Author: editor.udayarashmi@gmail.com

ವಿಜಯಪುರ: ಶನಿವಾರ ನಡೆದ ಎಸ್‌ಎಸ್‌ಎಲ್‌ಸಿ ವಿಜ್ಞಾನ ಪತ್ರಿಕೆಗೆ ಜಿಲ್ಲೆಯ ೧೨೭ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿದ್ದು, ಪರೀಕ್ಷೆಗೆ ನೋಂದಣಿಯಾದ ಒಟ್ಟು ೪೦,೯೫೫ ವಿದ್ಯಾರ್ಥಿಗಳಲ್ಲಿ ೪೦,೦೩೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೯೨೨ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಪ್ರಥಮ ಆದ್ಯತೆಯ ಮೇರೆಗೆ ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಆಸಕ್ತಿ ವಹಿಸಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ಸರಬರಾಜು ಕಾರ್ಯದಲ್ಲಿ ಪೈಪ್ ಲೈನ್, ಯಂತ್ರಗಳ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳು ಏನಾದರೂ ಇದ್ದರೆ, ತಕ್ಷಣವೇ ದುರಸ್ತಿಗೊಳಿಸಬೇಕು. ನೀರು ಸರಬರಾಜು ಸುಗಮವಾಗಿ ಸಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರುಕುಡಿಯುವ ನೀರು ಸರಬರಾಜು ಪ್ರಕ್ರಿಯೆಗೆ ಈ ಹಿಂದೆ ಸ್ಥಾಪಿಸಿದ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಿಗೆ ಚುನಾವಣೆ ಕಾರ್ಯಗಳ ಜೊತೆ ಜೊತೆಗೆ ಕುಡಿಯುವ ನೀರಿನ ಸರಬರಾಜು ಕಾರ್ಯದ ಮೇಲುಸ್ತುವಾರಿ ನಿರ್ವಹಿಸಲು ನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.ಸಾಧ್ಯವಾದಷ್ಟು ೭ ದಿನಗಳಿಗಿಂತಲು ಕಡಿಮೆ ಅವಧಿಗೆ ನಗರಕ್ಕೆ ಕುಡಿಯುವ ನೀರು ಸರಬರಾಜು ಕಾರ್ಯವನ್ನು ಮಾಡಬೇಕು. ಕುಡಿಯುವ ನೀರು ಪೂರೈಕೆಯ ಕಾರ್ಯದಲ್ಲಿ ವಿದ್ಯುತ್ ಪೂರೈಕೆ ಸತತವಾಗಿ ಇರುವಂತೆ, ಹಾಗೂ ವಿದ್ಯುತ್ ಕಡಿತಗೊಳಿಸದಂತೆ…

Read More

ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಕಾರ್ಯಗಳಿಗೆ ೧೮ ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆಗಿರುವ ಟಿ. ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ೧೯೮೬ ರನ್ವಯ ಯಾವುದೇ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ ೧೪ ವರ್ಷಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ಬಹು ವಿವಿಧ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಅಂದರೆ ಮಕ್ಕಳನ್ನು ಯಾವುದೇ ಚುಣಾವಣಾ ಪ್ರಚಾರದಲ್ಲಿ ಬಳಸದಂತೆ ಕರಪತ್ರ ಹಾಗೂ ಪೋಸ್ಟರ್ ಹಂಚಲು ಅಥವಾ ಘೋಷಣೆ ಕೊಗುವುದು, ಚುನಾವಣಾ ಸಭೆ, ಹೋಲ್ಡಿಂಗ್ ಕಟ್ಟುವುದು, ಪ್ರಚಾರ ವಾಹನದ ಮೇಲೆ ಮಕ್ಕಳನ್ನು ಕೂರಿಸುವುದು, ಒಟ್ಟಾರೆಯಾಗಿ ಪ್ರಚಾರ ಸಭೆಗಳಲ್ಲಿ ಮಕ್ಕಳನ್ನು ಬಳಸದಂತೆ ನಿರ್ದೇಶಿಸಲಾಗಿದೆ.ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ಕ್ಕೆ ಯಾವುದೇ ಪಕ್ಷಗಳು ಚುನಾವಣಾ ಮತ್ತು ಪ್ರಚಾರ ಕಾರ್ಯಗಳಲ್ಲಿ ೧೮ ವರ್ಷದೊಳಗಿನ ಮಕ್ಕಳನ್ನು ಬಳಸಿಕಳ್ಳದಂತೆ ಕ್ರಮವಹಿಸಲು ಹಾಗೂ ಉಲ್ಲಂಘನೆ ಕಂಡು…

Read More

ವಿಜಯಪುರ: ಲೋಕಸಭೆ ಚುನಾವಣೆ ಪಾರದರ್ಶಕವಾಗಿ ಮತ್ತು ಮುಕ್ತ, ನ್ಯಾಯಸಮ್ಮತವಾಗಿ ಚುನಾವಣಾ ಆಯೋಗದ ನಿಯಮಾನುಸಾರ ಜರುಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಚಾಚು ತಪ್ಪದೆ ತಮಗೆ ವಹಿಸಿರುವ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಲಾರಿ ಟಿ.ಭೂಬಾಲನ್ ಸೂಚಿಸಿದರು.ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ನೊಡಲ ಅಧಿಕಾರಿಗಳೊಂದಿಗೆ ವಿಡೀಯೋ ಸಂವಾದ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಚೆಕ್‌ಪೋಸ್ಟಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ೨೪*೭ ಸಿಸಿ ಕ್ಯಾಮಾರಗಳು ಕಾರ್ಯ ನಿರ್ವಹಿಸುತ್ತಿರಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಕ್ರಮ ಹಣ ಸಾಗಾಟ ಮತ್ತು ಉಚಿತ ಉಡುಗರೆ (ಫ್ರೀಬೀಸ್) ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಬೇಕು. ಹಾಗೂ ಚೆಕ್‌ಪೋಸ್ಟ್ ಗಳಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಚುನಾವಣೆ ನೀತಿ ಸಂಹಿತೆಯನ್ನು ಮೀರಿದ ದೂರುಗಳು ಸಿ-ವಿಜಿಲ್ ಆ್ಯಪ್‌ನಲ್ಲಿ ದಾಖಲಾದರೆ ೧೦೦ ನಿಮಿಷದ ಒಳಗಡೆ ಅದನು ಪರಿಹರಿಸಲು…

Read More

“ಪ್ರಬುದ್ಧ ಮನಸ್ಸು ಪ್ರಭುದ್ಧ ಸಮಾಜ”- ವಿವೇಕಾನಂದ. ಎಚ್.ಕೆ. ಬೆಂಗಳೂರು ಕಂದ ನೀನು ಇಂದಿನಿಂದ 18 ವರ್ಷ ತುಂಬಿದ ಕಾರಣಕ್ಕಾಗಿ ಈ ದೇಶದ ಒಬ್ಬ ಪ್ರಜೆಯಾಗಿ ಗುರುತಿಸಿಕೊಳ್ಳಬೇಕಾಗಿದೆ. ಈ ದೇಶದ ಎಲ್ಲಾ ಹಕ್ಕು ಮತ್ತು ಕರ್ತವ್ಯಗಳು ನಿನಗೆ ದೊರೆಯುತ್ತದೆ. ಅಷ್ಟೇ ಅಲ್ಲ ನೀನು ಒಬ್ಬ ಜವಾಬ್ದಾರಿಯುತ ನಾಗರೀಕನು, ಮತದಾರರನ್ನು ಸಹ ಆಗುತ್ತಿರುವೆ..ಈ ಸಂದರ್ಭದಲ್ಲಿ ಒಬ್ಬ ತಂದೆಯಾಗಿ ನನಗೆ ಒಂದು ಕಡೆ ಹೆಮ್ಮೆ, ಇನ್ನೊಂದು ಕಡೆ ಆತಂಕವಾಗುತ್ತಿದೆ. ಮಗನೇ, ಈ 18 ವರ್ಷಗಳು ನೀನು ನನ್ನ ಕಣ್ಣಳತೆಯ ಮಿತಿಯಲ್ಲಿಯೇ ಬೆಳೆದಿರುವೆ. ಏಕೆಂದರೆ ಮಕ್ಕಳೆಂದರೆ ಅದು ತಂದೆ ತಾಯಿಯ ದೇಹದ ಮುಂದುವರಿದ ಭಾಗ. ಅದಕ್ಕೆ ಎಷ್ಟೇ ಪ್ರತ್ಯೇಕ ಅಸ್ತಿತ್ವವಿದ್ದರೂ ಮೂಲ ಮಾತ್ರ ತಂದೆ ತಾಯಿಯ ದೇಹದ ಮುಂದಿನ ಬೆಳವಣಿಗೆಯಾಗಿಯೇ ಗುರುತಿಸಲ್ಪಡುತ್ತದೆ ಮತ್ತು ಅದು ಅನುವಂಶಿಕವಾಗಿ ಬೆಳೆಯುತ್ತಿರುತ್ತದೆ..ಇಂತಹ ಸಂದರ್ಭದಲ್ಲಿ ನೀನು ನನ್ನ ಮಗ ಎನ್ನುವುದಕ್ಕಿಂತ ಹೆಚ್ಚಾಗಿ ಇನ್ನು ಮುಂದೆ ನಿಮ್ಮ ಅಪ್ಪ ನಾನಾಗುತ್ತೇನೆ. ನಿನಗೆ ಯೌವ್ವನ ಚಿಗುರುತ್ತಾ ಸಾಗುತ್ತಿದ್ದರೆ, ನನಗೆ ಮುಪ್ಪು ಹತ್ತಿರವಾಗುತ್ತಾ ಇರುತ್ತದೆ. ನಿನ್ನ ಆರೋಗ್ಯ,…

Read More

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಪ್ರಶಸ್ತಿಗಳ ವಿವರ:ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ:ಬಿ.ಎಂ.ಬಶೀರ್, ಮಂಗಳೂರು.ಗೊಮ್ಮಟ ಮಾಧ್ಯಮ ಪ್ರಶಸ್ತಿ:ಕುಂತಿನಾಥ ಶ್ರೀ ಕಲಮನಿ, ಬೆಳಗಾವಿಡಿವಿಜಿ ಪ್ರಶಸ್ತಿ:ವಿ.ವೆಂಕಟೇಶ್, ಬೆಂಗಳೂರುಸಿ.ಆರ್.ಕೃಷ್ಣರಾವ್(ಸಿಆರ್‌ಕೆ) ಪ್ರಶಸ್ತಿ:ಸಿ.ಜಿ.ಮಂಜುಳ, ಬೆಂಗಳೂರುಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ:ಮಲ್ಲಿಗೆ ಮಾಚಮ್ಮ, ಮೈಸೂರು.ಎಸ್.ವಿ.ಜಯಶೀಲರಾವ್ ಪ್ರಶಸ್ತಿ:ಮೋಹನ ಹೆಗಡೆ, ಹುಬ್ಬಳ್ಳಿಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ:ಸನತ್ ಕುಮಾರ್ ಬೆಳಗಲಿಕಿಡಿ ಶೇಷಪ್ಪ ಪ್ರಶಸ್ತಿ:ಬಿ.ಎಂ.ನಂದೀಶ್, ಹಾಸನ.ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ: ಆರ್.ಜಯಕುಮಾರ್, ಬೆಂಗಳೂರು.ಪಿ.ಆರ್.ರಾಮಯ್ಯ ಪ್ರಶಸ್ತಿ:ಸಿ.ಕೆ.ಮಹೇಂದ್ರ, ಮೈಸೂರು.ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ:ಅಶೋಕ್ ರಾಮ್, ರಾಮನಗರ.ರಾಜಶೇಖರಕೋಟಿ ಪ್ರಶಸ್ತಿ:ಶಶಿಕುಮಾರ್ ಬಿ ಕೆರೂರ, ಬಾಗಲಕೋಟೆಪಿ.ರಾಮಯ್ಯ ಪ್ರಶಸ್ತಿ:ಮನೋಹರ ಮಲ್ಲಾಡದ, ರಾಣೆಬೆನ್ನೂರುಮ.ರಾಮಮೂರ್ತಿ ಪ್ರಶಸ್ತಿ:ಎಚ್.ಕೆ.ಬಸವರಾಜು, ಬೆಂಗಳೂರು.ಗರುಡನಗಿರಿ ನಾಗರಾಜ್ ಪ್ರಶಸ್ತಿ:ಪ್ರಭುಲಿಂಗ ಶಾಸ್ತ್ರಿಮಠ, ಬೆಂಗಳೂರುಮಹದೇವ ಪ್ರಕಾಶ್ ಪ್ರಶಸ್ತಿ:ವಿಜಯಕುಮಾರ್ ವಾರದ, ಕಲಬುರಗಿಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ: ಎನ್.ಬಾಬು, ಭದ್ರಾವತಿ.ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ:ನಾಮದೇವ ವಾಟ್ಕರ್, ಯಾದಗಿರಿಎಂ.ನಾಗೇಂದ್ರರಾವ್…

Read More

ಚಡಚಣ: ಪಟ್ಟಣದಲ್ಲಿ ಶುಕ್ರವಾರ ರಂಗಪಂಚಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಬೆಳಗ್ಗೆ ವಿದ್ಯಾನಗರದ ಮಹಿಳಾ ಮಂಡಳಿ, ಯುವತಿಯರು, ಮಕ್ಕಳು ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಿಸಿದರು. ಮಹಿಳೆಯರು ಮನೆ ಮನೆಗೆ ತೆರಳಿ ತಮ್ಮ ಗೆಳತಿಯರಿಗೆ ಬಣ್ಣ ಹಚ್ಚಿ ರಂಗ ಪಂಚಮಿ ಹಬ್ಬ ಆಚರಿಸಿದರು.ಮಕ್ಕಳು ಬೆಳಗ್ಗೆಯಿಂದಲೇ ಒಬ್ಬರಿಗೊಬ್ಬರು ಬಣ್ಣ ಹಚ್ಚಿದರು. ಮತ್ತು ಪಿಚಕಾರಿಗಳಿಂದ ಬಣ್ಣ ಎರಚಿದರು. ನಂತರ ಮಧ್ಯಾಹ್ನ , ಮಕ್ಕಳು ಮತ್ತು ಮಹಿಳೆಯರು ಬಣ್ಣದೋಕುಳಿಯಲ್ಲಿ ಮಿಂದು ಸಂತೋಷದಿಂದ ಆಟವಾಡುತ್ತಾ ರಂಗೇರಿದ ಮುಖಗಳಿಂದ ರಂಗಪಂಚಮಿಯನ್ನು ಅದ್ಧೂರಿಯಾಗಿ ಆಚರಿಸಿದರು.

Read More

ಚುನಾವಣಾ ಬಾಂಡ್ ಮೂಲಕ ಕಾಂಗ್ರೆಸ್ & ಬಿಜೆಪಿಗೆ ತಲಾ ಐದು ಕೋಟಿ ರೂ. ದೇಣಿಗೆ ವಿಜಯಪುರ: ಹೊನ್ನಾವರದ ಮೀನುಗಾರರ ಪರಿಸ್ಥಿತಿ ಪ್ರತಿದಿನ ಶೋಚನಿಯವಾಗ್ತಿದೆ. ಈ ನಡುವೆ ಮೀನುಗಾರರ ವಿರೋಧದ ನಡುವೆಯೂ ಬಂದರು ನಿರ್ಮಾಣ ಮಾಡುತ್ತಿರುವ ಹೊನ್ನಾವರ ಖಾಸಗಿ ಬಂದರು ಲಿಮಿಟೆಡ್ (HPPL) ಸಂಸ್ಥೆಯ ಮಾತೃ ಸಂಸ್ಥೆ ಚುನಾವಣಾ ಬಾಂಡ್ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಗೆ ತಲಾ ಐದು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷಡಾ. ಗೌತಮ್ ಆರ್ ಚೌಧರಿ ಆರೋಪಿಸಿದ್ದಾರೆ.ಸುಪ್ರೀಂ ಕೋರ್ಟ್‌ ಕಟ್ಟು ನಿಟ್ಟಾಗಿ ಮಾಹಿತಿ ನೀಡುವಂತೆ ತಿಳಿಸಿದ ಬಳಿಕ ಯಾವೆಲ್ಲಾ ಪಕ್ಷಗಳಿಗೆ ದೇಣಿಗೆ ಸಂದಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.GVPR Engineers ಲಿಮಿಟೆಡ್ ಸಂಸ್ಥೆ ೨೦೨೪ ರ ಜನವರಿಯಲ್ಲಿ ನೀಡಿದ 16996, 16994, 16998, 16992, 16990, ಬಾಂಡ್‌ ಸಂಖ್ಯೆಯ ದೇಣಿಗೆಗಳು ಕಾಂಗ್ರೆಸ್ ಅಧ್ಯಕ್ಷರ ಖಾತೆಗೆ ಸೇರಿವೆ. ಈ ಕಂಪನಿ ಕಾಂಗ್ರೆಸ್‌ ಪಕ್ಷಕ್ಕೆ ದೇಣಿಗೆ ನೀಡಿದ ಬಳಿಕ ಮೀನುಗಾರರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಜೋರಾಗಿಯೇ ನಡೆಯುತ್ತಿದೆ. ಸ್ಥಳೀಯರು…

Read More

ಮಹಾ ದಾಸೋಹಿ ಶರಣಬಸವೇಶ್ವರ 57 ಜಾತ್ರಾಮಹೋತ್ಸವ ಹಾಗೂ 24 ನೇ ಮಹಾ ರಥೋತ್ಸವ ಕೆಂಭಾವಿ: ಪಟ್ಟಣದ ಮಹಾ ದಾಸೋಹಿ ಶರಣಬಸವೇಶ್ವರ 57 ಜಾತ್ರಾಮಹೋತ್ಸವ ಹಾಗೂ 24 ನೇ ಮಹಾ ರಥೋತ್ಸವದ ಅಂಗವಾಗಿ ರಥೋತ್ಸವದ ಪೂರ್ವಭಾವಿ ಶುಕ್ರವಾರ ಸಾಯಂಕಾಲ 6-30 ಕ್ಕೆ ನೂತನ ಮೊದಲ ಉಚ್ಚಾಯಿ ಉತ್ಸವ ಸಡಗರ ಸಂಭ್ರಮದೊಂದಿಗೆ ನೆರವೇರಿತು. ವಿಶೇಷವಾಗಿ ಮಹಿಳೆಯರೇ ಉಚ್ಚಾಯಿ ರಥೋತ್ಸವವನ್ನು ಎಳೆಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.ಇದಕ್ಕೂ ಮುನ್ನ ಪುರಾಣಿಕರಾದ ಗದುಗಿನ ಸಿದ್ದೇಶ್ವರ ಶಾಸ್ತ್ರಿಗಳು ಶಿವರಾತ್ರಿ ಜಾಗರಣೆಯೆಂದು ಪ್ರಾರಂಭವಾದ ಮಹಾ ದಾಸೋಹಿ ಶರಣಬಸವೇಶ್ವರ ಪುರಾಣ ಮಹಾಮಂಗಲಗೊಳಿಸಿದರು. ರಾಜಶೇಖರಸ್ವಾಮಿ ಹಿರೇಮಠ ಇವರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಿದರು. ಉಚ್ಚಾಯಿ ಉತ್ಸವದ ಸಾನ್ನಿಧ್ಯವನ್ನು ಷ ಬ್ರ ಚನ್ನಬಸವ ಶಿವಾಚಾರ್ಯರು ವಹಿಸಿ ಉಚ್ಚಾಯಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ಕಳಸಾರೋಹಣ ಆಗುತ್ತಿದ್ದಂತೆ ಸಾವಿರಾರು ಜನ ಮಹಿಳೆಯರು ಶರಣಬಸವೇಶ್ವರ ಮಹಾರಾಜಕೀ ಜೈ ಎಂದು, ಜಯಘೋಷಣೆ ಹಾಕುತ್ತಾ ಉಚ್ಚಾಯಿ ರಥ ಎಳೆದು ಪುನೀತರಾದರು.ದೇವಸ್ಥಾನ ಸಮಿತಿಯ ಪ್ರಮುಖರಾದ ಸಿದ್ದನಗೌಡ ಪೊಲೀಸ್ ಪಾಟೀಲ, ಬಾಪುಗೌಡ…

Read More

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿದೇವಿಯ ಜಾತ್ರಾ ಮಹೋತ್ಸವ ಮಾ.೩೦ ರಿಂದ ಪ್ರಾರಂಭಗೊಳ್ಳಲಿದೆ.ಮಾ.೩೦ ರಂದು ಬೆಳಿಗ್ಗೆ ೮ಕ್ಕೆ ಪ್ರಾರ್ಥನೆ, ೧೧-೨೧ ಕ್ಕೆ ನಾಗದೇವರ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದೆ. ನಂತರ ಕಲಾರೂಪಣ, ನಾಗಶಾಂತಿ, ಅಷ್ಠಕುಲ ನಾಗರ ಪೂಜೆ ನಂತರ ಮಹಾ ಪ್ರಸಾದ ಇರಲಿದೆ.ಮಾ.೩೧ ರಂದು ಮಂಗಲವಾದ್ಯ ಘೋಷ, ಪ್ರಾರ್ಥನೆ, ಧ್ವಜಾರೋಹಣ, ತೋರಣ ಮುಹೂರ್ತ, ಶುದ್ಧಿ ಹವನ, ಶ್ರೀಬಲಿ, ಕಂಕಣ ಬಂಧನ, ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರರಿಗೆ ನವಕಳಸಾಭಿಷೇಕ, ಪಂಚಾಮೃತ ಅಭಿಷೇಕ, ಕಲಿಕುಂಡ ಆರಾಧನಾ ಪೂಜೆ ಪ್ರಾರಂಭ, ಅಲಂಕಾರ, ನೈವೇದ್ಯ ಪೂಜೆ ಹಾಗೂ ಆರತಿ, ಸಂಜೆ ಆರಾಧನೆ, ನೂತನ ಭೋಜನ ಶಾಲೆಯಲ್ಲಿ ವಾಸ್ತು ವಿಧಾನ, ಶ್ರೀ ವಾಸ್ತು ರಾಕ್ಷೆÆÃಘ್ನ ಹವನ, ನವಗ್ರಹ ಶಾಂತಿ ಪೂಜೆ, ಮಂಗಳಾರುತಿ, ಮುತ್ತೆöÊದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿವೆ.ಏ.೧ ರಂದು ಮಂಗಲವಾದ್ಯಘೋಷ, ಕಳಸ, ಪಲ್ಲಕ್ಕಿ ಮತ್ತು ಮಹಾ ರಥದ ಹಗ್ಗದ ಮೆರವಣಿಗೆ, ಚಡಾವು ಸವಾಲು ಮಧ್ಯಾಹ್ನ ೨ಕ್ಕೆ ಧರ್ಮಸಭೆ ಮತ್ತು ಸನ್ಮಾನ ಸಮಾರಂಭ, ಸಂಜೆ ೫ ಗಂಟೆಗೆ ಮಹಾ…

Read More