Author: editor.udayarashmi@gmail.com

ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಅವರ ೭ ವರ್ಷದ ಸುಪುತ್ರ ಮೊಹಮ್ಮದ್ ಜುಬೇರ ನಾಡಿನ ಒಳಿತಿಗಾಗಿ ದೊಡ್ಡವರಂತೆ ಕಟ್ಟುನಿಟ್ಟಾಗಿ ತನ್ನ ಮೊದಲನೆಯ ವರ್ಷದ ಉಪವಾಸವನ್ನು ಆಚರಿಸಿ, ಕುಟುಂಬದ ಸದಸ್ಯರ ಪ್ರೀತಿಗೆ ಪಾತ್ರನಾಗಿದ್ದಾನೆ.

Read More

ಸಿಂದಗಿ: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿ ಮತ ಕೇಳುತ್ತಿರುವ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರ ವಿರುದ್ದ ಕಾಂಗ್ರೇಸ್ ವಕ್ತಾರ ರಾಜಶೇಖರ ಕೂಚಬಾಳ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಖಾಸಗಿ ಹೊಟೇಲನಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಹಾಗೂ ರಮೇಶ ಜಿಗಜಿಣಗಿ ಇವರಿಬ್ಬರನ್ನು ಸಮಾಜದ ಎರಡು ಕಣ್ಣುಗಳಾಗಿ ಭಾವಿಸಲಾಗುತ್ತದೆ. ಆದರೆ ರಮೇಶ ಜಿಗಜಿಣಗಿ ಅವರು ೩೦ವರ್ಷಗಳ ಕಾಲ ಸಂಸತ್ತಿನಲ್ಲಿದ್ದು ರಾಜಕೀಯ ಮಾಡಿದ ಅವರು ಇಂದು ಪ್ರಧಾನ ಮಂತ್ರಿಯ ಹುದ್ದೆಗೆ ಪೈಪೋಟಿ ಮಾಡುವ ವ್ಯಕ್ತಿತ್ವವುಳ್ಳವರಾಗಬೇಕಿತ್ತು, ಆದರೆ ನಮಗ್ ಯಾರ್ ಮತ ಹಾಕ್ತಾರ್ ಮೋದಿಗೆ ಮತ್ ಹಾಕ್ತಾರ್ ಎನ್ನುವುದು ಅತ್ಯಂತ ಬಾಲೀಶವಾಗಿದೆ. ಏಕೆಂದರೆ ಮೋದಿ ಸಂಸತ್ತಿಗೆ ಪಾದಾರ್ಪಣೆ ಮಾಡುವ ಮೊದಲು ೧೫ವರ್ಷಗಳ ಕಾಲ ಸಂಸದರಾಗಿ ರಾಜಕೀಯ ಅನುಭವಿಕರು ತಮ್ಮ ಆತ್ಮವಂಚನೆ ಮಾಡಿಕೊಂಡು ಈ ಮಾತನ್ನು ಹೇಳುತ್ತಿದ್ದಾರೆ. ಅಧಿಕಾರದ ಆಸೆಗಾಗಿ ತಮ್ಮ ಸ್ವಾಭಿಮಾನ ಬಿಟ್ಟು ಮಾತನಾಡುವುದಷ್ಟೇ ಅಲ್ಲದೇ ದಲಿತರ ಆಶೋತ್ತರಗಳನ್ನು ಕೆಣಕುತ್ತಿದ್ದಾರೆ.ಸುಮಾರು ೩೦ ವರ್ಷಗಳ ಕಾಲ ಸಂಸತ್ತಿನಲ್ಲಿದ್ದು, ಒಂದೇ ಒಂದು…

Read More

ಸಿಂದಗಿ: ಪಟ್ಟಣದ ಪಿ.ಇ.ಎಸ್. ಕಾಲೇಜಿನ ದ್ವಿತೀಯ ಪಿ.ಯು.ಸಿ. ಫಲಿತಾಂಶವು ಶೇ. ೧೦೦ ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು ೩೦೮ ವಿದ್ಯಾರ್ಥಿಗಳಲ್ಲಿ ೧೧೭ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೧೬೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೧೭ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ೫ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ಕಲಾ ವಿಭಾಗದಲ್ಲಿ ಕು. ಅಮೇರಾಕೌಸರ್ ತರಫದಾರ ೫೮೬ (೯೭.೬೬%) ಪ್ರಥಮ, ಕು. ಮಹೇಶ ಚಂದಾನವರ ೫೮೪ (೯೭.೩೩%) ದ್ವಿತೀಯ, ಕು. ನಿಂಗಮ್ಮ ನಾಟೀಕಾರ ೫೭೮ (೯೬.೩೩%) ಹಾಗೂ ಸುಜಾತಾ ಗಡೆದ ೫೭೮ (೯೬.೩೩%) ತೃತೀಯ ಸ್ಥಾನ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಕು. ಭಾಗ್ಯಶ್ರೀ ಕಲ್ಲೂರ ೫೮೧ (೯೬.೮೩%) ಪ್ರಥಮ, ಕು. ದಾನಮ್ಮ ಅಗಸರ ೫೭೮ (೯೬.೩೩%) ದ್ವಿತೀಯ, ಸಾನಿಯಾ ತಾಂಬೋಳಿ ೫೭೬ (೯೬.೦೦%) ತೃತೀಯ ಸ್ಥಾನ ಪಡೆದಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಕು. ರಾಜೇಶ್ವರಿ ಪೂಜಾರಿ ೫೮೦ (೯೬.೬೬%) ಪ್ರಥಮ, ಕು. ಲಕ್ಷೀ ಬಿರಾದಾರ ೫೭೩ (೯೫.೫೦%) ದ್ವಿತೀಯ, ಕು. ಮಹಾನಂದ ಬಿರಾದಾರ ೫೭೨ (೯೫.೩೩%) ತೃತೀಯ ಸ್ಥಾನ ಪಡೆದಿದ್ದಾರೆ.ವಿವಿಧ ವಿಷಯಗಳಲ್ಲಿ…

Read More

ಸಿಂದಗಿ: ೨೦೨೩-೨೪ ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಕಲಾ ವಿಭಾಗದಲ್ಲಿ ಕುಮಾರಿ ಅಶ್ವಿನಿ ಅಲಬಾಳ ೫೮೮ (೯೮.೦೦%) ಪ್ರಥಮ ಸ್ಥಾನ, ಕುಮಾರಿ ಗಂಗಾಬಾಯಿ ಖೇಡಗಿ ೫೮೬ (೯೭.೬೬%), ದ್ವಿತೀಯ ಸ್ಥಾನ, ಕುಮಾರಿ ಭಾಗ್ಯವಂತಿ ಖರಾಬಿ ೫೮೨ (೯೭.೦೦%), ಕುಮಾರ ಭಗವಂತರಾಯ ಬಗಲಿ ೫೮೨ (೯೭.೦೦%), ಕುಮಾರಿ ಐಶ್ವರ್ಯ ಕರಗಾರ ೫೮೨ (೯೭.೦೦%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು ಕಲಾ ವಿಭಾಗದಲ್ಲಿ ೧೪೮ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಕುಮಾರಿ ಭಾರತಿ ಬಸ್ತಿಹಾಳ ೫೮೧ (೯೬.೮೩%), ಕುಮಾರ ಅರವಿಂದ ನಡುವಿನಮನಿ ೫೮೦ (೯೬.೬೬%) ಕುಮಾರ ಕಾರ್ತಿಕ ಪತ್ತಾರ ೫೭೬ (೯೬.೦೦%) ಸೇರಿದಂತೆ ಒಟ್ಟು ೬೨ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ವಿಜ್ಞಾನ…

Read More

ಸಿಂದಗಿ: ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶೇಕಡಾ ೯೫.೫೫ ರಷ್ಟು ದಾಖಲೆಯಾಗಿದೆ.ಕಾಲೇಜಿಗೆ ಪ್ರಥಮ ಸ್ಥಾನವನ್ನು ಕಲಾ ವಿಭಾಗದ ವಿಧ್ಯಾರ್ಥಿ ಬಸವರಾಜ ಚಪ್ಪರಮನಿ (೫೭೮) ೯೬.೩೩ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾನೆ. ಯಲ್ಲಾಲಿಂಗ ಹದಗಲ್ಲ (೫೭೩) ೯೫.೫% ಪಡೆದುಕೊಂಡು ದ್ವಿತೀಯ ಸ್ಥಾನ, ರಾಜಾಪಟೇಲ ಬಿರಾದಾರ (೫೭೨) ೯೫.೩೩ % ಅಂಕ ಪಡೆದುತೃತೀಯ ಸ್ಥಾನ, ಪೂಜಾ ಬಿರಾದಾರ (೫೭೧) ೯೫.೧೬ % ಅಂಕ ಪಡೆದುಕೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಮುತ್ತಪ್ಪ ಮೇಲಿನಮನಿ (೫೪೮) ೯೧.೩೩%, ವಿಜ್ಞಾನ ವಿಭಾಗದಲ್ಲಿ ಚೈತ್ರಾ ದಿಡ್ಡಿಮನಿ (೫೧೪) ೮೫.೬೬ ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಪರೀಕ್ಷೆಗೆ ಹಾಜರಾದ ಒಟ್ಟು ೪೩೧ ವಿದ್ಯಾರ್ಥಿಗಳಲ್ಲಿ ೪೦ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೨೫೩ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ, ೯೧ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಹಾಗೂ ೨೪ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಅಶೋಕ ಮನಗೂಳಿ ಮತ್ತು…

Read More

ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಮಠ್ಸ ಸಮೂಹ ಶಿಕ್ಷಣ ಸಂಸ್ಥೆಯ ಎಸ್.ಡಿ.ಇ. ಟ್ರಸ್ಟ್ನ ಅಡಿಯಲ್ಲಿ ನಡೆಯುತ್ತಿರುವ ಎಕ್ಸಪರ್ಟ ಪಿಯು ಸಾಯಿನ್ಸ್ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದಲ್ಲಿ ೮ನೇ ಸ್ಥಾನ ಗಿಟ್ಟಿಸುವ ಮೂಲಕ ಸಾಧನೆಗೈದಿದ್ದಾರೆ.ಸನ್ನಿಧಿ ಚೌಥಾಯಿ -೫೯೧ (೯೮.೫%) ಅಂಕಗಳನ್ನು ಪಡೆದು ರಾಜ್ಯಕ್ಕೆ ೮ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ದೇವರಾಜ .ಆರ್. ಮಾಲಿಪಾಟಿಲ್ ೫೮೮ (೯೮%) ಅಂಕಗಳನ್ನು ಪಡೆದು ಕಾಲೇಜಿಗೆ ದ್ವೀತಿಯ ಸ್ಥಾನ ಮತ್ತು ಸ್ನೇಹಾ ಅಮಾತಿಗೌಡ್ರ ಹಾಗೂ ಕುಮಾರ ದರ್ಶನ ಕಂಟಿಗೊಂಡ ತಲಾ ೫೮೬(೯೭.೬೬%) ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಗೈದಿದ್ದಾರೆ.ಸಂಸ್ಥೆಯಲ್ಲಿ ಒಟ್ಟು ೩೯೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶೇಕಡಾ ೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದು ಗಮನಸೆಳೆದಿದೆ. ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ ಸರ್ ಮತ್ತು ಕಾಲೇಜಿನ ಪ್ರಾಂಶುಪಾಲ ಇರ್ಫಾನ ಬಾಗವಾನ ಸೇರಿದಂತೆ ಎಲ್ಲ ಉಪನ್ಯಾಸಕರು ಮತ್ತು ಭೋಧಕೇತರ ಸಿಬ್ಬಂಧಿಗಳು ಹರ್ಷವ್ಯಕ್ತಪಡೆಸಿರುತ್ತಾರೆ.

Read More

ಮುದ್ದೇಬಿಹಾಳ: ತಾಲೂಕಿನ ಅಮರಗೋಳ ಗ್ರಾಮದ ದಲಿತರ ಏರಿಯಾಗಳಲ್ಲಿ ಸಕಾಲದಲ್ಲಿ ನೀರು ಬಿಡುತ್ತಿಲ್ಲ. ಈ ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸಿ ಗ್ರಾಮದ ನಿವಾಸಿಗಳು ಇಲ್ಲಿನ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಡಿಎಸ್‌ಎಸ್ ಮುಖಂಡ ಬಸವರಾಜ ಸಿದ್ದಾಪೂರ ಮಾತನಾಡಿ, ಗ್ರಾಮದ ಹತ್ತಿರದಲ್ಲೇ ಕೃಷ್ಣಾ ನದಿ ಇದ್ದರೂ ನಮ್ಮ ಬಾಂಧವರು ನೀರಿಗಾಗಿ ಪರದಾಡುತ್ತಿರುವದು ನೋವಿನ ಸಂಗತಿ. ಈ ಸಮಸ್ಯೆ ಹಲವು ವರ್ಷಗಳಿಂದ ತಲೆದೋರಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಕ್ರಮವಾಗಿಲ್ಲ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಸಮಸ್ಯೆ ಅನುಭವಿಸುತ್ತಿರುವ ಎಲ್ಲ ಕುಟುಂಬಗಳು ತಾಲೂಕು ಪಂಚಾಯತ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.ಗಂಗಪ್ಪ ಮಾದರ, ಅಭಿಲಾಷ ಮಾದರ, ಯಮನಪ್ಪ ಮಾದರ, ಶ್ರೀನಾಥ ಮಾದರ, ಸುರೇಶ ಮಾದರ, ಚಂದಪ್ಪ ಮಾದರ, ಶರಣವ್ವ ಮಾದರ, ದೇವಪ್ಪ ಮಾದರ, ಸಿದ್ದಪ್ಪ ಮಾದರ, ಬಸವಂತ ಮಾದರ ಸೇರಿದಂತೆ ಮತ್ತೀತರರು ಮನವಿ ಪತ್ರಕ್ಕೆ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

Read More

ವಿಜಯಪುರ: ಈ ಸಲದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಒಟ್ಟಾರೆ ಶೇ.೯೪.೮೯ ಫಲಿತಾಂಶ ಸಾಧಿಸುವ ಮೂಲಕ ರಾಜ್ಯದಲ್ಲೇ ವಿಜಯಪುರ ಜಿಲ್ಲೆ ರ್‍ಯಾಂಕಿಂಗ್ ಪಟ್ಟಿಯಲ್ಲಿ ೩ ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಇದೊಂದು ಅಭೂತಪೂರ್ವ ಶೈಕ್ಷಣಿಕ ಸಾಧನೆಯಾಗಿದ್ದು, ಉತ್ತಮ ಫಲಿತಾಂಶ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ಜಿಲ್ಲೆ ಉನ್ನತ ಸ್ಥಾನಕ್ಕೇರಲು ಕಾರಣಿಕರ್ತರಾದ ಪಿಯು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಶಿಕ್ಷಕರಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಶಿಕ್ಷಕರಿಗೆ ವಾಯುವ್ಯ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.ಇದೇ ವೇಳೆ ಎಲ್ಲರ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆ ಶೈಕ್ಷಣಿಕವಾಗಿ ಇನ್ನಷ್ಟು ಉನ್ನತ ಸ್ಥಾನಕ್ಕೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More

ವಿಜಯಪುರ: ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಒಟ್ಟು ಶೇ.೯೪.೮೯% ಫಲಿತಾಂಶ ಪಡೆಯುವ ಮೂಲಕ ವಿಜಯಪುರ ಜಿಲ್ಲೆ ರಾಜ್ಯದಲ್ಲೇ ಟಾಪ್ ಮೂರನೇ ಸ್ಥಾನಕ್ಕೆ ಏರಿದ್ದು ಇಡಿ ಜಿಲ್ಲೆಯೇ ಹೆಮ್ಮೆ ಪಡುವ ಶೈಕ್ಷಣಿಕ ಸಾಧನೆಯಾಗಿದೆ. ಕಲಾ ವಿಭಾಗದಲ್ಲಿ ರಾಜ್ಯಕ್ಕೆ ೧ ನೇ ರ‍್ಯಾಂಕ್ ಪಡೆದ ವೇದಾಂತ ನಾವಿ ಸೇರಿ ಜಿಲ್ಲೆಗೆ ಕೀರ್ತಿ ತಂದ ಎಲ್ಲಾ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳಿಗೆ, ಶ್ರಮಿಸಿದ ಎಲ್ಲಾ ಶಿಕ್ಷಕ ಬಳಗ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಯ ವಿದ್ಯಾರ್ಥಿ ವೇದಾಂತ ನಾವಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ಗಳಿಸಿರುವುದು ಇಡಿ ವಿಜಯಪುರಕ್ಕೆ ಹೆಮ್ಮೆಯ ಸಂಗತಿ. ಅಲ್ಲದೇ ಅವರಂತೆ ವಿವಿಧ ವಿಭಾಗಗಳಲ್ಲಿ ಜಿಲ್ಲೆಯ ಸಾಕಷ್ಟು ವಿದ್ಯಾರ್ಥಿಗಳು ಪರಿಶ್ರಮಪಟ್ಟು ಅತ್ಯುತ್ತಮ ಫಲಿತಾಂಶ ಪಡೆದು ಹೆತ್ತವರಿಗೆ, ಶಿಕ್ಷಕರಿಗೆ ಹಾಗೂ ಇಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರೆಲ್ಲರಿಗೂ ಹಾರ್ದಿಕ ಅಭಿನಂದನೆಗಳು.ಹಾಗೇ ಉತ್ತಮ ಫಲಿತಾಂಶ ಪಡೆಯಲಾಗದ,…

Read More

ಮುದ್ದೇಬಿಹಾಳ: ಕರ್ನಾಟಕ ಭೀಮ್ ಸೇನೆಯ ವತಿಯಿಂದ ಕೊಡಮಾಡುವ ಅಂಬೇಡ್ಕರ್ ರತ್ನ ಪ್ರಶಸ್ತಿಗೆ ಪತ್ರಕರ್ತ ಪರಶುರಾಮ ಕೊಣ್ಣೂರ, ತಾಲೂಕಿನ ಹೋರಾಟಗಾರರಾದ ಮಲ್ಲು ತಳವಾರ, ಹರೀಶ ನಾಟೆಕಾರ ಮತ್ತು ಸಿ.ಜೆ.ವಿಜಯಕರ ಇವರುಗಳನ್ನು ಆಯ್ಕೆ ಮಾಡಲಾಗಿದೆ.ನಿಡಗುಂದಿ ತಾಲೂಕಿನ ಚಿಮ್ಮಲಗಿ-೨ ಗ್ರಾಮದಲ್ಲಿ ನಡೆಯುವ ಡಾ.ಬಾಬಾಬ ಸಾಹೇಬ ಅಂಬೇಡ್ಕರ್ ಅವರ ಜಯಂತ್ಯುತ್ಸವ ಹಾಗೂ ಮಹಿಳಾ ಘಟಕ ಉದ್ಘಾಟನಾ ಸಂಮಾರಂಭದ ವೇಳೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸೇನೆಯ ಜಿಲ್ಲಾ ಉಪಾಧ್ಯಕ್ಷ ಯಲ್ಲಪ್ಪ ಚಲವಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More