ವಿಜಯಪುರ: ವಿಜಯಪುರ ನಗರದ ಮನಗೂಳಿ ಅಗಸಿ ಬಡಾವಣೆಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ೨೪ನೇ ದಿನ ಪೂರೈಸಿದೆ.
ಗುರುವಾರ ಹೋರಾಟಗಾರರಾದ ರೋಹಿತ ಮಲಕಣ್ಣನವರ ಹಾಗೂ ಮಂಜುನಾಥ ಶಿವಶರಣ ಅವರು ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡ ರವಿ ಕಾಖಂಡಕಿ ಮಾತನಾಡಿ, ಕಳೆದ ೨೪ ದಿನಗಳಿಂದ ಅಂಬೇಡ್ಕರ ಭವನ ಕಟ್ಟಲು ಜಾಗಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ಹಾಗೂ ಎರಡು ದಿನಗಳಿಂದ ಸರದಿ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡಾ ಅಧಿಕಾರಿಗಳು ದಿವ್ಯ ನಿರ್ಲಕ್ಷವಹಿಸಿದ್ದರಿಂದ ದಲಿತರ ಬದುಕು ಬೀದಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಅಂಬೇಡ್ಕರ್ ಭವನಕ್ಕೆ ಜಾಗ ನೀಡದಂತೆ ಒತ್ತಡ ಹಾಕುತ್ತಿರುವ ಪ್ರಭಾವಿಗಳ ಹೆಸರನ್ನು ಕೂಡಲೇ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುನೀಲ ಕಾಖಂಡಕಿ, ಬಾಬು ಶಿವಶರಣ, ಶ್ರೀಶೈಲ ಕಾಖಂಡಕಿ, ಸಚೀನ ಕಾಖಂಡಕಿ, ಬಸವಕುಮಾರ ಕಾಂಬಳೆ, ಬಸವರಾಜ ಕುಬಕಡ್ಡಿ, ಸುಭಾಸ ವಾಲಿಕಾರ, ರಾಜು ಕಾಖಂಡಕಿ, ಅರವಿಂದ ಕಾಖಂಡಕಿ, ಕೃಷ್ಣಾ ಚಲವಾದಿ, ಶೇಖರ ಕೂಡಗಿ, ಪ್ರತಾಪ ಚಿಕ್ಕಲಕಿ, ಆಶಾ ಮಾನೆ, ರುಕ್ಮಿಣಿ ಕಾಖಂಡಕಿ, ಕೀರ್ತಿ ಕಾಖಂಡಕಿ, ಸುನಂದಾ ಕಾಖಂಡಕಿ, ಮಲ್ಲಮ್ಮ ಚಲವಾದಿ, ಪ್ರದೀಪ ಚಲವಾದಿ, ಶಿವಪ್ಪ ಚಲವಾದಿ, ಶಿವರಾಜ ಸಾಣಕರ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

