Author: editor.udayarashmi@gmail.com

ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಪ್ರೇಮಾನಂದ ಬಿರಾದಾರ ಆಗ್ರಹ ವಿಜಯಪುರ: ಗುಂಟಾ ಪ್ಲಾಟ್ ನಿವಾಸಿಗಳು ಅತ್ಯಂತ ಬಡವರು, ಹೀಗಾಗಿ ಅವರಿಗೆ ಡಬಲ್ ಟ್ಯಾಕ್ಸ್ ಹೊರೆ ಹೊರೆಸುವುದು ಬೇಡ ಎಂದು ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಪ್ರಬಲವಾಗಿ ಒತ್ತಾಯಿಸಿದರು.ವಿಜಯಪುರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಮೆಹಜಬೀನ್ ಹೊರ್ತಿ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಕುರಿತು ಬೆಳಕು ಚೆಲ್ಲಿದ ಬಿರಾದಾರ, ಆಟೋ, ಟಾಂಗಾ, ಕೂಲಿಕಾರ್ಮಿಕರೇ ಗುಂಟಾ ಪ್ಲಾಟ್ ಖರೀದಿಸಿದ್ದಾರೆ. ಕೋವಿಡ್‌ನಲ್ಲಿ ದುಡಿಯುವ ಅನೇಕ ಯಜಮಾನರೇ ತೀರಿ ಹೋಗಿದ್ದಾರೆ. ಅಂತಹ ಕುಟುಂಬಗಳು ಎಲ್ಲಿ ಹೋಗಬೇಕು? ಡಬಲ್ ಟ್ಯಾಕ್ಸ್, ದಂಡ ಹೀಗೆ ಎಲ್ಲವನ್ನು ಕಟ್ಟಲು ಅವರು ಸಾಲ ಮಾಡಬೇಕೆ? ಅವರು ಉಪಜೀವನ ನಡೆಸುವುದೇ ಕಷ್ಟವಾಗಿದೆ, ಅಂತಹದರಲ್ಲಿ ದೊಡ್ಡ ದೊಡ್ಡ ಮೊತ್ತದ ದಂಡ ಕಟ್ಟಲು ಆ ಬಡ ಜನರಿಗೆ ಸಾಧ್ಯವೇ ಎಂದು ಪ್ರಶ್ನಿಸಿದರು.ಇದಕ್ಕೆ ಸ್ಪಷ್ಟೀಕರಣ ನೀಡಿದ ಆಯುಕ್ತ ಬದರುದ್ದೀನ ಸೌದಾಗರ, ಕಾಯ್ದೆ ಅನ್ವಯ ಗುಂಟಾ ಪ್ಲಾಟ್‌ಗಳಿಂದ ಕರ ವಸೂಲಿ ಮಾಡಲಾಗುತ್ತಿದೆ. ಇದು…

Read More

ವಿಜಯಪುರ: ತಮಗೆ ಕೊಟ್ಟ ಹಳೆಯ ವಾಹನ ಹಳೆಯದಾಗಿದ್ದು ಹಾಗೂ ವಾಹನ ಚಾಲಕನನ್ನು ನೇಮಕ ಮಾಡದ ಕಾರಣ ವಿಜಯಪುರ ಮಹಾನಗರ ಪಾಲಿಕೆ ಮೇಯರ್ಗುರುವಾರ ಟಾಂಗಾ ಮೂಲಕ ಸಾಮಾನ್ಯ ಸಭೆಗೆ ಆಗಮಿಸಿ ಗಮನ ಸೆಳೆದರು.ಪಾಲಿಕೆಯಿಂದ ಹಳೆಯ ವಾಹನ ನೀಡಲಾಗಿದೆ. ಚಾಲಕನೂ ಇಲ್ಲದೇ ವಾಹನ ಹೇಗೆ ಉಪಯೋಗಿಸಬೇಕೆಂದು ಪ್ರಶ್ನಿಸಿದರು.ನಮ್ಮದೇ ಸರ್ಕಾರವಿದ್ದರೂ ಪಾಲಿಕೆ ಮೇಯರನ್ನು ಉದಾಸೀನ ಮಾಡಲಾಗುತ್ತಿದೆ. ಇಲಾಖೆ ಪ್ರಧಾನ ಕಾರ್ಯದರ್ಶಿ ಗಮನಕ್ಕೆತಂದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.ಮೇಯರ್ ನಡೆಗೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ. ಪಾಲಿಕೆಯ ನಿಮಯದಂತೆ ನೂತನ ವಾಹನ ಖರೀಧಿ ಮಾಡಲು ಹಾಗೂ ಬಾಡಿಗೆ ವಾಹನ ಪಡೆಯಲು ಅವಕಾಶವಿದೆ.

Read More

ಚಡಚಣ: ಪಟ್ಟಣದ ಸಂಗಮೇಶ್ವರ ಕಲಾ , ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಚಡಚಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ನಿಮಿತ್ತ ಪಾಲಿಮರ್ ನ್ಯಾನೊಕಾಂಪೊಸಿಟ್ಸ್ ಎಂಬ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ವಿಜಯಪುರದ ಬೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಆನಂದ ಕುಲಕರ್ಣಿ ಮಾತನಾಡಿ, ಒಂದು ಪಾಲಿಮರ್ ಎಂಬುದು ಬಹುದೊಡ್ಡ ಅಣುಗಳನ್ನು ಒಳಗೊಂಡಿರುವ ಒಂದು ವಸ್ತು ಅಥವಾ ಇದು ಅನೇಕ ಪುನರಾವರ್ತಿತ ಉಪಘಟಕಗಳಿಂದ ಕೂಡಿದೆ. ಅವುಗಳ ವಿಶಾಲ ವರ್ಣಪಟಲದ ಗುಣಲಕ್ಷಣಗಳಿಂದಾಗಿ, ಸಂಶ್ಲೇಷಿತ ಮತ್ತು ನೈಸರ್ಗಿಕ ಪಾಲಿಮರ್‌ಗಳು ದೈನಂದಿನ ಜೀವನದಲ್ಲಿ ಅಗತ್ಯ ಮತ್ತು ಸರ್ವತ್ರ ಪಾತ್ರಗಳನ್ನು ನಿರ್ವಹಿಸುತ್ತವೆ. ಪಾಲಿಮರ್‌ಗಳು ಪಾಲಿಸ್ಟೈರೀನ್‌ನಂತಹ ಪರಿಚಿತ ಸಿಂಥೆಟಿಕ್ಪ್ಲಾಸ್ಟಿಕ್‌ಗಳಿಂದ ಹಿಡಿದು ನೈಸರ್ಗಿಕ ಬಯೋಪಾಲಿಮರ್‌ಗಳವರೆಗೆ, ಜೈವಿಕ ರಚನೆ ಮತ್ತು ಕಾರ್ಯಕ್ಕೆ ಮೂಲಭೂತವಾದ ಪ್ರೋಟೀನ್‌ಗಳು. ಪಾಲಿಮರ್‌ಗಳು, ನೈಸರ್ಗಿಕ ಮತ್ತು ಸಂಶ್ಲೇಷಿತ ಎರಡೂ, ಮೊನೊಮರ್‌ಗಳು ಎಂದು ಕರೆಯಲ್ಪಡುವ ಅನೇಕ ಸಣ್ಣ ಅಣುಗಳ ಪಾಲಿಮರೀಕರಣದ ಮೂಲಕ ರಚಿಸಲ್ಪಡುತ್ತವೆ ಎಂದರು.ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಸ್.ಎಸ್.ಚೋರಗಿ, ಪ್ರಾಚಾರ್ಯ ಡಾ. ಎಸ್.ಬಿ.ರಾಠೋಡ, ನಮ್ಮ ಭಾರತ ದೇಶಕ್ಕೆ ವಿಜ್ಞಾನಿಗಳ ಕೊಡುಗೆ ಅಪಾರ ಎಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಹೇಳಿದರು. ಗ್ರಂಥಪಾಲಕ ಎಂ.ಕೆ. ಬಿರಾದಾರ,ಐ.ಕ್ಯೂ.ಎ.ಸಿ.ಯ ಸಂಯೋಜಕ ಡಾ.ಎಸ್.ಎಸ್.ದೇಸಾಯಿ, ದೈಹಿಕ ಶಿಕ್ಷಣ ನಿರ್ದೇಶಕ ಎಸ್ ಎಸ್ ಅವಟಿ, ಪ್ರೊ.ದಿವ್ಯಾಶ್ರೀ ಭೋಗಾರ, ಪ್ರೊ.ಆಕಾಶ ಜಂಗಮಶೆಟ್ಟಿ, ಪ್ರೊ. ಗುರುರಾಜ ಮುಚ್ಚಂಡಿ, ಪ್ರೊ.ಅಣ್ಣಾರಾಯ…

Read More

ವಿಜಯಪುರ: ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಸರ್ ಸಿ.ವಿ ರಾಮನ್ ಅವರು ಅತ್ಯಂತ ಪ್ರಮುಖರು. ಇವರು ರಾಮನ್ ಪರಿಣಾಮ ಎಂಬ ಹೊಸ ಆವಿಷ್ಕಾರ ನೀಡಿ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಬೆಳಕಿನ ಚದುರುವಿಕೆ ಎಂಬ ಹೊಸ ವೈಜ್ಞಾನಿಕ ಸಂಶೋಧನೆ ಮಾಡಿದ ಮೊದಲಿಗ ಎಂದು ಶೈಲಶ್ರೀ ನಾಯಕ ಅವರು ಅಭಿಪ್ರಾಯ ಪಟ್ಟರು.ಸ್ಥಳಿಯ ದೇವರಹಿಪ್ಪರಗಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಮಾತನಾಡಿದ ಅವರು, 1930ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ ರಾಮನರವರು ರಾಮನ್ ಪರಿಣಾಮ ಆವಿಷ್ಕಾರವನ್ನು ಗೌರವಿಸಲು ಪ್ರತಿವರ್ಷ ಫೆಬ್ರುವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ವಿಜ್ಞಾನ ವಿಷಯಕ್ಕೆ ಸಂಭಂದಿಸಿದ ಮಾದರಿ, ಚಿತ್ರಗಳನ್ನು ತಯಾರಿಸಿ ವಸ್ತು ಪ್ರದರ್ಶನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಶಾಲೆಯ ಹಿರಿಯ ಶಿಕ್ಷಕ ರಮೇಶ ತರಲಗಟ್ಟಿಯವರು ತಿಳಿಸಿದರು.ಶಾಲೆಯ ಶಿಕ್ಷಕರಾದ ಮಹೇಶ ಕಂಟಿಗೊಂಡ, ಮಧುಮತಿ,ರೇಖಾ ಹಜಾರೆ, ಎಲ್.ಎಸ್…

Read More

ಉಭಯ ಸದನಗಳಲ್ಲಿ ಗದ್ದಲ | ಕಲಾಪ ಮುಂದೂಡಿಕೆ | ಪಾಕ್ ಪರ ಘೋಷಣೆ ವಿವಾದ ಬೆಂಗಳೂರು: ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಸೈಯದ್‌ ನಾಸೀರ್‌ ಹುಸೇನ್‌ ಬೆಂಬಲಿಗರಿಂದ ವಿಧಾನಸೌಧ ಕಾರಿಡಾರ್‌ನಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕುರಿತ ವಿವಾದ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಭಾರಿ ಗದ್ದಲ, ಕೋಲಾಹಲ ಉಂಟು ಮಾಡಿದ್ದರಿಂದ ಕಲಾಪವನ್ನು ಎರಡು ಬಾರಿ, ಕೊನೆಗೆ ನಾಳೆಗೆ ಮುಂದೂಲಾಯಿತು.ಕಲಾಪ ಆರಂಭವಾಗುತ್ತಿದ್ದಂತೆಯೇ ಈ ವಿಚಾರ ಕುರಿತು ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪರಿಸ್ಥಿತಿಯನ್ನು ಅರಿತು ಮಾರ್ಷಲ್ ಗಳು ಸದನದ ಬಾವಿಗೆ ಧಾವಿಸಿದರು. ತೀವ್ರ ಗದ್ದಲ, ಕೋಲಾಹಲದಿಂದ ಸದನವನ್ನು ಎರಡು ಬಾರಿ ಮುಂದೂಡಲಾಗಿತ್ತು.ಗದ್ದಲದ ನಡುವೆ ಕೆಲ ಮಸೂದೆಗಳನ್ನು ಅಂಗೀಕರಿಸಲಾಯಿತು. ಭೋಜನ ವಿರಾಮದ ನಂತರವೂ ಗದ್ದಲ, ಕೋಲಾಹಲ ಮುಂದುವರೆದಿದ್ದರಿಂದ ಉಭಯ ಸದನಗಳನ್ನು ದಿನದ ಮಟ್ಟಿಗೆ ಮುಂಡೂಲಾಯಿತು. ಇದಕ್ಕೂ ಮುನ್ನ ಕೆಲ ಶಾಸಕರು ವಿಧಾನಸೌಧ ಬಳಿ ಪ್ರತಿಭಟನೆ…

Read More

ಮುದ್ದೇಬಿಹಾಳ: ವಿದ್ಯುತ್ ಕಾಮಗಾರಿ ಕೈಗೊಳ್ಳುತ್ತಿರುವದರಿಂದ ಫೆ.೨೯ ರಂದು ತಾಲೂಕಿನ ಹುಲ್ಲೂರ, ಕಾಶಿನಕುಂಟಿ, ಮಸೂತಿ, ಜಟ್ಟಗಿ, ಹುಲ್ಲೂರ ಎನೆ.ಜೆ.ವಾಯ್ ಮಾರ್ಗಗಳಲ್ಲಿ ಮತ್ತು ಮಾ.೧ ರಿಂದ ಮಾ.೫ ರವರೆಗೆ ಬೆಳಿಗ್ಗೆ ೮ ರಿಂದ ಸಂಜೆ ೬ ಗಂಟೆಯವರೆಗೆ ಹುಲ್ಲೂರು, ಕಾಶಿನಕುಂಟಿ, ಜಟ್ಟಗಿ ಹಾಗೂ ಹುಲ್ಲೂರ ಎನ್.ಜೆ.ವಾಯ್ ಮಾರ್ಗಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು ಸಾರ್ವಜನಿಕರು, ರೈತರು ಸಹಕರಿಸುವಂತೆ ಪ್ರಕಟಣೆಯ ಮೂಲಕ ಕೋರಲಾಗಿದೆ.

Read More

ಬಸವನಬಾಗೇವಾಡಿ: ವಿಜಯಪುರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಫೆ.29 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಅಖಂಡತಾಲೂಕಿನ ಸರ್ಕಾರಿ ನೌಕರ ಕ್ರೀಡಾಪಟುಗಳು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮಂಗನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ರಾಜ್ಯ ಸಭಾ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಾಶೀರ್ ಹುಸೇನ್ ಅವರ ವಿಜಯೋತ್ಸವದಲ್ಲಿ ಪಾಕಿಸ್ತಾನ ಎಂದು ಜಿಂದಾಬಾದ್ ಘೋಷಣೆ ಕೂಗಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಭಾಜಪ ಮಹಿಳಾ ಮೋರ್ಚಾ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ಬಲವಾಗಿ ಖಂಡಿಸಿದ್ದಾರೆ.ಈ ರೀತಿ ರಾಜ್ಯದಲ್ಲಿ ಪದೇ ಪದೇ ಘಟನೆಗಳು ನಡೆಯುತ್ತಿದ್ದರೂ ಕೂಡ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಪದೇ ಪದೇ ಇಂಥ ಘಟನೆಗಳು ನಡೆಯುತ್ತಿರುವುದು ರಾಜ್ಯದ ಜನ ತಲೆತಗ್ಗಿಸುವಂತಾಗಿದೆ. ಇಲ್ಲಿವರೆಗೂ ಕಾಂಗ್ರೆಸ್ ಪಕ್ಷದ ಮುಖಂಡರು ಈ ಘಟನೆಯನ್ನು ಬಲವಾಗಿ ಖಂಡಿಸಲು ಹಿಂದೇಟು ಹಾಕುತ್ತಿರುವ ಹಿಂದಿನ ಉದ್ದೇಶವೇನು ಎನ್ನುವುದು ರಾಜ್ಯದ ಜನರಿಗೆ ಅರ್ಥವಾಗಬೇಕಾಗಿದೆ. ಅಪರಾಧಿಗಳನ್ನು ತ್ವರಿತವಾಗಿ ಬಂಧಿಸಬೇಕು. ಇಂದು ವಿಧಾನಸಭೆಯಲ್ಲಿ ಸಚಿವರುಗಳಾದ ಪ್ರಿಯಾಂಕ ಖರ್ಗೆ ,ಕೃಷ್ಣ ಬೈರೇಗೌಡ, ಶಿವರಾಜ್ ತಂಗಡಿಗಿಯವರು ವರ್ತಿಸಿದ ರೀತಿ ನೋಡಿದರೆ ತಲೆತಗ್ಗಿಸುವಂತಾಗಿದೆ. ನಾಸಿರ್ ಹುಸೇನ್ ಅವರು ಪತ್ರಕರ್ತರಿಗೆ ಅವಾಚ್ಯವಾಗಿ ನಿಂದಿಸಿರುವರು ಖಂಡನೀಯವಾಗಿದೆ. ಯಾವುದೇ ಬುದ್ಧಿಜೀವಿಗಳು ಪ್ರಗತಿಪರರು ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ…

Read More

ಸಿಂದಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ಶಾಸಕ ರಮೇಶ ಭೂಸನೂರ ಆರೋಪ ಸಿಂದಗಿ: ಭಾರತದ ನೆಲದಲ್ಲಿ ಜನಿಸಿ ಇಲ್ಲಿ ಅನ್ನವನ್ನುಂಡು ಪಾಕಿಸ್ತಾನಕ್ಕೆ ಜೈ ಎನ್ನುವ ಹೇಡಿ ಸಂಸ್ಕೃತಿ ಮತ್ತು ಕಾಂಗ್ರೆಸ್ ದ್ವಿಮುಖ ನೀತಿಯನ್ನು ಬಲವಾಗಿ ಖಂಡಿಸುತ್ತೇವೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಧಾರಿತ ರಾಜಕೀಯ ಮಾಡುವುದಿಲ್ಲ ಎಂದು ಹೇಳುವ ಶಾಸಕರು ನಿನ್ನೆ ನಡೆದ ಘಟನೆಯನ್ನು ಖಂಡಿಸಬೇಕಾಗಿತ್ತು. ಆದರೆ ಅದನ್ನು ಒಂದು ಧರ್ಮದ ಓಲೈಕೆಗಾಗಿ ದೇಶ ದ್ರೋಹವನ್ನು ಖಂಡಿಸದೆ ಇರುವುದು ಕೂಡ ದೇಶ ದ್ರೋಹವೇ ಸರಿ. ಕ್ಷೇತ್ರದ ಅಭಿವೃದ್ಧಿಗಾಗಿ ರೂ.೧೨೫ಕೋಟಿ ಅನುದಾನ ಮಂಜೂರು ಮಾಡಿದ್ದೇನೆ ಎಂದು ಹೇಳುವ ಶಾಸಕರು ಅದರ ಕುರಿತಾಗಿ ಒಂದಾದರೂ ದಾಖಲೆ ಒದಗಿಸಲಿ. ಅದನ್ನು ಬಿಟ್ಟು ಹಳೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದು ಹೊಸ ಬಾಟಲಿಯಲ್ಲಿ ಹಳೆಯ ಮದ್ಯ ಎನ್ನುವಂತಾಗಿದೆ ಎಂದು ಹರಿಹಾಯ್ದರು.ಎಸ್.ಸಿ.ಪಿ.ಟಿ ಮತ್ತು ಟಿ.ಎಸ್.ಪಿ ಅನುದಾನದ ಕ್ರಿಯಾಯೋಜನೆಯಲ್ಲಿ ೫ಕೋಟಿ ಬಿಡುಗಡೆಗೊಳಿಸಿ ೬೯ ಪಲಾನುಭವಿಗಳಿಗೆ ಟೆಂಡರ್ ಕರೆಯಲಾಗಿತ್ತು.…

Read More