬೀರಬಹುದು. ಬಿಸಿಲಿನಿಂದ ಉಂಟಾಗುವ ಬಳಲಿಕೆ, ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ ತಡೆಗಟ್ಟಲು ಮತ್ತು ತಗ್ಗಿಸಲು ಸಾರ್ವಜನಿಕರು ಗಮನ ಹರಿಸಬೇಕು ಎಂದವರು ತಿಳಿಸಿದ್ದಾರೆ.ಗರಿಷ್ಠ ತಾಪಮಾನದ ಅವಧಿಯಲ್ಲಿ ಅದರಲ್ಲೂ ಮಧ್ಯಾಹ್ನ ೧೨ ರಿಂದ ೩ಗಂಟೆರವರೆಗೆಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು ಎಂದವರು ತಿಳಿಸಿದ್ದಾರೆ.ಪೂರ್ವಾಹ್ನ ೧೧ ರಿಂದ ಸಂಜೆ ೪…

Read More

ಅಧಿಕಾರಿಗಳಿಂದ ಮಾ.೧೫ ಕ್ಕೆ ಕನ್ನೂರ ೧೧೦ ಕೆ.ವಿ ಘಟಕ ಉದ್ಘಾಟನೆ ಮಾಡುವ ಲಿಖಿತ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಕನ್ನೂರನಲ್ಲಿ ಕಳೆದ ಒಂದು ವರ್ಷದ ಹಿಂದೆ ಉದ್ಘಾಟನೆ ಆಗಬೇಕಿರುವ ೧೧೦ ಕೆ.ವಿ ವಿದ್ಯತ್ ಘಟಕ ಇಲ್ಲಿಯವರೆಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನೀರ್ಲಕ್ಷ್ಯದಿಂದ ಆಗಿಲ್ಲ, ಎಂದು ಆಗ್ರಹಿಸಿ ರೈತರು ಸುಮಾರು ೩ ಗಂಟೆಗಳ ಕಾಲ ಪ್ರತಿಭಟನೆ ಮಾಡಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲೆಯ ತಿಡಗುಂದಿ ಕೆ.ಇ.ಬಿ.ಯ ಮುಂದೆ ಜಮಾಯಿಸಿದ ರೈತರು ಕಚೇರಿ ಗೇಟಿಗೆ ಹಸಿರು ಶಾಲು ಕಟ್ಟಿ ಘೋಷಣೆ ಕೂಗಿದರು.ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಮಾತನಾಡಿ, ಗುತ್ತಿಗೆದಾರನ ವಿಳಂಬ ನೀತಿಯಿಂದ ೨ ವರ್ಷದ ಹಿಂದೆ ಉದ್ಘಾಟನೆ ಆಗಬೇಕಿರುವ ಕನ್ನೂರಿನ ಹೊಸ ಕೆ.ಇ.ಬಿ ಇಲ್ಲಿಯವರೆಗೆ ಆಗಿಲ್ಲ ಎಂದರೆ ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕೂಡಾ ಪ್ರಮುಖ ಕಾರಣವಾಗಿದೆ ಎಂದರು.ಇಂದು ಸಾಯಂಕಾಲದ ಒಳಗಾಗಿ ಉದ್ಘಾಟನೆ ಮಾಡಬೇಕು, ಇಲ್ಲವಾದಲ್ಲಿ ಇಲ್ಲಿಯೇ ಟೆಂಟ್ ಹೊಡೆದು ಅಡುಗೆ ಮಾಡಿ ಹೋರಾಟ ಮಾಡಲಾಗುವುದು ಎಂದು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಯುಕೆಪಿ ಕಚೇರಿ ಮೇಲೆ ಬೆಳಗ್ಗೆ ವಿಜಯಪುರ ಲೋಕಾಯುಕ್ತ ಎಸ್.ಪಿ ಮಹೇಶ ಇವರ ನೇತೃತ್ವದಲ್ಲಿ ದಾಳಿ ನಡೆದಿದೆ.ಅಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಅಭಿತಂತರ ಪ್ರಕಾಶ ಗೆಡಬಂಡಿ ಇವರ ಕುರಿತು ಎಲ್ಲ ಕಾಗದ ಪತ್ರಗಳನ್ನು ಲೋಕಾಯುಕ್ತರು ತಪಾಸಣೆ ನಡೆಸಿದರು.ಅದರಂತೆ ಅದೇ ವೇಳೆ ಪ್ರಕಾಶ ಗಡಬಂದಿಯವರ ಬೆಂಗಳೂರಿನ ಮಹಾದೇವಪುರ ಬಡಾವಣೆಯಲ್ಲಿರುವ ಮನೆ, ಮತ್ತು ಬಾಲ್ಕಿಯಲ್ಲಿರುವ ಮನೆ ಮತ್ತು ಬಾಲ್ಕಿ ಯಲ್ಲಿರುವ ದೀಪಾಂಕರ ಶಾಲೆ ಮೇಲೆ ಲೋಕಾಯುಕ್ತರು ದಾಳಿ ಮಾಡಿ ಪ್ರಕಾಶ ಗೆಡಬಂಡಿಯವರ ಕುರಿತು ಇರುವ ಕಾಗದ ಪತ್ರಗಳನ್ನು ಕಲೆ ಹಾಕಿದ್ದು ಪ್ರಕರಣದ ದಾಳಿ ಮುಂದುವರೆದಿದೆ.ಲೋಕಾಯುಕ್ತ ಸಿಪಿಐ ನಿಂಗಪ್ಪ ಪೂಜಾರಿ, ಸಿಬ್ಬಂದಿ ಸಿದ್ದರಾಮ ನಾವಿ, ಚೇತನ ಹಿರೇಮಠ, ಚನಗೊಂಡ ಹಳಿಕಾರ ಮತ್ತಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಬೆಳಿಗ್ಗೆಯಿಂದ ಸಾಯಂಕಾಲವರೆಗೆ ಮಕ್ಕಳು, ಯುವಕರು ಹಾಗೂ ಸಮಾನ ಮನಸ್ಕರ ಬಳಗ ಬಣ್ಣದಾಟದಲ್ಲಿ ತೊಡಗಿದ್ದರು.ವಿವಿಧೆಡೆ ಬೆಳಿಗ್ಗೆ ಏಳು ಗಂಟೆಯಿಂದಲೇ ಮಕ್ಕಳು ಬಣ್ಣ ಹಿಡಿದು ಬೀದಿಗೆ ಬಂದು ಹೋಳಿ ಹುಣ್ಣಿಮಗೆ ಚಾಲನೆ ನೀಡಿದರು. ೧೦ಗಂಟೆಯ ಹೊತ್ತಿಗೆ ದೊಡ್ಡವರೂ ಹೊರ ಬಂದು ಬಣ್ಣದಾಟಕ್ಕೆ ಮೆರುಗು ನೀಡಿದರು. ಯುವಕ-ಯುವತಿಯರು ಗುಂಪು ಗುಂಪಾಗಿ ಸಮೀಪದ ಗೆಳೆಯುರ ಮನೆಗಳಿಗೆ ತೆರಳಿ ಬಣ್ಣ ಎರಚಿ ಸಂಭ್ರಮಿಸಿದರು. ಬಣ್ಣ ಹಚ್ಚಿಕೊಂಡು ಹಲಗೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಯುವಕರ ಸಮೂಹ ಹೋಳಿಗೆ ವಿಶೇಷ ಮೆರುಗು ತಂದುಕೊಟ್ಟಿತು.ಪಟ್ಟಣದ ಬಂದಾಳ ರಸ್ತೆ, ಕಲ್ಯಾಣ ನಗರ, ವಿದ್ಯಾನಗರ, ಹಳೆ ಬಜಾರ, ಜ್ಯೋತಿ ನಗರ, ಗಣೇಶ ನಗರ, ಬಸವ ನಗರ, ಜೆಭೀಮ ನಗರ, ಕಾಳಿಕಾ ನಗರ ಸೇರಿದಂತೆ ಹೀಗೆ ಎಲ್ಲೆಡೆ ಸಂಭ್ರಮದ ವಾತವರಣವಿತ್ತು. ಹೋಳಿ ಹಬ್ಬದ ಮುನ್ನ ಹುಣ್ಣಿಮೆಯ ದಿನವಾದ ಮಂಗಳವಾರ ರಾತ್ರಿ ನಗರದ ವಿವಿಧ ಬಡಾವಣೆಗಳಲ್ಲಿ ಕಾಮ ದಹನ ಕಾರ್ಯಕ್ರಮ ನಡೆಯಿತು.…

Read More