Author: editor.udayarashmi@gmail.com

ದೇವರಹಿಪ್ಪರಗಿ: ಲೋಕಸಭೆಯ ಚುನಾವಣೆ ಅಂಗವಾಗಿ ಕೇಂದ್ರ ಮೀಸಲು ಪಡೆಯ ಯೋಧರು ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಪಥ ಸಂಚಲನ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.ಪಟ್ಟಣದಲ್ಲಿ ಮಂಗಳವಾರ ಸಾಯಂಕಾಲ ಲೋಕಸಭೆಯ ಚುನಾವಣೆಯ ಪೂರ್ವದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯದ ಅಂಗವಾಗಿ ಪಥ ಸಂಚಲನ ಕಾರ್ಯಕ್ರಮ ಆರಂಭಗೊಂಡಿತು. ಪಥ ಸಂಚಲನದಲ್ಲಿ ಕೇಂದ್ರ ಮೀಸಲು ಪಡೆಯ ೬೦ಕ್ಕೂ ಹೆಚ್ಚು ಯೋಧರು ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ೩೦ ಸಿಬ್ಬಂದಿಗಳು ಭಾಗವಹಿಸಿದ್ದರು.ಪಥ ಸಂಚಲನ ಪೊಲೀಸ್ ಠಾಣೆಯಿಂದ ಆರಂಭಗೊಂಡು ದಾನಮ್ಮನಕಳ್ಳಿ, ಮೊಹರೆ ಹಣಮಂತ್ರಾಯ ವೃತ್ತ, ಮೇನ್ ಬಜಾರ್ ಮಾರ್ಗ, ಪತ್ತಾರ ಕಟ್ಟೆ, ಬೇವಿನಕಟ್ಟಿ, ಕರಿದೇವರ ದೇವಸ್ಥಾನ, ಕನಕದಾಸ ವೃತ್ತ, ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತೆರಳಿ ಪುನಃ ಪೊಲೀಸ್ ಠಾಣೆ ತಲುಪಿತು.ಪಥ ಸಂಚಲನದಲ್ಲಿ ಫಸ್ಟ್ ಬಿಎನ್ ಸಿಆರ್‌ಪಿಎಫ್ ಆಫೀಸರ್ ಕಮಾಂಡೆಂಟ್ ಜಹಾಯ್ ಫಾನ್ಸಾ, ಪಿಎಸ್‌ಆಯ್ ಬಸವರಾಜ ತಿಪರಡ್ಡಿ, ಬಿ.ಬಿ.ಕೊಳ್ಳಿ, ಸಿಬ್ಬಂದಿ ಗುರು ಸಿಂಗೇ, ಸಂಜು ತಳವಾರ, ಬಿ.ಎಸ್.ಮೆಡೆದಾರ, ರಾಮನಗೌಡ ಬಿರಾದಾರ ಸೇರಿದಂತೆ ಸಿಬ್ಬಂದಿ ಇದ್ದರು.

Read More

ದೇವರಹಿಪ್ಪರಗಿ: ಪಟ್ಟಣದ ಮುರ್ತುಜಸಾಬ್ ತಾಂಬೋಳಿ ಇವರು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಅನುಮೋದನೆಯ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಶೀರಅಹ್ಮದ್ ಕಸಾಬ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More

ದೇವರಹಿಪ್ಪರಗಿ: ಮುಂಬರುವ ಲೋಕಸಭಾ ಚುನಾವಣಾ ಕರ್ತವ್ಯದಲ್ಲಿ ಗರ್ಭಿಣಿಯರು, ದೈಹಿಕ ನ್ಯೂನ್ಯತೆ, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ದೇವರಹಿಪ್ಪರಗಿ ತಾಲ್ಲೂಕು ವ್ಯಾಪ್ತಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿನಾಯಿತಿ ನೀಡುವದು ಹಾಗೂ ಚುನಾವಣೆಯಲ್ಲಿ ಸೌಲಭ್ಯಗಳ ಒದಗಿಸುವ ಕುರಿತಂತೆ ತಾಲ್ಲೂಕು ಶಿಕ್ಷಕರ ಸಂಘದಿಂದ ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಲಾಯಿತು.ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರದಂದು ಆಗಮಿಸಿದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಹಶೀಲ್ದಾರರನ್ನು ಕಂಡು, ಗಂಭೀರ ಕಾಯಿಲೆ, ವಿಕಲಚೇತನ, ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರು ಹಾಗೂ ಗರ್ಭಿಣಿ, ೨ವರ್ಷದ ಒಳಗಿನ ಮಗುವಿನ ತಾಯಂದಿರಾದ ಕೆಲವು ಶಿಕ್ಷಕಿಯರಿಗೆ ವಿನಾಯಿತಿ ನೀಡುವ ಕುರಿತು ಗಮನ ಸೆಳೆದರು. ಹಾಗೂ ಮತದಾನ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರು, ಊಟ, ಮಹಿಳಾ ಸಿಬ್ಬಂದಿಗೆ ಸೂಕ್ತವಸತಿ, ರಕ್ಷಣೆ, ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು.ಶಿಕ್ಷಕರ ಸಂಘದ ಬೇಡಿಕೆಗಳನ್ನು ಆಲಿಸಿದ ತಹಶೀಲ್ದಾರ ಕಳೆದ ಬೇಸಿಗೆ ರಜೆ ಅವಧಿಯಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಗಳಿಕೆ ರಜೆಯ ಆದೇಶಪತ್ರ ನೀಡಿದರು.ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ…

Read More

ದೇವರಹಿಪ್ಪರಗಿ: ಪರೀಕ್ಷಾರ್ಥಿಗಳು ಆತ್ಮವಿಶ್ವಾಸ, ನಿರ್ಭಯದಿಂದ ನಕಲುಮುಕ್ತ ಪರೀಕ್ಷೆ ಬರೆಯಲು ಪಾಲಕರು ಹಾಗೂ ಸಂಬಂಧಿಗಳು ಸಹಕಾರ ನೀಡಬೇಕು ಎಂದು ಅಧೀಕ್ಷಕ ಐ.ಎಸ್.ನರೂಣಿ ಹೇಳಿದರು.ಪಟ್ಟಣದ ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ಗಣಿತ ವಿಷಯ ಪರೀಕ್ಷೆಯ ಆರಂಭದಲ್ಲಿ ಆವರಣದಲ್ಲಿ ಸೇರಿದ ಪರೀಕ್ಷಾರ್ಥಿಗಳು ಹಾಗೂ ಪಾಲಕರನ್ನು ಉದ್ದೇಶಿಸಿ ಮಾತನಾಡಿದರು. ಈಗಾಗಲೇ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ೩ ಪೇಪರ್‌ಗಳನ್ನು ವಿದ್ಯಾರ್ಥಿಗಳು ಅತ್ಯಂತ ಆತ್ಮವಿಶ್ವಾಸದಿಂದ ಬರೆದಿದ್ದಾರೆ. ಅದರಂತೆ ಇಂದು ಸಹ ಗಣಿತ ವಿಷಯದ ಪತ್ರಿಕೆಯನ್ನು ಎದುರಿಸಲಿದ್ದಾರೆ. ಅವರಿಗೆ ಶುಭಕೋರಿ ಆವರಣದಿಂದ ತೆರಳಿ. ಯಾವುದೇ ಕಾರಣಕ್ಕೂ ನಕಲು ನೀಡಿ ಅವರ ಭವಿಷ್ಯಕ್ಕೆ ಅಡ್ಡಿಯಾಗಬೇಡಿ. ಈಗಾಗಲೇ ಶಿಕ್ಷಕವೃಂದ ವರ್ಷಪೂರ್ತಿ ಪಾಠಮಾಡಿ ಅವರನ್ನು ಸಜ್ಜುಗೊಳಿಸಿದೆ, ನೀವು ಅನಗತ್ಯವಾಗಿ ಪರೀಕ್ಷಾ ಸಮಯದಲ್ಲಿ ಅವರಿಗೆ ತೊಂದರೆ ನೀಡಿ ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ತರಬೇಡಿ ಹಾಗೂ ನಿಮ್ಮ ಸಮಯವನ್ನು ಬಿರು ಬಿಸಿಲಿನಲ್ಲಿ ವ್ಯರ್ಥ ಮಾಡಿಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದ ಆವರಣ ಹಾಗೂ ಸುತ್ತಲೂ ಇರುವಂತಿಲ್ಲ ಎಂದು ಕಟ್ಟುನಿಟ್ಟಿನ ಮಾಹಿತಿ ನೀಡಿ, ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದರು.ಮೋಬೈಲ್ ಸ್ವಾಧಿನಾಧಿಕಾರಿ…

Read More

ಸಿಂದಗಿ: ನಮ್ಮ ಮತ ನಮ್ಮ ಹಕ್ಕು ನಮ್ಮ ದೇಶದ ಅಭಿವೃದ್ಧಿ ಪಥದತ್ತ ಹೊಂದಬೇಕಾದರೆ ಪ್ರತಿಯೊಬ್ಬರು ಮತದಾನ ಮಾಡಿ ಎಂದು ತಾಪಂ ಇಓ ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಇಒ ಸುಬ್ರಮಣ್ಯ ಶರ್ಮಾ ಮನವಿ ಮಾಡಿಕೊಂಡರು.ಈ ವೇಳೆ ಪಿಆರ್‌ಎಡಿ ಎ.ಎ.ದುರ್ಗದ, ಕಛೇರಿ ವ್ಯವಸ್ಥಾಪಕಿ ಎ.ಹೆಚ್.ಯಾಳಗಿ, ನರೇಗಾ ಸಂಯೋಜಕ ಭೀಮರಾಯ ಚೌಧರಿ, ಬಸವರಾಜ ಹುಣಸಗಿ ಸೇರಿದಂತೆ ತಾಲೂಕು ಪಂಚಾಯತ್ ಸಿಬ್ಬಂದಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

Read More

ಸಿಂದಗಿ: ಬ್ಯಾಕೋಡ ಗ್ರಾಮದಿಂದ ಮಾಡಬಾಳ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಹೋಟಲ್ ಮತ್ತು ಮನೆಗಳನ್ನು ನಿರ್ಮಿಸಿದ್ದು, ಆ ರಸ್ತೆಯಲ್ಲಿ ಸಂಚರಿಸುವ ನೂರಾರು ರೈತರಿಗೆ ತೊಂದರೆ ಉಂಟಾಗುತ್ತಿದ್ದು, ಅವುಗಳನ್ನು ತೆರವುಗೊಳಿಸುವಂತೆ ಪರಶುರಾಮ ದೊಡಮನಿ ಆಗ್ರಹಿಸಿ ಶರಸ್ತೇದಾರ್ ಜಿ.ಎಸ್.ರೋಡಗಿ ಅವರ ಮೂಲಕ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಬ್ಯಾಕೋಡ ಗ್ರಾಮಸ್ಥರಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ತಾಲೂಕು ದಂಡಾಧಿಕಾರಿಗಳಿಗೆ ಮೂರು ಬಾರಿ ಮನವಿ ಸಲ್ಲಿಸಿದ್ದರು ಅವರು ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಆದಕಾರಣ ಸಧ್ಯ ರೈತರಿಂದ ಇದು ಕೊನಯ ಮನವಿಯನ್ನು ಸಲ್ಲಿಸುತ್ತಿದ್ದೇವೆ. ಮುಂದಿನ ೧೫ದಿನಗಳೊಳಗೆ ಇದಕ್ಕೆ ಕ್ರಮ ಕೈಗೊಳ್ಳದೇ ಹೋದರೆ ಸಿಂದಗಿಯಿಂದ ಕಲಕೇರಿಗೆ ಹೋಗುವ ಹೆದ್ದಾರಿ ಮಾರ್ಗವನ್ನು ತಡೆದು ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.ಇದೇ ಸಂದರ್ಭದಲ್ಲಿ ನಿಂಗಪ್ಪ ಭಾವಿಕಟ್ಟಿ, ರಾಯಪ್ಪ ಹಳಗೊಂಡ, ಶ್ರೀಶೈಲ ನಾಯ್ಕೋಡಿ, ಅಮರೇಶ ಹಳಗೊಂಡ, ದರೆಪ್ಪ ಭಾವಿಕಟ್ಟಿ, ಬಸವರಾಜ ತೆಗನೂರ, ದತ್ತು ನಾಗಾವಿ, ಅಣ್ಣಾಸಾಬ ನಧಾಫ್, ಚಂದ್ರು ಹರನಾಳ, ಯಲ್ಲಪ್ಪ ಚೋರಗಸ್ತಿ ಸೇರಿದಂತೆ ಗ್ರಾಮಸ್ಥರು…

Read More

ಸಿಂದಗಿ: ಮುಸ್ಲಿಂ ಬಾಂಧವರು ಈ ನಾಡಿನ ಜನರಿಗೆ ಸಮೃದ್ಧಿಯಾಗಿ ಮಳೆ, ಬೆಳೆ, ಅರೋಗ್ಯ ಹಾಗೂ ನೆಮ್ಮದಿ ಬದುಕನ್ನು ಸಾಗಿಸಲು ಆಶೀರ್ವದಿಸಲಿ ಎಂದು ಪ್ರಾರ್ಥಿಸಿ ಪರಮಾತ್ಮನ ಹೆಸರಿನಲ್ಲಿ ತಿಂಗಳ ಪೂರ್ತಿ ಅನ್ನ ನೀರಿಲ್ಲದೆ ಉಪವಾಸ ಮಾಡುತ್ತಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬವಾದ ರಮಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತಿರುವ ರೋಜದಾರ ಜನರಿಗೆ ಹಮ್ಮಿಕೊಂಡ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಮಜಾನ್ ಹಬ್ಬದ ದಿನದಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಸಹ ಹೊಸ ಬಟ್ಟೆ ಧರಿಸಿ ಪ್ರಾರ್ಥನೆ ಮಾಡಿ ಬೇರೆ ಬೇರೆ ಸಮುದಾಯದ ವ್ಯಕ್ತಿಗಳನ್ನು ಮನೆಗೆ ಕರೆದುಕೊಂಡು ಹೋಗಿ ಸಿಹಿ ಸುರ್ಕುಂಬ್ ಕೂಡಿಸಿ ಭಾವೈಕ್ಯತೆಯಿಂದ ಹಬ್ಬವನ್ನು ಆಚರಣೆ ಮಾಡಿ ಬಡವರಿಗೆ ದಾನ(ಜಾಕಾತ) ಮಾಡುತ್ತಿರುವುದು ಅವರ ಹಾರೈಕೆ ಪರಮೇಶ್ವರ ಕಲ್ಪಿಸಿಕೊಡಲಿ ಎಂದು ಹಾರೈಸುತ್ತೇನೆ ಎಂದರು.ಈ ವೇಳೆ ಮಾಜಿ ಶಾಸಕ ಶರಣಪ್ಪ ಸುಣಗಾರ, ಡಾ.ಚನ್ನವೀರ ಮನಗೂಳಿ, ಡಾ.ಶಾಂತವೀರ ಮನಗೂಳಿ, ಎಸ್.ಎಂ.ಪಾಟೀಲ್ ಗಣಿಹಾರ್, ಅಶೋಕ ವಾರದ, ಸಾಧಿಕ ಸುಂಬಡ್, ನೂರಅಹಮದ್ ಅತ್ತಾರ,…

Read More

ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಸಂಸದ ಜಿಗಜಿಣಗಿ ಭರವಸೆ ವಿಜಯಪುರ: ಜೆಡಿಎಸ್ ಕಚೇರಿ ಭೇಟಿ ನೀಡಿದ್ದು ಹಾಗೂ ಜೆಡಿಎಸ್ ಕಾರ್ಯಕರ್ತರ ಜೊತೆ ಬೆರೆತಿರುವುದು ಮತ್ತೆ ಮಾತೃ ಪಕ್ಷಕ್ಕೆ ಬಂದಂತಹ ಅನುಭವ ಆಗುತ್ತಿದೆ ಎಂದು ಸಂಸದ ವಿಜಯಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.ಮಂಗಳವಾರ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್.ಪಟೇಲ ಅವರ ಅಡಿಯಲ್ಲಿ ಬೆಳೆದು ಈ ಮಟ್ಟಕ್ಕೆ ಬಂದಿದ್ದೇನೆ. ಈಗ ಜೆಡಿಎಸ್ ಎನ್‌ಡಿಎ ಒಕ್ಕೂಟಕ್ಕೆ ಸೇರ್ಪಡೆಯಾಗಿರುವದರಿಂದ ಜೆಡಿಎಸ್-ಬಿಜೆಪಿ ಕಾರ್ಯಕರ್ತರನ್ನು ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಆಶ್ವಾಸನೆ ನೀಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ ಎರಡು ಪಕ್ಷಗಳ ನಾಯಕರು ಮುಖಂಡರು, ಕಾರ್ಯಕರ್ತರು ಒಂದು ತಂಡವಾಗಿ ಕೆಲಸ ಮಾಡಿ ಪರಸ್ಪರ ಸಮನ್ವಯ ಸಾಧಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕಾರ್ಯವಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆಮ್ಮೊ ಪ್ರಧಾನಿಯಾಗಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ ಬಿಜೆಪಿ ಜೊತೆ ಕೈ ಜೋಡಿಸಿದ್ದು, ಮೋದಿ ಅವರ ಆಡಳಿತದ…

Read More

ಮುದ್ದೇಬಿಹಾಳ: ತಾಲೂಕಿನ ಗೋನಾಳ ಗ್ರಾಮದಲ್ಲಿ ರಸ್ತೆಗಳ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸದೇ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ನ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವದಾಗಿ ತಾಲೂಕಿನ ಗೋನಾಳ ಗ್ರಾಮದ ರೈತ ಪರೂತಯ್ಯ ಹಿರೇಮಠ ಎಚ್ಚರಿಸಿದರು.ಕಾಮಗಾರಿಯ ಫೋಟೋ ಉದಯರಶ್ಮಿ ನ್ಯೂಸ್ ಗೆ ನೀಡಿ ತಮ್ಮ ಅಳಲನ್ನು ತೋಡಿಕೊಂಡ ಅವರು, ತಾಲೂಕಿನ ಗೋನಾಳ ಎಸ್.ಎಚ್.ಗ್ರಾಮದಲ್ಲಿ ನಿರ್ಮಿಸುತ್ತಿರುವ ರಸ್ತೆಗೆ ನಮ್ಮದು ಸಂಪೂರ್ಣ ತಕರಾರು ಇದೆ. ಮಳೆಗಾಲದಲ್ಲಿ ರಸ್ತೆಯ ಮೇಲಿಂದ ಹರಿದು ಬರುವ ಅಪಾರ ಪ್ರಮಾಣದ ನೀರು, ಮತ್ತು ಗ್ರಾಮದ ಕೆಲ ಮನೆಗಳಿಂದ ಬರುವ ಕೊಳಕು ನೀರು ನಮ್ಮ ಮತ್ತು ಇನ್ನೀತರ ರೈತರ ಹೊಲಗಳಿಗೆ ನುಗ್ಗಿ ಮುಂದೆ ಸರಾಗವಾಗಿ ಹರಿಯಲು ಯಾವುದೇ ಚರಂಡಿಯ ವ್ಯವಸ್ಥೆ ಇಲ್ಲದಿರುವದರಿಂದ, ತಿಂಗಳಾನುಗಟ್ಟಲೆ ವ್ಯವಸಾಯ ಮಾಡಲು ಸಾಧ್ಯವಾಗದಷ್ಟು ನಿಂತು ಹಲವು ರೈತರಿಗೆ ತುಂಬಿಬಾರದ ಹಾನಿಯಾಗುತ್ತಿದೆ. ಈ ಸಮಸ್ಯೆ ಕೆಲ ವರ್ಷಗಳ ಹಿಂದೆ ಇದೇ ರಸ್ತೆ ನಿರ್ಮಿಸಿದಾಗಲೇ…

Read More

‘ಪರಿವಾರವಾದಿಗಳು’ & ‘ಭ್ರಷ್ಟಾಚಾರಿಗಳ’ ಮೈತ್ರಿ l.N.D.I.A | 12 ಲಕ್ಷ ಕೋಟಿ ರೂ. ಹಗರಣದ ಕಾಂಗ್ರೆಸ್ | ಅಮಿತ್ ಶಾ ಟೀಕೆ ಬೆಂಗಳೂರು: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ‘400 ಪಾರ್’ (400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ) ಗುರಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಪಕ್ಷದ ಹಿರಿಯ ನಾಯಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಜೊತೆ ಇಂಡಿಯಾ ಬ್ಲಾಕ್ ನ್ನು ಹೋಲಿಸಲು ಸಾಧ್ಯವೇ ಇಲ್ಲ. ಇಂಡಿಯಾ ಬ್ಲಾಕ್ ‘ಪರಿವಾರವಾದಿಗಳು’ (ವಂಶ ರಾಜಕೀಯ ಕುಟುಂಬಗಳು) ಮತ್ತು ‘ಭ್ರಷ್ಟಾಚಾರಿಗಳ’ (ಭ್ರಷ್ಟರು) ಮೈತ್ರಿ ಎಂದು ಬಣ್ಣಿಸಿದ್ದಾರೆ.ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಭಾಗಗಳ ‘ಶಕ್ತಿ ಕೇಂದ್ರ’ (3-5 ಬೂತ್‌ಗಳ ಸಾಮೂಹಿಕ) ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು.ಕರ್ನಾಟಕದಲ್ಲಿ ಬಿಜೆಪಿ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಮಿತ್…

Read More